2,000 ಮುಖಬೆಲೆ ನೋಟುಗಳ ರದ್ಧತಿ: ಪೆಟ್ರೋಲ್ ಬಂಕ್ಗಳಲ್ಲಿ ಹೆಚ್ಚಿದ ಜಗಳ
ಬೆಂಗಳೂರು, ಮೇ 23: ಭಾರತೀಯ ರಿಸರ್ವ್ ಬ್ಯಾಂಕ್ (RBI) 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರದಿಂದ ಪೆಟ್ರೋಲ್ ಬಂಕ್ಗಳ ಮಾಲೀಕರಲ್ಲಿ ಆತಂಕವನ್ನು ಉಂಟು ಮಾಡುತ್ತಿದೆ. ಅನೇಕ ಬಂಕ್ಗಳು ಎರಡು ಸಾವಿರ ಪಾವತಿಸುತ್ತಿರುವ ಬಗ್ಗೆ ಗ್ರಾಹಕರೊಂದಿಗೆ ಈಗ ಕಿತ್ತಾಡುತ್ತಿವೆ.
ಈ ಬಗ್ಗೆ ಕರ್ನಾಟಕದ ಪೆಟ್ರೋಲಿಯಂ ಡೀಲರ್ಗಳ ಒಕ್ಕೂಟವು ಆರ್ಬಿಐಗೆ ಪತ್ರವನ್ನು ರವಾನಿಸಿದ್ದು, ತೆರಿಗೆ ಅಧಿಕಾರಿಗಳ ಲೆನ್ಸ್ಗೆ ಒಳಪಡುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಕೇಂದ್ರ ಬ್ಯಾಂಕ್ನ ಈ ದಿಢೀರ್ ಕ್ರಮದ ನಂತರ ಉದ್ಭವಿಸಿದ ಅನಿರೀಕ್ಷಿತ ಅಡ್ಡ ಪರಿಣಾಮಗಳನ್ನು ಈ ಸಮಸ್ಯೆಯು ಮುನ್ನಲೆಗೆ ತಂದಿದೆ. ಇದು ಜನರನ್ನು ಬೆಚ್ಚಿಬೀಳಿಸಿದಲ್ಲದೆ 2016 ರ ನೋಟು ಅಮಾನ್ಯೀಕರಣದ ನೆನಪುಗಳನ್ನು ಮರಳಿ ತಂದಿದೆ.

ಯಲಹಂಕ ಸಮೀಪದ ಪೆಟ್ರೋಲ್ ಬಂಕ್ ಕ್ಯಾಷಿಯರ್ ಒಬ್ಬರು ಪ್ರವೇಶದ್ವಾರದಲ್ಲಿ ನಿಂತು ಪಾವತಿ ವಿಧಾನದ ಬಗ್ಗೆ ಕೇಳಿದಾಗ ಆಶ್ಚರ್ಯವಾಯಿತು ಎಂದು ವ್ಯಕ್ತಿಯೊಬ್ಬರು ಮಾಹಿತಿ ನೀಡಿ. ಡಿಜಿಟಲ್ನಲ್ಲಿ ಹಣ ಪಾವತಿಸುತ್ತೇನೆ ಎಂದು ಹೇಳಿದ ಬಳಿಕ ಅವರು ನನ್ನನ್ನು ಒಳಗೆ ಬಿಟ್ಟರು. ಒಂದೇ ನಿಮಿಷದಲ್ಲಿ ಕ್ಯಾಷಿಯರ್ ಗ್ರಾಹಕರ ಜತೆ ಜಗಳವಾಡಿದ್ದು, 2000 ರೂಪಾಯಿ ನೋಟು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದನ್ನು ನಾನು ನೋಡಿದೆ ಎಂದು ಡಿಎಚ್ ವರದಿ ಮಾಡಿದೆ.
ಇದೇ ಮಾದರಿ ಪೆಟ್ರೋಲ್ ಬಂಕ್ ಮಾಲೀಕರೊಂದಿಗೆ ಮಾತನಾಡುತ್ತಾ, ಅನೇಕ ಪೆಟ್ರೋಲ್ ಔಟ್ಲೆಟ್ಗಳಲ್ಲಿನ ಸಿಬ್ಬಂದಿಗಳು ಗ್ರಾಹಕರನ್ನು ದೊಡ್ಡ ನೋಟಿನೊಂದಿಗೆ (2,000 ರೂ) ಪಾವತಿಸಲು ಉದ್ದೇಶಿಸಿದ್ದೀರಾ ಎಂದು ಮೊದಲೇ ಕೇಳಲು ಪ್ರಾರಂಭಿಸಿದ್ದಾರೆ ಎಂದು ಹೇಳಿದರು. ಸರತಿ ಸಾಲುಗಳು ಸಾಮಾನ್ಯವಾಗಿ ಕಡಿಮೆಯಾಗಿರುವುದರಿಂದ ಮತ್ತು ವಹಿವಾಟುಗಳು ತ್ವರಿತವಾಗಿರುವುದರಿಂದ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಪೆಟ್ರೋಲ್ ಬಂಕ್ಗಳನ್ನೇ ಅತ್ಯುತ್ತಮ ಸ್ಥಳವೆಂದು ಜನರು ಪರಿಗಣಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ನಾಲ್ಕೈದು ತಿಂಗಳಿಗೊಮ್ಮೆ 2000 ರೂ. ನೋಟು ಹರಿವು ಹೆಚ್ಚಾಗಿರುವುದನ್ನು ನೋಡಿದ್ದೇವೆ. ಹೆಚ್ಚಿನವರು 200 ರೂ.ಗೆ ಇಂಧನ ಖರೀದಿಸುತ್ತಾರೆ. ಇಬ್ಬರು ನಮಗೆ 2000 ರೂ. ನೋಟು ಕೊಟ್ಟರೆ ಕ್ಯಾಶ್ ಕೌಂಟರ್ನಲ್ಲಿ ಎಲ್ಲಾ ಚಿಲ್ಲರೆ ಮುಗಿದು ಹೋಗುತ್ತದೆ. ಚಿಲ್ಲರೆ ನಿರಾಕರಿಸಿದರೆ ಇದು ಜಗಳಕ್ಕೆ ಕಾರಣವಾಗುತ್ತದೆ ಎಂದು ರಾಜಾನುಕುಂಟೆಯಲ್ಲಿ ಪೆಟ್ರೋಲ್ ಬಂಕ್ನ ಮಾಲೀಕರೊಬ್ಬರು ಹೇಳಿದರು.

ಅಖಿಲ ಕರ್ನಾಟಕ ಪೆಟ್ರೋಲಿಯಂ ಡೀಲರ್ಸ್ ಫೆಡರೇಶನ್ ಸೋಮವಾರ ಆರ್ಬಿಐ ಗವರ್ನರ್ಗೆ ಪತ್ರ ಬರೆದಿದ್ದು, ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ನಡೆದಂತಹ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಸಂಘದ ಅಧ್ಯಕ್ಷ ಕೆ.ಎಂ.ಬಸವೇಗೌಡ ಮಾತನಾಡಿ, ಇಂತಹ ಅಮಾನ್ಯಗೊಂಡ ನೋಟುಗಳ ವಹಿವಾಟಿಗೆ ಜೇನುನೊಣಗಳಂತೆ ಮುಗಿಬಿದ್ದ ಸಾರ್ವಜನಿಕರಿಂದ ಪೆಟ್ರೋಲ್ ವಿತರಕರು ಪರದಾಡುವಂತಾಗಿದೆ. ಅಂತಿಮವಾಗಿ ನಾವು ಸಾಮಾನ್ಯಕ್ಕಿಂತ ಹೆಚ್ಚಿನ 2,000 ನೋಟುಗಳನ್ನು ರವಾನೆ ಮಾಡಿದ್ದಕ್ಕಾಗಿ ತೆರಿಗೆ ಅಧಿಕಾರಿಗಳಿಂದ ನೋಟಿಸ್ಗಳನ್ನು ಸ್ವೀಕರಿಸಿದ್ದೇವೆ. ಪ್ರಸ್ತುತ ಸನ್ನಿವೇಶವು ಕಡಿಮೆಯಾಗಿಲ್ಲ ಎಂದರು.
ದೊಡ್ಡ ನೋಟು ಕಾನೂನುಬದ್ಧವಾಗಿ ಮುಂದುವರಿಯುತ್ತದೆ ಎಂದು ಆರ್ಬಿಐ ಸ್ಪಷ್ಟಪಡಿಸಿದ್ದರೂ, ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳು ಸಾರ್ವಜನಿಕರಲ್ಲಿ ಗೊಂದಲವನ್ನು ಸೃಷ್ಟಿಸಿವೆ. ಪರಿಣಾಮವಾಗಿ, ಅನೇಕರು ಅದನ್ನು ಸಾಧ್ಯವಾದಷ್ಟು ವೇಗವಾಗಿ 2,000 ರೂಪಾಯಿ ನೋಟುಗಳ ವಿನಿಮಯ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಸಂಘದ ಅಧ್ಯಕ್ಷ ಮಾತನಾಡಿ, ಗ್ರಾಹಕರೊಂದಿಗೆ ಜಗಳವಾಡಿ ಬೇಸತ್ತಿದ್ದೇವೆ. ಬಂಕ್ಗಳಲ್ಲಿ ಸಿಬ್ಬಂದಿ ಹಣ ನಿರಾಕರಿಸುವುದು ಹಾಗೂ ತೆರಿಗೆ ನೋಟಿಸ್ನಿಂದ ನಾವು ಆತಂಕಗೊಂಡಿದ್ದೇವೆ. ಆದರೆ ಇದು ಕಾನೂನುಬದ್ಧವಾಗಿರುವವರೆಗೆ ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಬೆಂಗಳೂರಿನ ಬಹುತೇಕ ರೀಟೇಲ್ ಸ್ಟೇಷನ್ಗಳು ಪ್ರತಿದಿನ ಸರಾಸರಿ 8 ರಿಂದ 10 ಲಕ್ಷ ರೂಪಾಯಿ ವಹಿವಾಟು ನಡೆಸುತ್ತವೆ. ಸುಮಾರು 60% ಪಾವತಿಗಳನ್ನು ಕಾರ್ಡ್ಗಳು ಅಥವಾ UPI ಮೂಲಕ ಮಾಡಲಾಗುತ್ತದೆ.
-
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
LPG Crisis: ಎಲ್ಪಿಜಿ ಬಿಕ್ಕಟ್ಟಿನ ಸುಳಿಯಲ್ಲಿ ಭಾರತದ ಪ್ರಮುಖ ನಗರಗಳು: ದರ್ಶಿನಿಗಳು ಬಂದ್, ಪಿಜಿಗಳಲ್ಲಿ ಮೆನು ಚೇಂಜ್ -
Cylinder Shortage: ರಾಜ್ಯದಲ್ಲಿ ಅನಿಲ ಪೂರೈಕೆ ಸಮಸ್ಯೆಗೆ ಮುಕ್ತಿ? ಸಚಿವ ಮುನಿಯಪ್ಪ ಮಹತ್ವ ಮಾಹಿತಿ -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ












Click it and Unblock the Notifications