ಫಿಶ್ ಮಾರ್ಕೆಟ್ ನಲ್ಲಿ ಚಿಕ್ಕೋಡಿ ಚಿಕ್ಕಮ್ಮಂದಿರ ಬಿಗ್ ಫೈಟ್!
ಬೆಂಗಳೂರು, ನವೆಂಬರ್ 11 : ಶಾಲೆಯಲ್ಲಿ ಮಕ್ಕಳು ಗಲಾಟೆ ಮಾಡುವಾಗ ಗದರಿಸುವ ಮೇಷ್ಟ್ರು ಮಕ್ಕಳಿಗೆ, ಇದನ್ನೇನು ಶಾಲೆ ಅಂತ ತಿಳಕೊಂಡಿದ್ದೀರೋ, ಫಿಶ್ ಮಾರ್ಕೆಟ್ ಅಂತ ತಿಳಕೊಂಡಿದ್ದೀರೋ ಅಂತ ಗದರುವುದನ್ನು ಬಹುಶಃ ಕನ್ನಡ ಶಾಲೆಯಲ್ಲಿ ಓದಿರುವ ಎಲ್ಲ ಮಕ್ಕಳೂ ಕೇಳಿರುತ್ತಾರೆ.
ಗಲಾಟೆ ನಡೆಯುವಾಗ ಅದನ್ನು ಫಿಶ್ ಮಾರುಕಟ್ಟೆಗೆ ಯಾರು, ಯಾಕೆ, ಯಾವ ಸಂದರ್ಭದಲ್ಲಿ ಹೋಲಿಸಿದರೋ ಬಲ್ಲವರಾರು? ಫಿಶ್ ಮಾರ್ಕೆಟ್ ಅಂದ್ರೆ ಗಲಾಟೆಯಾಗಲೇಬೇಕೆ? ಗೊತ್ತಿದ್ದವರು ದಯವಿಟ್ಟು ಸಂದರ್ಭ ಸಮೇತರಾಗಿ ವಿವರಿಸಿ. ಉತ್ತರಕ್ಕೆ 10 ಅಂಕಗಳು.

ಅದೇನೋ ಗೊತ್ತಿಲ್ಲ, ಆದರೆ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಊರಿನಲ್ಲಿ ಇಬ್ಬರು ಸೀರೆಯುಟ್ಟ ಮೀನು ಮಾರುವ ಮೀನಾಕ್ಷಿಗಳು, ಸೊಂಟಕ್ಕೆ ಸೀರೆ ಸಿಕ್ಕಿಸದೆ ಮೀನು ಮಾರುಕಟ್ಟೆಯಲ್ಲಿ ಶರಂಪರ ಜಗಳಾಡಿದ್ದಾರೆ. ಕುರುಪಿಯನ್ನು ಕೈಯಲ್ಲಿ ಹಿಡಿದು, ಕೊಚ್ಚಿಹಾಕುತ್ತೇನೆ ಅಂತೆಲ್ಲ ಬೈದಾಡಿಕೊಂಡಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಚಿಕ್ಕೋಡಿ ಚಿಕ್ಕಮ್ಮಂದಿರ ನಡುವೆ ಜಗಳ ಹುಟ್ಟಿಕೊಂಡಿದ್ದು ಮೀನು ಮಾರಾಟದ ಸ್ಥಳಕ್ಕಾಗಿ. ಕಾದಾಟ ಮಾತುಗಳಿಂದ ಶುರುವಾಗಿ, ಮರಾಠಿ ಭಾಷೆಯಲ್ಲಿ ಬೈಗುಳದಿಂದ ಮುಂದುವರೆದು, ಕೈಕೈ ಮಿಲಾಯಿಸಿ, ಕೊನೆಗೆ ಕುರುಪಿ (ಮಚ್ಚಿನಂಥ ಆಯುಧ)ಯನ್ನು ಹಿಡಿದುಕೊಂಡು ಕಾದಾಡಿದ್ದಾರೆ.
ಕುರುಪಿ ಹಿಡಿದು ಕಾದಾಡುವಾಗ ಇದ್ಯಾಕೋ ವಿಪರೀತಕ್ಕೆ ಹೋಗುತ್ತಿದೆಯೆಂದು ಒಬ್ಬಳು ಶಸ್ತ್ರಾಸ್ತ್ರವನ್ನು ಕೆಳಗಿಟ್ಟಿದ್ದಾಳೆ. ಅಲ್ಲಿದ್ದವರು ಅವರ ಜಗಳಕ್ಕೆ ಮಂಗಳ ಹಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಈ ಮಹಿಳಾ ಕದನ ಪರ್ವವನ್ನು ತಮ್ಮ ಮೊಬೈಲಿನಲ್ಲಿ ಸೆರೆಹಿಡಿದ್ದಾರೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications