ಮರಾಠಿ ಬಳಸಿದ್ದಕ್ಕೆ ಸ್ಪೈಸ್ ಏರ್ ಜೆಟ್ ಮೇಲೆ ಹರಿಹಾಯ್ದ ಕನ್ನಡಿಗರು
ಬೆಳಗಾವಿ, ನವೆಂಬರ್ 05 : ಬೆಳಗಾವಿಯು ಮಹಾರಾಷ್ಟ್ರದಲ್ಲಿದೆ ಎಂದು ಭಾವಿಸಿದಂತಿರುವ ಸ್ಪೈಸ್ ಏರ್ಲೈನ್ಸ್ ಸಂಸ್ಥೆಯ ವಿಮಾನವೊಂದು ಬೆಳಗಾವಿಯಲ್ಲಿ ಭೂಸ್ಪರ್ಷ ಮಾಡುವಾಗ ಮರಾಠಿ ಭಾಷೆಯಲ್ಲಿ ಸಂದೇಶ ಪ್ರಸಾರ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ನಿಲ್ದಾಣಗಳು ಬರುವ ಮುಂಚೆ ರಕ್ಷಣಾ ಸೂಚನೆಗಳನ್ನು, ನಿಲ್ದಾಣದ ಹೆಸರುಗಳನ್ನು ಹೇಳುವುದು ವಿಮಾನಗಳಲ್ಲಿ ಮಾಮೂಲಿ, ಸಾಮಾನ್ಯವಾಗಿ ಈ ಸಂದೇಶಗಳು ಇಂಗ್ಲೀಷ್, ಹಿಂದಿ ಹಾಗೂ ಸ್ಥಳೀಯ ಭಾಷೆಗಳಲ್ಲಿ ಇರುತ್ತವೆ ಆದರೆ ಸವೆಂಬರ್ 5 ರ ಭಾನುವಾರ ಬೆಳಗಾವಿಯಲ್ಲಿ ಭೂಸ್ಪರ್ಷ ಮಾಡಿದ ಸ್ಪೈಸ್ ಜೆಟ್ ವಿಮಾನವೊಂದು ನಿಲ್ದಾಣದಲ್ಲಿ ಇಳಿಯುವುದಕ್ಕೆ ಮುಂಚೆ ಮರಾಠಿಯಲ್ಲಿ ಧ್ವನಿ ಸಂದೇಶ ಬಿತ್ತರಿಸಿದೆ. ಇದರಿಂದ ಕುಪಿತಗೊಂಡ ಕನ್ನಡಿಗರು ವಿಮಾನ ಸಂಸ್ಥೆಯ ಮೇಲೆ ಹರಿಹಾಯ್ದ ಕಾರಣ ವಿಮಾನ ಸಂಸ್ಥೆಯು ಮರಾಠಿ ಭಾಷೆಯನ್ನು ಕೈಬಿಟ್ಟಿದೆ.

ಆದರೆ ಇದರಿಂದ ಸಂತುಷ್ಟಗೊಳ್ಳದ ಕನ್ನಡಪರ ಸಂಘಟನೆ ಸದಸ್ಯರು ಮರಾಠಿ ಭಾಷೆಯನ್ನು ಕೈಬಿಡುವುದಷ್ಟೆ ಅಲ್ಲ ಕನ್ನಡ ಭಾಷೆಯಲ್ಲಿ ಸಂದೇಶಗಳು ಬಿತ್ತರವಾಗುವಂತೆ ಮಾಡಬೇಕೆಂದು ಪಟ್ಟು ಹಿಡಿದಿವೆ.
'ಹಿಂದೆ ಯಾರ ಒತ್ತಡ ಇಲ್ಲದ ಹೊರತಾಗಿಯೂ ಮರಾಠಿ ಭಾಷೆಯಲ್ಲಿ ಸಂದೇಶಗಳನ್ನು ಪ್ರಸಾರ ಮಾಡುತ್ತಿದ್ದ ಸ್ಪೈಸ್ ಜೆಟ್ ಇದೀಗ ಕನ್ನಡ ಭಾಷೆಯಲ್ಲಿ ಸಂದೇಶ ಪ್ರಸಾರ ಮಾಡಿರೆಂದು ಸಂಘಟನೆಗಳು, ಪ್ರಯಾಣಿಕರು ಒತ್ತಾಯ ಮಾಡುತ್ತಿದ್ದರೂ ಸುಮ್ಮನಿರುವುದಕ್ಕೆ ಕಾರಣವೇನು' ಎನ್ನುತ್ತಿದ್ದಾರೆ ಕನ್ನಡಪರ ಸಂಘಟನೆಗಳ ಸದಸ್ಯರು.
ಕನ್ನಡದಲ್ಲಿ ಸಂದೇಶ ಪ್ರಸಾರ ಮಾಡದೇ ನಿರ್ಲಕ್ಷ್ಯ ಮಾಡಿದರೆ ಅದು ಭಾಷೆಗೆ ಮಾಡಿದ ಅವಮಾನವೆಂದು ಪರಿಗಣಿಸಿ ವಿಮಾನ ಸಂಸ್ಥೆಯ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಕನ್ನಡಪರ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.
ಸ್ಪೈಸ್ ಏರ್ಲೈನ್ಸ್ ಸಂಸ್ಥೆ ತಾನು ಮಾಡಿದ ತಪ್ಪಿನಿಂದ ಎಚ್ಚೆತ್ತುಕೊಂಡು ಕನ್ನಡದಲ್ಲಿ ಸ್ವಾಗತ ಸಂದೇಶ ಪ್ರಸಾರ ಮಾಡುತ್ತದೆಯೋ ಇಲ್ಲವೊ ಕಾದು ನೋಡಬೇಕು.
-
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ನಿಮ್ಮ ಮನೆಯ ಸೀಲಿಂಗ್ ಫ್ಯಾನ್ನಲ್ಲಿ ಧೂಳು ತುಂಬಿದೆಯೇ? ನಿಮಿಷಗಳಲ್ಲಿ ಸ್ವಚ್ಛಗೊಳಿಸಲು ಇಲ್ಲಿವೆ 'ಸೀಕ್ರೆಟ್' ಟಿಪ್ಸ್ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು












Click it and Unblock the Notifications