ಗೂಗಲ್ ಟಿಟಿಎಸ್ ನಲ್ಲಿ ಕನ್ನಡ ಧ್ವನಿ; ಬೆಳಗಾವಿ ಅಂಧನ ಸಾಧನೆ
ಬೆಳಗಾವಿ, ಆಗಸ್ಟ್ 31: ಅಂಧರು ಯಾವುದೇ ತೊಡಕಿಲ್ಲದೇ, ಸ್ವತಂತ್ರವಾಗಿ ಆಂಡ್ರಾಯ್ಡ್ ಫೋನ್ ಬಳಸಲು ನೆರವಾಗಲೆಂದು ಇರುವ ಗೂಗಲ್ ಟಿಟಿಎಸ್ ತಂತ್ರಾಂಶದಲ್ಲಿ ಕನ್ನಡ ಧ್ವನಿ ಸೇರಿಸಲು ಬೆಳಗಾವಿಯ ಅಂಧ ವ್ಯಕ್ತಿಯೊಬ್ಬರು ಕೈಗೊಂಡ ಅಭಿಯಾನ ಫಲ ನೀಡಿದೆ. ಇವರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆಯೂ ವ್ಯಕ್ತವಾಗಿದೆ.
ಗೂಗಲ್ ಟೆಕ್ಸ್ಟ್ ಟು ಸ್ಪೀಚ್ ತಂತ್ರಾಂಶದಲ್ಲಿ ಕನ್ನಡ ಭಾಷೆ, ಧ್ವನಿ ಸೇರಿಸಲು ಬೆಳಗಾವಿ ಬೈಲಹೊಂಗಲದ ದ್ವಿತೀಯ ದರ್ಜೆಯ ಲೆಕ್ಕ ಸಹಾಯಕ ಸಿದ್ದಲಿಂಗೇಶ್ವರ ಇಂಗಳಗಿ ಅವರು ಆನ್ ಲೈನ್ ನಲ್ಲಿ ಅಭಿಯಾನ ಆರಂಭಿಸಿದ್ದರು. ಚೇಂಜ್ ಡಾಟಾ ಆರ್ಗ್ ವೆಬ್ ತಾಣದಲ್ಲಿ ಪಿಟಿಶನ್ ಹಾಕಿದ್ದರು. ಅವರ ಈ ಅಭಿಯಾನಕ್ಕೆ ಇದೀಗ ಫಲ ಸಿಕ್ಕಿದೆ. ಕನ್ನಡ ಭಾಷೆಯನ್ನು ಕಿರುತಂತ್ರಾಂಶಕ್ಕೆ ಸೇರಿಸಲಾಗಿದೆ.
ಏನಿದು ಗೂಗಲ್ ಟಿಟಿಎಸ್: ಅಂಧರಿಗೆ ಆಂಡ್ರಾಯ್ಡ್ ಫೋನ್ ಪರದೆಯಲ್ಲಿ ಕಾಣುವ ಪಠ್ಯವನ್ನು ಇದು ಧ್ವನಿ ಮೂಲಕ ಓದಿ ಹೇಳುತ್ತದೆ. ಇದರಿಂದ ಅಂಧರು ಇತರರ ಸಹಾಯವಿಲ್ಲದೆ ಸ್ವತಂತ್ರವಾಗಿ ಆಂಡ್ರಾಯ್ಡ್ ಫೋನ್ ಬಳಸಬಹುದಾಗಿದೆ.

"2017ರಲ್ಲಿ ಈ ಕುರಿತು ಅಭಿಯಾನ ಆರಂಭಿಸಿದ್ದೆ. ಇಂಗ್ಲಿಷ್, ಹಿಂದಿ ಹಾಗೂ ವಿದೇಶಿ ಭಾಷೆ ಧ್ವನಿಗಳು ಮಾತ್ರ ಟಿಟಿಎಸ್ ನಲ್ಲಿದ್ದವು, ಅಲ್ಲಿ ಕನ್ನಡ ಭಾಷೆ ಬೇಕು ಎಂದು ನಡೆಸಿದ ಅಭಿಯಾನದಲ್ಲಿ ರಾಜ್ಯ, ಹೊರ ರಾಜ್ಯ, ಮತ್ತು ವಿದೇಶಗಳಿಂದ ಹಲವು ಮಂದಿ ಅಂಧರು ಪಾಲ್ಗೊಂಡು ಬೆಂಬಲಿಸಿದ್ದರು. ಅರ್ಜಿಗೆ 3317 ಜನ ಸಹಿ ಹಾಕಿದ್ದರು. ಇದೀಗ ಫಲ ಸಿಕ್ಕಿದೆ. ದೋಷಗಳನ್ನು ಗುರುತಿಸಿ ಇ-ಮೇಲ್ ಮೂಲಕ ಫೀಡ್ ಬ್ಯಾಕ್ ಸಲ್ಲಿಸುತ್ತಿದ್ದೇನೆ. ಗೂಗಲ್ ನಿಂದ ಸ್ಪಂದನೆ ಸಿಗುತ್ತಿದೆ" ಎಂದು ಸಂತಸ ವ್ಯಕ್ತಪಡಿಸಿದರು ಸಿದ್ದಲಿಂಗೇಶ್ವರ ಇಂಗಳಗಿ. ಈ ಅಭಿಯಾನದ ಪರಿಣಾಮದಿಂದ ಕನ್ನಡದ ಜೊತೆ ಇತರ ಭಾರತೀಯ ಪ್ರಾದೇಶಿಕ ಭಾಷೆಗಳು ಕೂಡ ಸೇರಿಕೊಳ್ಳುತ್ತಿವೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications