ಜಾರ್ಜ್ ರಾಜಿನಾಮೆ ಪ್ರಶ್ನೆಗೆ ಸಿದ್ದರಾಮಯ್ಯ ಖಡಕ್ ಉತ್ತರ
ಬೆಳಗಾವಿ, ನವೆಂಬರ್ 13 : ಚಳಿಗಾಲದ ಅಧಿವೇಶನಕ್ಕಾಗಿ ನವೆಂಬರ್ 13 ರ ಸೋಮವಾರ ಬೆಳಗಾವಿಗೆ ಬಂದ ಸಿ.ಎಂ ಸಿದ್ದರಾಮಯ್ಯ ತಮಗೆ ಎದುರಾದ ಮಾಧ್ಯಮದವರು ಕೇಳಿದ 'ಬಿ.ಜೆ.ಪಿ ಅವರು ಜಾರ್ಜ್ ರಾಜೀನಾಮೆಗೆ ಪಟ್ಟು ಹಿಡಿದ್ರೆ ಏನ್ ಮಾಡ್ತೀರಿ' ಎಂಬ ಪ್ರಶ್ನೆಗೆ ಖಡಕ್ಕಾಗಿ ಉತ್ತರಿಸಿದ್ದಾರೆ.
ಚಳಿಗಾಲದ ಅಧಿವೇಶನ : ಯಾವ ಪಕ್ಷದ ಪಟ್ಟು ಯಾವುದರ ಮೇಲೆ
ಬಿ.ಜೆ.ಪಿಯ ಸುಮಾರು 25 ಲೋಕಸಭಾ ಸದಸ್ಯರ ಹೆಸರಿನಲ್ಲಿ ಎಫ್.ಐ.ಆರ್ ದಾಖಲಾಗಿದೆ ಅವೆರೆಲ್ಲಾ ರಾಜಿನಾಮೆ ನೀಡಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ತಾವು ವಿರೋಧ ಪಕ್ಷಗಳ ಎಲ್ಲ ಪಟ್ಟುಗಳಿಗೆ ಪ್ರತಿಪಟ್ಟು ಕಲಿತು ಬಂದಿರುವುದನ್ನು ಸೂಚ್ಯಗೊಳಿಸಿದ್ದಾರೆ.
ಮುಂದೆ ಮಾತನಾಡಿದ ಮುಖ್ಯಮಂತ್ರಿಗಳು ಈ ಬಿ.ಜೆ.ಪಿ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಜಾರ್ಜ್ ವಿಷಯವನ್ನು ಎತ್ತುತ್ತಿದ್ದಾರೆ ಅವರಿಗೆ ಸರ್ಕಾರದ ಸಾಧನೆಯ ಬಗ್ಗೆ ಅಸೂಯೆ ಉಂಟಾಗಿರುವ ಕಾರಣ ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.
ಯಡಿಯೂರಪ್ಪ ದಾಖಲೆ ಬಿಡುಗಡೆ ಮಾಡಲಿ : ಸಿದ್ದರಾಮಯ್ಯ
ಚಳಿಗಾಲದ ಅಧಿವೇಶನದಲ್ಲಿ ಬಿ.ಜೆ.ಪಿ ಸದಸ್ಯರು ಮುಖ್ಯವಾಗಿ ಡಿ.ವೈ.ಎಸ್.ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕಣದಲ್ಲಿ ಸಿ.ಬಿ.ಐ ತನಿಖಾ ದಳ ಕೆ.ಜೆ.ಜಾರ್ಜ್ ಅವರ ಮೇಲೆ ಎಪ್.ಐ.ಆರ್ ದಾಖಲಿಸಿರುವುದನ್ನು ಮುನ್ನೆಲೆಗೆ ತಂದು ಜಾರ್ಜ್ ಅವರ ರಾಜಿನಾಮೆಗೆ ಪಟ್ಟುಹಿಡಿಯಲಿದ್ದಾರೆ.
ಸಿದ್ದರಾಮಯ್ಯ ಅವರ ಈ ವಾದ ಬಿ.ಜೆ.ಪಿ ಅವರನ್ನು ಸುಮ್ಮನಾಗಿಸುತ್ತದೆಯೊ ಅಥವಾ ಜಾರ್ಜ್ ತಲೆದಂಡ ಪಡೆಯುವಲ್ಲಿ ಬಿ.ಜೆ.ಪಿ ಸಫಲವಾಗುತ್ತದೆಯೊ ಕಾದು ನೋಡಬೇಕು.