ಉಮೇಶ್ ಕತ್ತಿ ಹೇಳಿಕೆಗೆ ವಿರೋಧ: ಚಿಕ್ಕೋಡಿ, ಹುಕ್ಕೇರಿ ಬಂದ್
ಬೆಳಗಾವಿ, ಡಿಸೆಂಬರ್ 16 : ಶಾಸಕ ಉಮೇಶ್ ಕತ್ತಿ ಅವರು ದಲಿತರ ವಿರುದ್ಧ ಅಸಂವಿಧಾನಿಕ ಹೇಳಿಕೆಯನ್ನು ಖಂಡಿಸಿ ದಲಿತ ನಾಯಕರಿಂದ ಶನಿವಾರ ಬಂದ್ ಗೆ ಕರೆ ಕೊಟ್ಟಿವೆ.
ಶಾಸಕ ಉಮೇಶ ಕತ್ತಿ ದಲಿತರ ವಿರುದ್ದ ಅಸಂವಿದಾನಿಕ ಹೇಳಿಕೆಯನ್ನು ಖಂಡಿಸಿ ಪ್ರತಿ ಭಟನೆ ನಡೆಸಲಾಗುತ್ತಿದೆ. ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣ, ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣಗಳ ಬಂದ್ ಗೆ ದಲಿತ ನಾಯಕರು ಕರೆ ಕೊಟ್ಟಿದ್ದಾರೆ.

ಶಾಸಕ ಉಮೇಶ್ ಕತ್ತಿ ಅವರು ದಲಿತರಿಗೆ ಕೀಳುಮಟ್ಟದ ಪದ ಬಳಿಸಿ ಮಾತನಾಡಿದ್ದಾರೆ. ಕೂಡಲೆ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು. ಶಾಸಕ ಉಮೇಶ ಕತ್ತಿ ಕ್ಷಮೆ ಯಾಚಿಸಬೇಕು
.
ದಲಿತರ ಮತಗಳನ್ನು ತೆಗೆದುಕ್ಕೊಂಡು ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಆದರೆ ನಮ್ಮ ವಿರುದ್ಧವೇ ಮಾತನಾಡುತ್ತಾರೆ. ಯಾವೊಂದು ಜಾತಿಯವರಾಗಲಿ, ಧರ್ಮದವರನ್ನು ಅವಾಚ್ಯ ಶಬ್ದದಿಂದ ನಿಂದಿಸುವ ಅಧಿಕಾರ ಯಾರಿಗೂ ಇಲ್ಲ. ತಕ್ಷಣವೇ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಬಂದ್ ಮುಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications