ಬೆಳಗಾವಿ:ಮಹಾಮೇಳಾವನಲ್ಲಿ ಭಾಗವಹಿಸಿದ್ದ ಮರಾಠಿ ಪುಂಡರ ಮೇಲೆ FIR
ಬೆಳಗಾವಿ, ನವೆಂಬರ್ 14: ನಿಷೇಧದ ನಡುವೆಯೂ ಮಹಾರಾಷ್ಟ್ರ ಏಕೀಕರಣ ಸಮಿತಿ ಆಯೋಜಿಸಿದ್ದ ಮಹಾಮೇಳಾವ್ ನಲ್ಲಿ ಭಾಗಿಯಾಗಿದ್ದ ಕೊಲ್ಹಾಪುರ ಸಂಸದ ಧನಂಜಯ ಮಹಾಡಿಕ್ ಸೇರಿದಂತೆ 13 ಮಂದಿ ವಿರುದ್ಧ ದೂರು ದಾಖಲಲಾಗಿದೆ.
ಬೆಳಗಾವಿಯ ಟಿಳಕವಾಡಿ ಠಾಣೆಯಲ್ಲಿ ಕೊಲ್ಹಾಪುರ ಸಂಸದ ಧನಂಜಯ ಮಹಾಡಿಕ್, ಶಾಸಕಿ ಸಂಧ್ಯಾ ಕುಪ್ಪೇಕರ್ ಸೇರಿ ಮಹಾರಾಷ್ಟ್ರದ 13 ಎಂಇಎಸ್ ಮುಖಂಡರ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನ ವಿರೋಧಿಸಿ, ಮಹಾರಾಷ್ಟ್ರ ಏಕೀಕರಣ ಸಮಿತಿ ಮಹಾಮೇಳಾವ್ ಏರ್ಪಡಿಸಿದ್ದು, ಮಹಾರಾಷ್ಟ್ರ ಪ್ರತಿನಿಧಿಗಳು ಭಾಗವಹಿಸದಂತೆ ಜಿಲ್ಲಾಧಿಕಾರಿ ನಿಷೇಧಾಜ್ಞೆ ಜಾರಿ ಮಾಡಿದ್ದರು.
ನಿರ್ಬಂಧದ ನಡುವೆಯೂ ಗಡಿಯಲ್ಲಿ ಪೊಲೀಸರ ಕಣ್ತಪ್ಪಿಸಿ ಧನಂಜಯ ಮಹಾಡಿಕ್, ಸಂಧ್ಯಾ ಕುಪ್ಪೇಕರ್, ಜಯಂತರಾವ್ ಪಾಟೀಲ್ ಸೇರಿ ಹಲವರು ಭಾಗವಹಿಸಿದ್ದರು.ಈ ಹಿನ್ನೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ.












Click it and Unblock the Notifications