ದೊಡ್ಡ ಕೊಂಬಿನ ರಾಜಕಾರಣಿಗಳಿಗೆ ಅಂಬ್ಯುಲೆನ್ಸ್ ಯಾಕೆ ಕಾಣಲ್ಲ!
ರಾಜಕಾರಣಿಗಳು ಜೇನು ಸುರಿಸುವ ಮಾತನಾಡಿದರೂ ತಮ್ಮ ಗತ್ತು-ಗೈರತ್ತು ಅಷ್ಟು ಸುಲಭಕ್ಕೆ ಬಿಡುವುದಿಲ್ಲ. ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ವಾಹನದ ಸಲುವಾಗಿ ಅಂಬ್ಯುಲೆನ್ಸ್ ಅನ್ನು ಕಾಯಿಸಿದ ಸುದ್ದಿ ನಿಮಗೆ ಗೊತ್ತಾಯ್ತಾ?
ಬೆಂಗಳೂರು, ಮೇ 8: ಗಣ್ಯರು, ರಾಜಕಾರಣಿಗಳು ದೊಡ್ಡ ಕೊಂಬಿನವರು ಅನ್ನೋದು ಸಾಬೀತು ಪಡಿಸುವ ಮತ್ತೊಂದು ಘಟನೆ ನಡೆದಿದೆ. ಕರ್ನಾಟಕದ ಗೃಹ ಸಚಿವ ಡಾ.ಜೊ.ಪರಮೇಶ್ವರ ಅವರಿಗೆ ದಾರಿ ಮಾಡಿಕೊಡುವ ಕಾರಣಕ್ಕೆ ಆಂಬ್ಯುಲೆನ್ಸ್ ಒಂದನ್ನು ಸೋಮವಾರ ಕಾಯಿಸಲಾಗಿದೆ.
ಬೆಂಗಳೂರಿನ ಕಾಂಗ್ರೆಸ್ ಕಚೇರಿ ಬಳಿ ಗೃಹಸಚಿವರ ವಾಹನಕ್ಕೆ ದಾರಿ ಮಾಡಿಕೊಡುವ ಕಾರಣಕ್ಕೆ ಬಹಳ ಹೊತ್ತು ವಾಹನಗಳನ್ನು ನಿಲ್ಲಿಸಲಾಗಿತ್ತು. ಇಂತಹ ದಟ್ಟಣೆ ಮಧ್ಯೆ ಅಂಬ್ಯುಲೆನ್ಸ್ ಸಿಕ್ಕಿ ಹಾಕಿಕೊಂಡು, ಅವಸ್ಥೆ ಪಡುವಂತಾಯಿತು. ಪರಮೇಶ್ವರ್ ಅವರಾಗಲೀ ಅಥವಾ ಪೊಲೀಸರಾಗಲೀ ಆ ಅಂಬ್ಯುಲೆನ್ಸ್ ತೆರಳಲು ಯಾವ ಅನುಕೂಲವೂ ಮಾಡಿಕೊಡಲಿಲ್ಲ.[ಸಿದ್ದರಾಮಯ್ಯ ಕಾರಿನ ಕೆಂಪು ದೀಪ ತೆಗೆದವರ್ಯಾರು..?!]

ಸಚಿವರ ವಾಹನಗಳೆಲ್ಲ ತೆರಳಿ, ಸಂಚಾರ ದಟ್ಟಣೆಯಿಂದ ಮುಂದೆ ತೆರಳಲು ಸಾಧ್ಯವಾದ ನಂತರವಷ್ಟೇ ಅಂಬ್ಯುಲೆನ್ಸ್ ಹೋಯಿತು. ಅಂಬ್ಯುಲೆನ್ಸ್ ನ ಯಾಕೆ ಕಾಯಿಸಿದಿರಿ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ)ರನ್ನು ಪ್ರಶ್ನಿಸಿದರೆ, ಮಾತೇ ಆಡಲಿಲ್ಲ. ಅಂಬ್ಯುಲೆನ್ಸ್ ಗೆ ಮೊದಲ ಆದ್ಯತೆ ಎಂಬ ನಿಯಮ ಉಲ್ಲಂಘನೆ ಆಗುತ್ತಿರುವುದು ಇದೇ ಮೊದಲೇನಲ್ಲ.
ವಾರದ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಹನಗಳು ತೆರಳುವುದಕ್ಕಾಗಿ ಅಂಬ್ಯುಲೆನ್ಸ್ ನನ್ನು ನಿಲ್ಲಿಸಲಾಗಿತ್ತು. ಅದು ತುಂಬ ವಾಹನ ದಟ್ಟಣೆಯ ಸಮಯ. ಅದರಿಂದ ಹಾಗಾಯಿತು ಎಂದು ಸಂಚಾರ ಪೊಲೀಸರು ತಿಪ್ಪೆ ಸಾರಿಸಿದರು. ಆ ನಂತರ ಸ್ವತಃ ಸಿದ್ದರಾಮಯ್ಯ ಸ್ಪಷ್ಟನೆ ನೀಡಿ, ಇನ್ನು ಮುಂದೆ ಹೀಗಾಗದಂತೆ ಎಚ್ಚರ ವಹಿಸುವುದಾಗಿ ತಿಳಿಸಿದರು.[ಗೂಟದ ಕಾರುಗಳಿಗೆ, ವಿಐಪಿ ಸಂಸ್ಕೃತಿಗೆ ಗುಡ್ ಬೈ!]
ಇಷ್ಟೆಲ್ಲ ಅವಸ್ಥೆಗಳನ್ನು ನೋಡಿದರೂ ಸಹ ಪೊಲೀಸರು ಸ್ವಲ್ಪ ಮಟ್ಟಿಗೆ ರಿಸ್ಕ್ ತೆಗೆದುಕೊಳ್ಳಲು ಸಹ ಸಿದ್ಧರಿಲ್ಲ. ಇನ್ನು ರಾಜಕಾರಣಿಗಳು ತಮ್ಮ ಗತ್ತು-ಗೈರತ್ತು ಬಿಡಲು ಒಪ್ಪುವುದಿಲ್ಲ.
-
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ












Click it and Unblock the Notifications