ನಿಮ್ಹಾನ್ಸ್ ಕಾರ್ಯಾಚರಣೆ ಪೂರ್ಣ, ಕೈದಿ ವಿಶ್ವನಾಥ್ ಅಂತ್ಯ
ಭಾನುವಾರಕ್ಕೂ ಮುನ್ನ
ಬೆಂಗಳೂರು, ಆಗಸ್ಟ್ 16: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ(ನಿಮ್ಹಾನ್ಸ್) ಆವರಣದಲ್ಲಿ ಭಾನುವಾರ ಸಂಜೆ ಭಾರಿ ಗೊಂದಲ, ಭಯದ ವಾತಾವರಣ ನಿರ್ಮಾಣವಾಗಿತ್ತು. ಮಾನಸಿಕ ಅಸ್ವಸ್ಥನಾಗಿರುವ ಕೈದಿಯೊಬ್ಬನ ಕೈಗೆ ಬಂದೂಕು ಸಿಕ್ಕಿದ್ದು, ಮನಬಂದಂತೆ ಗುಂಡು ಹಾರಿಸಿದ್ದ ಘಟನೆ ನಡೆಯಿತು. ಆದರೆ, ಕಮಾಂಡೋ ಕಾರ್ಯಾಚರಣೆಯಿಂದ ಕೈದಿಯ ಎದೆಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.
ಕೊಲೆ ಪ್ರಕರಣವೊಂದರ ಆರೋಪಿಯಾಗಿರುವ 22 ವರ್ಷ ವಯಸ್ಸಿನ ವಿಶ್ವನಾಥ್ (ಕೈದಿ ನಂಬರ್ 1623) ದೆಸೆಯಿಂದ ನಿಮ್ಹಾನ್ಸ್ ನಲ್ಲಿ ಆತಂಕ ಸೃಷ್ಟಿಯಾಗಿತ್ತು.ಜುಲೈ 24ರಿಂದ ಜೈಲು ವಾರ್ಡಿನಲ್ಲಿರುವ ವಿಶ್ವನಾಥ್ ಗೆ ಚಿಕಿತ್ಸೆಗಾಗಿ ನಿಮ್ಹಾನ್ಸ್ ಗೆ ಕರೆದುಕೊಂಡು ಬರಲಾಗಿತ್ತು.
ಬಾತ್ ರೂಮಿಗೆ ಹೋಗಬೇಕು ಎಂದು ಹೇಳಿದ ವಿಶ್ವನಾಥ್ ಮಾರ್ಗ ಮಧ್ಯದಲ್ಲಿ ಗಾರ್ಡ್ ರೂಮಿನ ಬಳಿ ಬಂದಾಗ ಭದ್ರತಾ ಸಿಬ್ಬಂದಿ ಬಳಿ ಇದ್ದ ಬಂದೂಕನ್ನು ಕಸಿದುಕೊಂಡ ವಿಶ್ವನಾಥ್ ಗುಂಡು ಹಾರಿಸುತ್ತಾ ಓಡಿದ್ದಾನೆ.

ನಿಮ್ಹಾನ್ಸ್ ನ ವಾರ್ಡ್ ವೊಂದರಲ್ಲಿ ಸೇರಿಕೊಂಡ ವಿಶ್ವನಾಥ್ ಕೆಲ ಗಂಟೆಗಳಿಂದ ಅಲ್ಲೇ ಇದ್ದಾನೆ. ಹೊರಗಡೆಯಿಂದ ಬೀಗ ಹಾಕಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಸುಮಾರು 8 ರಿಂದ 10 ಸುತ್ತಿನ ಗುಂಡು ಹಾರಿಸಿದ್ದಾನೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿತ್ತು. ಅದರೆ, ಈ ಬಗ್ಗೆ ಸ್ಪಷ್ಟನೆ ನೀಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಮೇಘರಿಕ್ ಅವರು ಸುಮಾರು 23 ಸುತ್ತಿನ ಗುಂಡು ಹಾರಿಸಲಾಗಿದೆ ಎಂದಿದ್ದಾರೆ.
ಗೊರಗುಂಟೆ ಪಾಳ್ಯದ ನಿವಾಸಿಯಾಗಿರುವ ವಿಶ್ವನಾಥ್ ಕೆಲ ತಿಂಗಳುಗಳಿಂದ ತುಂಬಾ ಮೌನಿಯಾಗಿದ್ದ. ಸಹ ಕೈದಿಗಳು ಮಾತನಾಡಿಸಲು ಬಂದರೆ ಜಗಳವಾಡುತ್ತಿದ್ದ. ಭಾನುವಾರಕ್ಕೂ ಮುನ್ನ ಜುಲೈ 24ರಂದು ಚಿಕಿತ್ಸೆ ಪಡೆದುಕೊಂಡಿದ್ದ. ಕಳೆದ ಮೂರು ವರ್ಷಗಳಿಂದ ಚಿಕಿತ್ಸೆ ನೀಡಲಾಗುತ್ತಿದೆ.
@NIMHANSprisoner situation @BlrCityPolice - don't believe unconfirmed reports. No casualties. Commando's taken charge. @CPBlr & @AddlCPWest
— Pratap Reddy, IPS (@AddlCPWest) August 16, 2015 ಆತನ ಬಳಿ . 303 ಎಸ್ ಎಲ್ ಆರ್ ಬಂದೂಕು ಇದೆ. ಜೊತೆಗೆ ಬುಲೆಟ್ ಬೆಲ್ಟ್ ಬಾಕ್ಸ್ ಸಹ ಕಸಿದುಕೊಂಡಿದ್ದಾನೆ. ಹೀಗಾಗಿ ತುಂಬಾ ಎಚ್ಚರಿಕೆಯಿಂದ ಪೊಲೀಸರು ಹಾಗೂ ಕ್ಷಿಪ್ರ ಕಾರ್ಯ ಪಡೆ ಕಾರ್ಯಾಚರಣೆ ನಡೆಸಿದ್ದಾರೆ. ಅದರೆ, ಕೊನೆ ಗಳಿಗೆಯಲ್ಲಿ ಮಾತು ಕೇಳದ ವಿಶ್ವನಾಥ್ ಮೇಲೆ ಗರುಡಾ ಪಡೆ ಕಮಾಂಡೋಗಳು ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ. ಗಾಯಗೊಂಡ ವಿಶ್ವನಾಥ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ .
-
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ












Click it and Unblock the Notifications