ಅಪ್ರಾಪ್ತರ ಕೈಗೆ ಎಣ್ಣೆ ಗ್ಲಾಸ್! ವಿರುದ್ಧ ರಾಜೀವ್ ವಿನೂತನ ಜಾಗೃತಿ
ಬೆಂಗಳೂರು, ಜೂ.20: ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಅಪ್ರಾಪ್ತರ ಕೈಗೆ ಆಲ್ಕೋಹಾಲ್ ಗ್ಲಾಸ್ ಸಿಗುತ್ತಿದೆ. ತಂಬಾಕು ಸೇವನೆ ಬಗ್ಗೆ ಕಾಳಜಿ ವಹಿಸಿರುವ ಸರ್ಕಾರ ಮದ್ಯಪಾನದ ಬಗ್ಗೆಯೂ ಜಾಗೃತಿ ವಹಿಸಬೇಕು. ಈ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ಸಂಸದ ರಾಜೀವ್ ಚಂದ್ರಶೇಖರ್ ವಿನೂತನ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ.
ಅಪ್ರಾಪ್ತರಿಗೆ ಬಾರ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಮದ್ಯ ಸರ್ವ್ ಮಾಡಲಾಗುತ್ತಿದೆ. ಈ ಬಗ್ಗೆ ಕರ್ನಾಟಕ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಅಪ್ರಾಪ್ತರು ವಯಸ್ಕರಾಗುವ ಮುನ್ನವೇ ಅನಿಷ್ಟ ಚಟಗಳಿಗೆ ಬಲಿಯಾಗುವ ದುಃಸ್ಥಿತಿ ಬರುವುದು ಬೇಡ. ಅಬಕಾರಿ ಖಾತೆಯನ್ನೂ ಹೊಂದಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಪತ್ರ ಬರೆದಿದ್ದಾರೆ.
ಜೊತೆ ಇಂಥ ಸನ್ನಿವೇಶಗಳು ಎಲ್ಲಿಯಾದರೂ ಕಂಡು ಬಂದರೆ ತಿಳಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಇಮೇಲ್ ಖಾತೆಯನ್ನು ನೀಡಿದ್ದಾರೆ.

ಹೆಸರನ್ನು ಗೌಪ್ಯವಾಗಿರಿಸಲಾಗುವುದು.
ಅಪ್ರಾಪ್ತರಿಗೆ ಮದ್ಯ ಸಿಗುವ ಸ್ಥಳ, ಬಾರ್ ಹಾಗೂ ಇನ್ನಿತರ ವಿವರ ನೀಡುವ ಸಾರ್ವಜನಿಕರ ಹೆಸರನ್ನು ಗೌಪ್ಯವಾಗಿರಿಸಲಾಗುವುದು.
|
ಸಾರ್ವಜನಿಕರು ಈ ಇಮೇಲ್ ಗೆ ಪತ್ರಿಸಿ
ಈ ಇಮೇಲ್ ಗೆ ಪತ್ರಿಸಿ: Email [email protected] ಎಂದು ರಾಜೀವ್ ಮನವಿ ಮಾಡಿಕೊಂಡಿದ್ದಾರೆ. ರಾಜೀವ್ ಅವರ ಸಾಮಾಜಿಕ ಕಳಕಳಿಗೆ ಮೆಚ್ಚುಗೆ ವ್ಯಕ್ತವಾಗಿದೆ.
|
ಪೋಷಕರಿಗೆ ಮನವಿ ಮಾಡಿದ ರಾಜೀವ್
ಪೋಷಕರಿಗೆ ಮನವಿ ಮಾಡಿದ ರಾಜೀವ್, ನಿಮ್ಮ ಏರಿಯಾದಲ್ಲಿ ಎಲ್ಲಿಯಾದರೂ ಈ ರೀತಿ ಘಟನೆ ಕಂಡು ಬಂದರೆ ನನಗೆ ತಿಳಿಸಿ ಎಂದಿದ್ದಾರೆ.
|
ಸರ್ಕಾರಕ್ಕೆ ಪತ್ರ ಬರೆದಿದ್ದೇನೆ
ಸರ್ಕಾರಕ್ಕೆ ಪತ್ರ ಬರೆದಿದ್ದೇನೆ, ಅದರೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡುವುದು ಅಗತ್ಯ. ಸಾರ್ವಜನಿಕರ ಬೆಂಬಲ ಅಗತ್ಯ ಎಂದಿದ್ದಾರೆ.
|
ಜಾಗೃತಿ ಅಭಿಯಾನದಲ್ಲಿ ಕೈಜೋಡಿಸಿ
ಇಮೇಲ್, ಹಾಟ್ ಲೈನ್ ಬಳಸಿ ನನ್ನನ್ನು ಸಂಪರ್ಕಿಸಿ, ಜಾಗೃತಿ ಅಭಿಯಾನದಲ್ಲಿ ಕೈಜೋಡಿಸಿ
|
ಬಾರ್ ಗೆ ಪ್ರವೇಶ ನಿರಾಕರಿಸಬೇಕು
ಬಾರ್ ಗೆ ಪ್ರವೇಶ ನಿರಾಕರಿಸಬೇಕು, ಇದು ಬಾಲ ಕಾರ್ಮಿಕ ಪದ್ದತಿಗೂ ನಾಂದಿ ಹಾಡುತ್ತಿದೆ, ನಿಮ್ಮ ಅಭಿಯಾನಕ್ಕೆ ನಮ್ಮ ಬೆಂಬಲವಿದೆ.












Click it and Unblock the Notifications