Get Updates
Get notified of breaking news, exclusive insights, and must-see stories!

ಬಿಬಿಎಂಪಿ ವಿಭಜನೆ ವಿಧೇಯಕ ರಾಷ್ಟ್ರಪತಿಗಳಿಗೆ ರವಾನೆ, 4 ಕಾರಣಗಳು

ಬೆಂಗಳೂರು, ಜುಲೈ 29 : ಬಿಬಿಎಂಪಿಯನ್ನು ವಿಭಜನೆ ಮಾಡುವ ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ 2015ದನ್ನು ರಾಜ್ಯಪಾಲರು ರಾಷ್ಟ್ರಪತಿಗಳಿಗೆ ರವಾನಿಸಿದ್ದಾರೆ. ಇದರಿಂದ ನಿಗದಿತ ವೇಳಾಪಟ್ಟಿಯಂತೆ ಆ.22ರಂದು ಬಿಬಿಎಂಪಿ ಚುನಾವಣೆ ನಡೆಯುವುದು ಖಚಿತವಾಗಿದೆ.

ವಿಧಾನ ಮಂಡಲದ ಉಭಯ ಸದನಗಳಲ್ಲಿ ಅಂಗೀಕಾರಗೊಂಡ ವಿಧೇಯಕವನ್ನು ಸರ್ಕಾರ ರಾಜ್ಯಪಾಲರಿಗೆ ಕಳುಹಿಸಿತ್ತು. ರಾಜ್ಯಪಾಲ ವಜುಭಾಯಿ ವಾಲಾ ಅವರು ವಿಧೇಯಕಕ್ಕೆ ಅಂಕಿತ ಹಾಕದೇ ಅದನ್ನು ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ. ಅಂಕಿತ ಹಾಕದಿರಲು ರಾಜ್ಯಪಾಲರು ಹಲವು ಕಾರಣಗಳನ್ನು ನೀಡಿದ್ದಾರೆ. [ಆಗಸ್ಟ್ 22ರಂದು ಬಿಬಿಎಂಪಿ ಚುನಾವಣೆ]

ಆಗಸ್ಟ್ 3ರಂದು ಬಿಬಿಎಂಪಿ ಚುನಾವಣೆ ಅಧಿಸೂಚನೆ ಹೊರಬೀಳಲಿದ್ದು ಅಷ್ಟರೊಳಗೆ ರಾಷ್ಟ್ರಪತಿಗಳು ಒಪ್ಪಿಗೆ ನೀಡಿದರೆ ಚುನಾವಣೆ ವಿಳಂಬವಾಗಲಿದೆ. ಇಲ್ಲವಾದಲ್ಲಿ ನಿಗದಿತ ವೇಳಾಪಟ್ಟಿಯಂತೆ ಆ.22ರಂದು ಚುನಾವಣೆ ನಡೆದು 25ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. [ಪಾಲಿಕೆ ವಿಭಜನೆ, ಪಾಟೀಲ್ ಸಮಿತಿ ವರದಿ]

ರಾಷ್ಟ್ರಪತಿಗಳು ವಿಧೇಯಕಕ್ಕೆ ಒಪ್ಪಿಗೆ ನೀಡುವ ಕುರಿತು ನಿರ್ಧಾರವನ್ನು ಕೈಗೊಳ್ಳಲು ಕನಿಷ್ಠವೆಂದರೂ ಮೂರು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ವಿಧೇಯಕದ ಬಗ್ಗೆ ಕಾನೂನು, ನಗರಾಭಿವೃದ್ಧಿ ಇಲಾಖೆ ಅಭಿಪ್ರಾಯ ಪಡೆಯುತ್ತಾರೆ. ಅನಂತರ ರಾಷ್ಟ್ರಪತಿಗಳ ಬಳಿ ಅಂಕಿತಕ್ಕೆ ತೆರಳುತ್ತದೆ. ಈ ಪ್ರಕ್ರಿಯೆ ವಿಳಂಬವಾಗುವುದರಿಂದ ನಿಗದಿಯಂತೆ ಚುನಾವಣೆ ನಡೆಯುವುದು ಖಚಿತವಾಗಿದೆ. ರಾಜ್ಯಪಾಲರು ಸಹಿ ಹಾಕದಿರಲು ನೀಡಿರುವ ಕಾರಣಗಳು....

ಸಂವಿಧಾನದ ತಿದ್ದುಪಡಿಗೆ ವಿರುದ್ಧವಾಗಿದೆ

ಸಂವಿಧಾನದ ತಿದ್ದುಪಡಿಗೆ ವಿರುದ್ಧವಾಗಿದೆ

ಸಂವಿಧಾನದ ಅನ್ವಯ ಸಾಂವಿಧಾನಿಕ ಸಂಸ್ಥೆಗಳಿಗೆ ಪ್ರತ್ಯೇಕ ಕಾನೂನು ರಚಿಸುವಂತಿಲ್ಲ. ಬಿಬಿಎಂಪಿ ವಿಚಾರದಲ್ಲಿ ಈ ವಿಧೇಯಕ ತಂದಿರುವುದು ಸಂವಿಧಾನದ ಸೆಕ್ಷನ್ 9 (ಎ) ಗೆ ವಿರುದ್ಧವಾಗಿದೆ. ಆದ್ದರಿಂದ ಅಂಕಿತ ಹಾಕಿತ್ತಿಲ್ಲ ಎಂದು ರಾಜ್ಯಪಾಲರು ವಿವರಣೆ ನೀಡಿದ್ದಾರೆ.

ಶೂನ್ಯ ಸೃಷ್ಟಿಯಾಗಬಾರದು

ಶೂನ್ಯ ಸೃಷ್ಟಿಯಾಗಬಾರದು

ಈ ವಿಧೇಯಕಕ್ಕೆ ಅಂಕಿತ ಹಾಕಿದ ತಕ್ಷಣ ಬಿಬಿಎಂಪಿಯು ಅಸ್ತಿತ್ವವನ್ನು ಕಳೆದುಕೊಂಡು ಶೂನ್ಯ ಸೃಷ್ಟಿಯಾಗುತ್ತದೆ. ನಗರ, ಪಟ್ಟಣ ಸಂಸ್ಥೆಗಳಲ್ಲಿ ಹೀಗೆ ಶೂನ್ಯ ಸೃಷ್ಟಿಯಾಗಬಾರದು.

ಎಷ್ಟು ಭಾಗವಾಗಿ ವಿಭಜನೆ ಸ್ಪಷ್ಟತೆ ಬೇಕು

ಎಷ್ಟು ಭಾಗವಾಗಿ ವಿಭಜನೆ ಸ್ಪಷ್ಟತೆ ಬೇಕು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಎಷ್ಟು ಭಾಗವಾಗಿ ವಿಂಗಡನೆ ಮಾಡಲಾಗುತ್ತದೆ, ಅವರ ವ್ಯಾಪ್ತಿಯನ್ನು ಹೇಗೆ ಗುರುತಿಸುವಿರಿ ಎಂಬ ಬಗ್ಗೆ ಸ್ಪಷ್ಟತೆಗಳು ಬೇಕಾಗಿದೆ.

ಒಂದೇ ರಾಜ್ಯಕ್ಕೆ ಸೀಮಿತವಾಗಬಾರದು

ಒಂದೇ ರಾಜ್ಯಕ್ಕೆ ಸೀಮಿತವಾಗಬಾರದು

ಇಷ್ಟು ದೊಡ್ಡ ನಗರದ ವಿಭಜನೆ ಮಾಡುವ ವಿಚಾರ ಒಂದು ರಾಜ್ಯಕ್ಕೆ ಮಾತ್ರ ಸೀಮಿತವಾಗಬಾರದು. ಈ ಬಗ್ಗೆ ರಾಷ್ಟ್ರವ್ಯಾಪಿ ಏಕರೂಪ ಕಾಯ್ದೆಯ ಅಗತ್ಯವಿದೆ. ಆದ್ದರಿಂದ ಇದನ್ನು ರಾಷ್ಟ್ರಪತಿಗಳಿಗೆ ಕಳುಹಿಸಲಾಗುತ್ತಿದೆ.

ಚುನಾವಣೆ ನಡೆಯುವುದು ಖಚಿತ

ಚುನಾವಣೆ ನಡೆಯುವುದು ಖಚಿತ

ಆಗಸ್ಟ್ 3ರಂದು ಬಿಬಿಎಂಪಿ ಚುನಾವಣೆ ಅಧಿಸೂಚನೆ ಹೊರಬೀಳಲಿದ್ದು ಅಷ್ಟರೊಳಗೆ ರಾಷ್ಟ್ರಪತಿಗಳು ಒಪ್ಪಿಗೆ ನೀಡಿದರೆ ಚುನಾವಣೆ ವಿಳಂಬವಾಗಲಿದೆ. ಇಲ್ಲವಾದಲ್ಲಿ ನಿಗದಿತ ವೇಳಾಪಟ್ಟಿಯಂತೆ ಆ.22ರಂದು ಚುನಾವಣೆ ನಡೆದು 25ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+