ಅಮೀರ್ ಖಾನ್ ಒಬ್ಬ ಹೇಡಿ : ಬೆಂಗಳೂರಿನ ಇಮಾಮ್
ಬೆಂಗಳೂರು, ನವೆಂಬರ್ 25 : "ಮುಸ್ಲಿಂರಿಗೆ ಭಾರತ ಅತ್ಯಂತ ಸುರಕ್ಷಿತವಾದ ರಾಷ್ಟ್ರ. ದೇಶದಲ್ಲಿ ಖಂಡಿತ ಸಮಸ್ಯೆಗಳಿವೆ. ಈ ಸಮಸ್ಯೆಗಳು ಇದ್ದಕ್ಕಿದ್ದಂತೆ ಹುಟ್ಟಿಕೊಳ್ಳುವುದಿಲ್ಲ. ಸಮಸ್ಯೆಗಳಿದ್ದರೆ ಅವನ್ನು ಧೈರ್ಯವಾಗಿ ಎದುರಿಸಬೇಕು. ದೇಶ ಬಿಟ್ಟು ಹೋಗುವುದು ಸಮಸ್ಯೆಗಳಿಗೆ ಪರಿಹಾರವಲ್ಲ!"
'ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ, ಮಕ್ಕಳ ಸುರಕ್ಷತೆಗಾಗಿ ದೇಶ ಬಿಟ್ಟುಹೋದರೆ ಹೇಗೆ' ಎಂದು ಖ್ಯಾತ ಹಿಂದಿ ಚಿತ್ರನಟ ಅಮೀರ್ ಖಾನ್ ಆಡಿರುವ ಮಾತಿಗೆ ಬೆಂಗಳೂರಿನ ಜಾಮಿಯಾ ಮಸೀದಿಯ ಇಮಾಮ್ ಮೊಹಮ್ಮದ್ ಮಕ್ಸೂದ್ ಇಮ್ರಾನ್ ತಿರುಗೇಟು ನೀಡಿರುವುದು ಹೀಗೆ.
ಮಂಗಳವಾರ ಒನ್ಇಂಡಿಯಾ ಜೊತೆ ಮಾತನಾಡುತ್ತಿದ್ದ ಇಮ್ರಾನ್ ಅವರು, ಇದು ಅಮೀರ್ ಅವರ ದೇಶ ಕೂಡ. ಇಲ್ಲಿಯೇ ಅವರು ಹುಟ್ಟಿ ಬೆಳೆದಿದ್ದಾರೆ. ಭಾರತದಿಂದಾಗಿಯೇ ಅವರು ಈ ಸ್ಥಿತಿಗೆ ತಲುಪಿದ್ದಾರೆ. ಸಮಸ್ಯೆ ಇದ್ದರೆ ಭಾರತೀಯನಾಗಿಯೇ ಅವರು ಅದನ್ನು ಎದುರಿಸಬೇಕು ಎಂದಿದ್ದಾರೆ. ಅಲ್ಲದೆ, ಈ ಮಾತುಗಳನ್ನಾಡುವ ಅವಶ್ಯಕತೆಯಾದರೂ ಇತ್ತಾ ಎಂದೂ ಪ್ರಶ್ನಿಸಿದ್ದಾರೆ. [ಎಲ್ಲಿಯ ಕಿರಣ್, ಎಲ್ಲಿಯ ಅಮೀರ್, ಎಲ್ಲಿಯ ಶಾಶ್ವತಿ]

ಭಾರತವನ್ನು ರಕ್ಷಿಸುವ ಕರ್ತವ್ಯ ಎಲ್ಲ ಭಾರತೀಯನದ್ದು. ಭಾರತದ ಇತಿಹಾಸದೊಂದಿಗೆ ಮುಸ್ಲಿಂರು ಬೆರೆತುಹೋಗಿದ್ದೇವೆ. ಇತಿಹಾಸವನ್ನೇ ಬದಲಿಸಬೇಕೆಂದು ಕೆಲ ಅಲ್ಪಸಂಖ್ಯಾತರು ಮಾತಾಡುತ್ತಿದ್ದಾರೆ. ದೇಶದ ರಕ್ಷಣೆಗಾಗಿ ರಕ್ತ ಹರಿಸುವಂಥ ಪ್ರಸಂಗ ಬಂದರೂ ನಾವು ಅದಕ್ಕೆ ಸಿದ್ಧರಾಗಿರಬೇಕು ಎಂದು ಇಮ್ರಾನ್ ಖಚಿತ ಅಭಿಪ್ರಾಯ ವ್ಯಕ್ತಪಡಿಸಿದರು.
ಸಾರ್ವಜನಿಕವಾಗಿ ಅಭಿಪ್ರಾಯ ಮಂಡಿಸುವಾಗ ಅಮೀರ್ ಹೆಚ್ಚು ಜವಾಬ್ದಾರಿಯಿಂದ ಮಾತನಾಡಬೇಕಿತ್ತು. ಅವರು ಪ್ರಖ್ಯಾತ ನಟರು. ಅಂಥವರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವತ್ತ ಚಿತ್ತ ಹರಿಸಬೇಕು. ಅದು ಬಿಟ್ಟು ಓಡಿ ಹೋಗುವ ಮಾತಾಡುವುದು ಹೇಡಿತನ ಎಂದು ಇಮಾಮ್ ಅಮೀರ್ ವಿರುದ್ಧ ಕೆಂಡ ಕಾರಿದರು. [ಅಸಹಿಷ್ಣುತೆ ಬಗ್ಗೆ ಸೊಲ್ಲೆತ್ತಿದ್ದ ಅಮೀರ್ ಗೆ ಬಹಿರಂಗ ಪತ್ರ]
ಅಮೀರ್ ಆಡಿರುವಂಥ ಮಾತುಗಳು ದೇಶವನ್ನು ಇಬ್ಭಾಗ ಮಾಡುವಂಥವು. ಸದ್ಯದ ಪರಿಸ್ಥಿತಿಯಲ್ಲಿ ನಮಗೆ ಅದು ಬೇಕಿಲ್ಲ. ಕೆಲವರು ದೇಶದ ಒಗ್ಗಟ್ಟು ಮತ್ತು ಶಾಂತಿ ಕದಡಲು ಕಾಯುತ್ತಲೇ ಇರುತ್ತಾರೆ. ಆದರೆ, ಜವಾಬ್ದಾರಿಯುತ ನಾಗರಿಕರಾಗಿ ಶಾಂತಿ ಕದಡದಂತೆ ನಾವು ಕಾಯಬೇಕು ಎಂದು ಅವರು ಕಿವಿಮಾತು ಹೇಳಿದರು.
ಮೊಹಮ್ಮದ್ ಮಕ್ಸೂದ್ ಇಮ್ರಾನ್ ಯಾರು?
ದೇಶದಲ್ಲಿ ಐಎಸ್ಐಎಸ್ ನಿಂದ ದಾಳಿಗಳಾಗುತ್ತಿರುವಾಗ ಈ ಉಗ್ರ ಸಂಘಟನೆಯನ್ನು ನಿಗ್ರಹಿಸುವ ಬಗೆಯನ್ನು ಕರ್ನಾಟಕದಲ್ಲಿ ಮೊದಲು ಅರುಹಿದವರೇ ಮೊಹಮ್ಮದ್ ಮಕ್ಸೂದ್ ಇಮ್ರಾನ್. ಐಸಿಸ್ನ ಹುನ್ನಾರಗಳ ಬಗ್ಗೆ ಪ್ರತಿ ಶುಕ್ರವಾರ ಮಸೀದಿಗಳಲ್ಲಿ ಉಪನ್ಯಾಸ ನೀಡಲಾಗುತ್ತಿದೆ. ಐಸಿಸ್ ಇಸ್ಲಾಂ ಬದಲು ಹಿಂಸಾಚಾರ ಬಿತ್ತರಿಸುತ್ತಿದೆ ಎಂಬುದು ಅವರ ವಾದ.
ಇಮ್ರಾನ್ ಅವರ ಈ ಯೋಜನೆಗೆ ಕರ್ನಾಟಕದಾದ್ಯಂತ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಇಸ್ಲಾಂ ಧರ್ಮ ಹಿಂಸಾಚಾರವನ್ನು ಬೋಧಿಸುವುದಿಲ್ಲ. ಆದರೆ ಇದನ್ನು ಮಾಡುತ್ತಿರುವ ಐಸಿಸ್ ಇಸ್ಲಾಂ ವಿರೋಧಿ ಎಂಬ ಸಂದೇಶವಿರುವ ಉಪನ್ಯಾಸಗಳನ್ನು ಸಿಡಿ ಮಾಡಿ ಯುವ ಮುಸ್ಲಿಂರಿಗೆ ಕರ್ನಾಟಕದ ಮಸೀದಿಗಳಲ್ಲಿ ನೀಡಲಾಗುತ್ತಿದೆ. [ಉಗ್ರರಿಗೆ ತಿರುಗೇಟು, ಕರ್ನಾಟಕ ಮಸೀದಿಗಳು ಗ್ರೇಟು]
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications