ಒಂದು ಲಕ್ಷ ಬೀಜದ ಉಂಡೆಗಳ ತಯಾರಿಕಾ ಅಭಿಯಾನಕ್ಕೆ ಚಾಲನೆ
ಬಳ್ಳಾರಿ, ಮೇ. 31 : ಸಿರುಗುಪ್ಪದ ಕೃಷ್ಣದೇವರಾಯ ಶಾಲೆಯಲ್ಲಿ ತಾಲೂಕು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಅಖಿಲಾ ಭಾರತ ವಿದ್ಯಾರ್ಥಿ ಪರಿಷತ್ ಜಂಟಿ ಆಶ್ರಯದಲ್ಲಿ ಸಿರುಗುಪ್ಪ ಗ್ರೀನ್ ಪ್ರಾಜೆಕ್ಟ್' ಅಂಗವಾಗಿ ಒಂದು ಲಕ್ಷ ಬೀಜದ ಉಂಡೆಗಳ ತಯಾರಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಎಬಿವಿಪಿ ಜಿಲ್ಲಾ ಸಂಚಾಲಕ ಸಂತೋಷರಾವ್ ಬೀಜದ ಉಂಡೆಗಳ ತಯಾರಿಕಾ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು, ಪರಿಷತ್ತಿನ ಸದಸ್ಯರು ಮತ್ತು ಸಾರ್ವಜನಿಕರ ಸಹಯೋಗದಲ್ಲಿ ವಿವಿಧ ವೃಕ್ಷ, ಜಾತಿಯ ಬೀಜಗಳ ಉಂಡೆಗಳನ್ನು ತಯಾರಿಸಿ, ಮಳೆಗಾದಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ, ಕುರುಚಲು ಕಾಡುಗಳಲ್ಲಿ ಬಿಸಾಕಲಾಗುತ್ತದೆ. ಆಗ ನೈಸರ್ಗಿಕವಾಗಿ ಹೊಸ ಸಸಿಗಳು ಮೊಳಕೆಯೊಡೆಯಲಿವೆ ಎಂದರು.

ಬೇವು, ಹುಣಸೆ, ಸಿಗೇಕಾಯಿ, ಹಲಸು, ಮಾವು, ಸೀತಾಫಲ, ನೇರಳೆಹಣ್ಣು, ಬಾದಮಿ, ಅರಳಿವೃಕ್ಷ, ಗುಲ್ ಮೋರ್, ಸುಬಾನಿ, ಸೆಣಬು, ನೆಲ್ಲಿಕಾಯಿ, ಆಲದ ಮರದ ಬೀಜಗಳು ಸೇರಿದಂತೆ ವಿವಿಧ ಜಾತಿ - ವರ್ಗಗಳ ಬೀಜದ ಉಂಡೆಗಳು ಸಿರುಗುಪ್ಪ ಗ್ರೀನ್ ಪ್ರಾಜೆಕ್ಟ್' ಅಭಿಯಾನದಲ್ಲಿ ಸಿದ್ಧವಾಗುತ್ತಿವೆ.
ವಿವಿಧ ಗಿಡಗಳ ಬೀಜಗಳನ್ನು ಸ್ವಯಂಸೇವಕರು ಶೇಖರಿಸಿ, ಗೊಬ್ಬರ ಮಿಶ್ರಿತ ಮಣ್ಣಿನ ಉಂಡೆಗಳಲ್ಲಿ ಅಂಟಿಸಿ, ಒಣಗಿಸಿ ಇರಿಸಲಾಗುತ್ತದೆ. ಪ್ರತಿ ದಿನ 20 ಸಾವಿರದಂತೆ 5ದಿನಗಳಲ್ಲಿ 1ಲಕ್ಷ ಬೀಜದ ಉಂಡೆಗಳನ್ನು ತಯಾರಿಸುವ ಗುರಿಯನ್ನು ಸ್ವಯಂಸೇವಕರು ಹೊಂದಿದ್ದಾರೆ.

ಸ್ವಯಂ ಸೇವಕರಾದ ವೆಂಕಟೇಶ ಎಲೆಗಾರ, ವೆಂಕಟೇಶ ಹೆಬ್ಬರ, ಯೋಗರಾಜ, ಮುರುಳಿ, ಸಂತೋಷ, ವಿಜಯ ಸೇರಿದಂತೆ ಅನೇಕರು ಬೀಜದ ಉಂಡೆ ತಯಾರಿಕೆಯ ನೇತೃತ್ವವಹಿಸಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications