ಹರಪನಹಳ್ಳಿ ಕೆರೆಗೆ ಆಸ್ಪತ್ರೆ ತ್ಯಾಜ್ಯ; ಜನರಲ್ಲಿ ಆತಂಕ
ವಿಜಯನಗರ, ಮೇ 28; ಕೊರೊನಾ ಸಾಂಕ್ರಮಿಕ ರೋಗದಿಂದ ಜನರು ತತ್ತರಿಸಿ ಸಾವಿನ ಮನೆಯ ಕದತಟ್ಟುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹರಪನಹಳ್ಳಿ ಪಟ್ಟಣಕ್ಕೆ ನೀರೊದಗಿಸುವ ಕೆರೆಯಲ್ಲಿ ಆಸ್ಪತ್ರೆಯ ತ್ಯಾಜ್ಯಗಳನ್ನು ಬೀಸಾಡಿ ಕಲುಷಿತಗೊಳಿಸಲಾಗುತ್ತಿದೆ ಎಂದು ವಾಯು ವಿಹಾರಿಗಳು ಹೇಳುತ್ತಿದ್ದಾರೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದಲ್ಲಿರುವ ಕೆರೆಯಲ್ಲಿ ಆಸ್ಪತ್ರೆ ತ್ಯಾಜ್ಯಗಳನ್ನು ಸುರಿಯಲಾಗುತ್ತಿದೆ. ಇದರಿಂದ ನೀರು ಮಲೀನವಾಗುವ ಭೀತಿಯಲ್ಲಿ ವಾಯುವಿಹಾರಿಗಳು ಓಡಾಡುತ್ತಿದ್ದಾರೆ.
ಪಟ್ಟಣದ ದಕ್ಷಿಣಕ್ಕೆ ಹಿರೆಕೆರೆ, ಉತ್ತರಕ್ಕೆ ನಾಯಕನಕೆರೆ ಹಾಗೂ ಪಶ್ಚಿಮಕ್ಕೆ ಅಯ್ಯನಕೆರೆಗಳಿವೆ. ಅಯ್ಯನಕೆರೆಗೆ ನಗರದ ತ್ಯಾಜ್ಯಗಳನ್ನು ಲಂಡನ್ ಹಳ್ಳಗಳ ಮೂಲಕ ಹರಿಸುವುದರ ಜೊತೆಗೆ ಕಸವನ್ನು ಹಾಕಿ ತ್ಯಾಜ್ಯ ವಿಲೇವಾರಿ ಘಟಕವಾಗಿ ಮಾಡಲಾಗುತ್ತಿದೆ. ಇದರಿಂದಾಗಿ ಕೆರೆಯಲ್ಲಿ ಮೀನು ಸಾಕಾಣಿಕೆ ಇರಲಿ, ಜನಸಾಮಾನ್ಯರೂ ಕೆರೆ ಹತ್ತಿರ ತಿರುಗಾಡಲು ಸಾಧ್ಯವಿಲ್ಲದಂತಾಗಿದೆ. ಕೆರೆಯ ಅಂಗಳ ಪ್ಲಾಸ್ಟಿಕ್ ಮಯವಾಗಿದೆ.

ಉತ್ತರ ದಿಕ್ಕಿನಲ್ಲಿರುವ ನಾಯಕನಕೆರೆ ಸಂಜೆಯ ವಾಯುವಿಹಾರಕ್ಕೆ ಸೂಕ್ತವಾಗಿದೆ. ಪಟ್ಟಣಕ್ಕೆ ನೀರು ಸರಬರಾಜು ಪೂರೈಸುವ ವ್ಯವಸ್ಥೆಗೆ ಅಂತರ್ಜಲ ವೃದ್ದಿಯ ಜೀವ ನದಿಯಂತಿದೆ ಇದು ಇದೆ. ಗ್ರಾಮೀಣ ಪ್ರದೇಶಗಳಾದ ಕಾಯಕದಳ್ಳಿ, ದಡಾಗರನಹಳ್ಳಿ, ಹೊಂಬಳಗಟ್ಟಿಗೆ ಸಂಪರ್ಕಿಸುವ ರಸ್ತೆಯೂ ಇಲ್ಲಿದ್ದು, ಸದಾ ಜನರು ಸಂಚಾರ ನಡೆಸುತ್ತಾರೆ.
ಪಟ್ಟಣದ ನಿವಾಸಿಗಳು ವಾಯುವಿಹಾರಕ್ಕೆ ಈ ಸ್ಥಳದಲ್ಲಿ ಹಾದುಹೋಗುತ್ತಾರೆ. ಆದರೆ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಎಲ್ಲರೂ ಹರಸಾಹಸ ಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ಆಸ್ಪತ್ರೆಯ ತ್ಯಾಜ್ಯ ಹಾಗೂ ಪಿಪಿಇ ಕಿಟ್ ಅನ್ನು ಸಹ ಕೆರೆಯ ಆವರಣದಲ್ಲಿ ಸುರಿದು ಬೆಂಕಿ ಹಚ್ಚುತ್ತಿರುವುದು ಮುಂದಿನ ದಿನಗಳಲ್ಲಿ ಕೆರೆಯ ನೀರು ವಿಷಪೂರಿತವಾಗುವ ಆತಂಕ ಕಾಡುತ್ತಿದೆ.
ನಿರಂತರವಾಗಿ ಈ ಕೆರೆಯ ನೀರನ್ನು ಬಳಸಿಕೊಂಡು ನದಿ ನೀರು ಇಲ್ಲದ ಸಂದರ್ಭದಲ್ಲಿ ಪಟ್ಟಣದ ಸಾರ್ವಜನಿಕರಿಗೆ ನೀರು ಸರಬರಾಜು ಮಾಡಲಾಗುತ್ತದೆ. ಅಲ್ಲದೇ ಈ ಕೆರೆಯಲ್ಲಿ ಮೀನು ಸಾಕಾಣಿಕೆ ನಡೆದಿದ್ದು ಉತ್ತಮ ಮೀನು ಸರಬರಾಜಿಗೆ ಹೆಸರಾಗಿದೆ.

ಇಂತಹ ಸಂದರ್ಭದಲ್ಲಿ ಆಸ್ಪತ್ರೆಯ ತ್ಯಾಜ್ಯವಾದ ಪಿಪಿಇ ಕಿಟ್, ಅವಧಿ ಮೀರಿದ ಔಷಧಿ, ಸಿಲೈನ್ ಬಾಟಲ್, ಸಿರೇಂಜ್ಗಳನ್ನು ಹಾಕುತ್ತಿದ್ದು ಮಳೆಬಂದು ಕೆರೆ ತುಂಬಿದಾಗ ಎಲ್ಲಾ ತ್ಯಾಜ್ಯವೂ ಕೆರೆಗೆ ಸೇರಲಿದೆ. ಸಾಕಷ್ಟು ವಲಸೆ ಪಕ್ಷಿಗಳು ಆಶ್ರಯ ಪಡೆಯುವ ಜಾಗ, ಪಶುಗಳಿಗೆ ನೀರುಣಿಸುವ ಸ್ಥಳ, ಘನತ್ಯಾಜ್ಯ ವಿಲೇವಾರಿಗೆ ಸ್ಥಳವಾಗಲಿದೆ.
ಮುಂದಾಗುವ ಅನಾಹುತ ತಪ್ಪಿಸಲು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಲಿ. ಪುರಸಭೆಯಿಂದ ಘನತ್ಯಾಜ್ಯ ವಿಲೇವಾರಿ ಘಟಕ ಹೊಂದಿದ್ದರೂ ಇತರರಿಗೆ ತಿಳುವಳಿಕೆ ಹೇಳುವ ಆಸ್ಪತ್ರೆಯ ಸಿಬ್ಬಂದಿ ತ್ಯಾಜ್ಯವನ್ನು ಕೆರೆಗೆ ಚಲ್ಲುತ್ತಿರುವುದು ಎಷ್ಟರ ಮಟ್ಟಿಗೆ ಸರಿ?. ತ್ಯಾಜ್ಯ ಸುರಿದವರು ಯಾರೇ ಆಗಲಿ ಮುಂದಿನ ದಿನಗಳಲ್ಲಿ ಇಂತಹ ತಪ್ಪು ಮಾಡದಿರಲಿ ಎಂಬುದು ಜನರ ಆಗ್ರಹ.
ತ್ಯಾಜ್ಯವನ್ನು ಸುರಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಕೆರೆಯ ಭಾಗವನ್ನು ತ್ಯಾಜ್ಯ, ವಿಷಮುಕ್ತವಾಗಿ ಮಾಡಬೇಕು ಎಂದು ಸ್ಥಳೀಯ ವಾಯುವಿಹಾರಿಗಳಾದ ಲಕ್ಷ್ಮಣ್ ರಾವ್, ಹೇಮಣ್ಣ ಮೋರಿಗೇರಿ, ಚಂದ್ರಪ್ಪ, ಮಂಜುನಾಥ ಸೇರಿದಂತೆ ಹಲವರು ಮನವಿ ಮಾಡಿದ್ದಾರೆ.
"ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೆರೆಯ ಬಳಿ ಆಸ್ಪತ್ರೆ ತ್ಯಾಜ್ಯವನ್ನು ಎಸೆದಿರುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಪುರಸಭೆ ಅಧಿಕಾರಿ ಬಿ. ಆರ್. ನಾಗರಾಜ ನಾಯ್ಕ್ ಹೇಳಿದ್ದಾರೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications