ಮೇಟಿ ರಾಸಲೀಲೆ ಬಯಲಿಗೆಳೆದ ಮುಲಾಲಿಗೆ ಪೊಲೀಸರ 6 ಪ್ರಶ್ನೆ
ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ, ನನಗೆ ಯಾವುದೇ ರಾಜಕೀಯ ವ್ಯಕ್ತಿಯ ವಿರುದ್ಧ ದ್ವೇಷವಿಲ್ಲ, ಯಾರಿಂದಲೂ ಯಾವುದೇ ಲಾಭವೂ ಆಗಬೇಕಿಲ್ಲ ಎಂದು ಆರ್ಟಿಐ ಕಾರ್ಯಕರ್ತ ಡಾ. ರಾಜಶೇಖರ ಮುಲಾಲಿ ಅವರು ಹೇಳಿದ್ದಾರೆ.
ಬಳ್ಳಾರಿ, ಡಿಸೆಂಬರ್ 15 : ಅಬಕಾರಿ ಸಚಿವ ಎಚ್ ವೈ ಮೇಟಿ ಅವರು ವೈದ್ಯೆಯ ಜೊತೆ ಲೈಂಗಿಕ ಹಗರಣದಲ್ಲಿ ಸಿಲುಕಿ ರಾಜೀನಾಮೆ ಸಲ್ಲಿಸಿದ ನಂತರ, ಈ ಹಗರಣವನ್ನು ರಾಜ್ಯದ ಜನತೆಯ ಮುಂದಿಟ್ಟ ಆರ್ಟಿಐ ಕಾರ್ಯಕರ್ತ ಡಾ. ರಾಜಶೇಖರ ಮುಲಾಲಿ ಅವರಿಗೆ ಪೊಲೀಸರು ನೋಟೀಸ್ ಜಾರಿ ಮಾಡಿದ್ದಾರೆ.
ಅಬಕಾರಿ ಸಚಿವ, ಬಾಗಲಕೋಟೆ ಶಾಸಕ 70 ವರ್ಷದ ಹುಲ್ಲಪ್ಪ ಯಮನಪ್ಪ ಮೇಟಿ ಅವರಿಂದ ತಮಗೆ ಜೀವಬೆದರಿಕೆ ಬರುತ್ತಿದೆ ಎಂದು ಆಯುರ್ವೇದಿಕ್ ವೈದ್ಯ ರಾಜಶೇಖರ ಅವರು ಮೂರು ದಿನಗಳ ಹಿಂದೆಯೇ ದೂರು ನೀಡಿದ್ದರೂ ಮೇಟಿ ವಿರುದ್ಧ ಯಾವುದೇ ಎಫ್ಐಆರ್ ದಾಖಲಾಗಿಲ್ಲ. [ಭಾರತದ ರಾಜಕಾರಣಿಗಳು, ಲೈಂಗಿಕ ಹಗರಣಗಳು..]

"ನಿನಗೆ ಎಷ್ಟು ಹಣ ಬೇಕು ಹೇಳು. ಇಲ್ಲದಿದ್ದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ" ಎಂದು ಹಾದಿಯಲ್ಲಿಯೇ ರಾಜಶೇಖರ್ ಅವರನ್ನು ಅಡ್ಡಹಾಕಿಕೊಂಡು ಮೇಟಿ ಬೆಂಬಲಿಗರು ಬೆದರಿಕೆ ಒಡ್ಡಿದ್ದಾರೆ ಎಂಬ ದೂರು ನೀಡಲಾಗಿದೆ. ಈ ನಡುವೆ, ಬಳ್ಳಾರಿಯ ಗಾಂಧಿ ನಗರ ಪೊಲೀಸರು ರಾಜಶೇಖರ್ ಅವರು 6 ಪ್ರಶ್ನೆಗಳನ್ನು ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ. [ಘಾಟಿ ಮೇಟಿ ಬಗ್ಗೆ ಯಾರು ಏನು ಹೇಳಿದರು?]
ಪ್ರಶ್ನೆ 1 : ಡಿಸೆಂಬರ್ 8ರಂದು ಬಳ್ಳಾರಿಯಲ್ಲಿ ರಸ್ತೆಯಲ್ಲಿಯೇ ಕೆಲವರು ಬೆದರಿಕೆ ಒಡ್ಡಿದಾಗ ಅವರು ಎಲ್ಲಿ ಹೋಗುತ್ತಿದ್ದರು?
ಪ್ರಶ್ನೆ 2 : ಯಾವ ಸ್ಥಳ ಮತ್ತು ಯಾವ ಸಮಯದಲ್ಲಿ ಅವರಿಗೆ ಬೆದರಿಕೆ ಒಡ್ಡಯಾಯಿತು?
ಪ್ರಶ್ನೆ 3 : ಬೆದರಿಕೆ ನೀಡಿದಂತಹ ಸ್ಥಳದಲ್ಲಿಯೇ ಯಾಕೆ ಸಾಗಲು ನಿರ್ಧರಿಸಿದರು?
ಪ್ರಶ್ನೆ 4 : ಆ ದಿಕ್ಕಿನಲ್ಲಿ ಸಾಗುವ ಮೊದಲು ಅವರು ಎಲ್ಲಿದ್ದರು?
ಪ್ರಶ್ನೆ 5 : ಯಾರು ಮತ್ತು ಎಷ್ಟು ಜನರು ಅವರನ್ನು ಬೆದರಿಸಿದರು?
ಪ್ರಶ್ನೆ 6 : ಬೆದರಿಕೆ ಒಡ್ಡಿದವರ ಭಾಷೆ ಹೇಗಿತ್ತು, ಮತ್ತು ಬೆದರಿಕೆಯ ಮತ್ತು ಬೆದರಿಕೆ ಒಡ್ಡಿದವರ ಸಂಪೂರ್ಣ ವಿವರ.
ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ, ನನಗೆ ಯಾವುದೇ ರಾಜಕೀಯ ವ್ಯಕ್ತಿಯ ವಿರುದ್ಧ ದ್ವೇಷವಿಲ್ಲ, ಯಾರಿಂದಲೂ ಯಾವುದೇ ಲಾಭವೂ ಆಗಬೇಕಿಲ್ಲ ಎಂದು ಡಾ. ರಾಜಶೇಖರ ಮುಲಾಲಿ ಅವರು ಹೇಳಿದ್ದು, ನನಗೆ ಯಾವುದೇ ಹಣದ ಅವಶ್ಯಕತೆಯಿಲ್ಲ, ಬೆದರಿಕೆ ಹೀಗೆಯೇ ಮುಂದುವರಿದರೆ ಪೊಲೀಸರಿಗೆ ದೂರು ಕೊಡಬೇಕಾಗಿತ್ತದೆ ಎಂದು ಬೆದರಿಕೆ ಒಡ್ಡಿದವರಿಗೆ ಹೇಳಿದ್ದರು. [ಮೇಟಿ ರಾಸಲೀಲೆ: ಸಿದ್ದರಾಮಯ್ಯ ವಿರುದ್ದ ಕುಮಾರಸ್ವಾಮಿ ಬಾಂಬ್]
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications