ಬಾಗಲಕೋಟೆ; ಮಧೋಳದಲ್ಲಿ ಮತಗಟ್ಟೆ ಬಳಿ ವಾಮಾಚಾರಕ್ಕೆ ಯತ್ನ!
ಬಾಗಲಕೋಟೆ, ಮೇ 10; ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಪ್ರಗತಿಯಲ್ಲಿದೆ. ಬೆಳಗ್ಗೆ 11 ಗಂಟೆಯ ತನಕ ರಾಜ್ಯದಲ್ಲಿ ಶೇ 20.99ರಷ್ಟು ಮತದಾನವಾಗಿದೆ. ಸಂಜೆ 6 ಗಂಟಯ ತನಕ ಮತದಾನ ಮಾಡಲು ಅವಕಾಶವಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ಕ್ಷೇತ್ರದ ಚೌಡಾಪುರ ಗ್ರಾಮದ ಮತಗಟ್ಟೆ ಬಳಿ ವಾಮಾಚಾರ ಮಾಡುವ ಪ್ರಯತ್ನ ನಡೆದಿದೆ. ಆದರೆ ಜನರು ಇದನ್ನು ಗಮನಿಸಿ ವಾಮಾಚಾರ ಮಾಡಲು ಬಂದಿದ್ದ ವ್ಯಕ್ತಿಗಳನ್ನು ತರಾಟೆಗೆ ತೆಗೆದುಕೊಂಡರು.

ಮುಧೋಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ. ಅವರ ವಿರುದ್ಧವೇ ಮತದಾನದ ದಿನ ವಾಮಾಚಾರ ಮಾಡಲು ಇಬ್ಬರು ವ್ಯಕ್ತಿಗಳು ಚೀಲದಲ್ಲಿ ವಸ್ತುಗಳನ್ನು ತಂದಿದ್ದರು. ಇದನ್ನು ಗಮನಿಸಿದ ಜನರು ಅವರನ್ನು ಗಮನಿಸಿ ತರಾಟೆಗೆ ತೆಗೆದುಕೊಂಡು, ವಾಪಸ್ ಕಳಿಸಿದರು.
ಬಿಜೆಪಿಯ ಗೋವಿಂದ ಕಾರಜೋಳಗೆ ಮತಗಳು ಬಾರದಿರಲಿ ಎಂದು ವಾಮಚಾರ ಮಾಡಿಸಲು ಬಂದಿದ್ದರು ಎಂದು ಜನರು ಆರೋಪಿಸಿದ್ದಾರೆ. ಮತಗಟ್ಟೆಯ ಸಮೀಪವೇ ಇಬ್ಬರು ವಾಮಾಚಾರಕ್ಕೆ ಪ್ರಯತ್ನ ನಡೆಸಿದರು.












Click it and Unblock the Notifications