ಪಟೇಲರ ಪ್ರತಿಮೆ ಉದ್ಘಾಟನೆಗೆ ಮೊಮ್ಮಗನೇ ಹೋಗಿಲ್ಲ, ಕಾರಣ ಏನು?
ಅಹ್ಮದಾಬಾದ್, ಅಕ್ಟೋಬರ್ 31: ಜಗತ್ತಿನ ಅತಿ ಎತ್ತರದ ಪಟೇಲರ ಪ್ರತಿಮೆ ಇಂದು ಉದ್ಘಾಟನೆಯಾಗಿದೆ. ಆದರೆ ಈ ಪ್ರತಿಮೆ ಉದ್ಘಾಟನೆ ಸರ್ದಾರ ಪಟೇಲರ ಸ್ವಂತ ಮೊಮ್ಮಗನೇ ಹಾಜರಾಗಿಲ್ಲ.
ಹೌದು, ಸಾವಿರಾರು ಜನ ಸರ್ದಾರ ಪಟೇಲರ ಪ್ರತಿಮೆ ಉದ್ಘಾಟನೆಯನ್ನು ನೇರವಾಗಿ, ಲಕ್ಷಾಂತರ ಜನ ಟಿವಿ, ಮೊಬೈಲ್ಗಳ ಮೂಲಕ ನೋಡಿ ಕಣ್ತುಂಬಿಕೊಂಡಿದ್ದಾರೆ ಆದರೆ ಸರ್ದಾರ ಪಟೇಲರ ನೇರ ಮೊಮ್ಮಗ ಮತ್ತು ಅವರ ಕುಟುಂಬ ಭಾಗವಹಿಸಿಲ್ಲ.
ಸರ್ದಾರ ಪಟೇಲರ ಇಬ್ಬರು ಮೊಮ್ಮಕ್ಕಳಲ್ಲಿ ಈಗ ಬದುಕಿರುವುದು ಒಬ್ಬರು ಮಾತ್ರವೇ. ಅವರ ಹೆಸರು ಗೌತಮ್ ಪಟೇಲ್. ಸರ್ದಾರರ ಮೊಮ್ಮಗ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಾಜರಿರಬೇಕೆಂದು ಗುಜರಾತ್ ಮುಖ್ಯಮಂತ್ರಿಗಳ ಕಚೇರಿಯಿಂದ ಕೊನೆಯ ಕ್ಷಣದ ಭಾರಿ ಪ್ರಯತ್ನಗಳು ಮಾಡಲಾಯಿತಾದರೂ ಅವರನ್ನು ಕಾರ್ಯಕ್ರಮಕ್ಕೆ ಕರೆತರಲಾಗಿಲ್ಲ.

ಅಮೆರಿಕಕ್ಕೆ ತೆರಳಿದ ಮೊಮ್ಮಗ
ಗೌತಮ್ ಪಟೇಲ್ ಅವರು ಒಂದು ತಿಂಗಳ ಹಿಂದೆಯೇ ಅಮೆರಿಕಕ್ಕೆ ತಮ್ಮ ಮಡದಿಯೊಂದಿಗೆ ತೆರಳಿಬಿಟ್ಟಿದ್ದರು. ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಅಲ್ಲಿಯೇ ವಾಸವಿದ್ದಾರೆ. ಅವರು ಕೊನೆಕ್ಷಣದಲ್ಲಿ ಬರಲಾಗದ ಕಾರಣದಿಂದ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.

ಮೊಮ್ಮಗ ಬಿಟ್ಟು ಉಳಿದವರು ಹಾಜರು
ಆದರೆ ಸರ್ದಾರ ಪಟೇಲರ ಸಹೋದರರ ಮಕ್ಕಳು, ಮೊಮ್ಮಕ್ಕಳು ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಸರಿ ಸುಮಾರು 30 ಜನ ಸರ್ದಾರ ಪಟೇಲರ ವಂಶಸ್ಥರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಆದರೆ ಸರ್ದಾರರ ನೇರ ಮೊಮ್ಮಗ ಕಾರ್ಯಕ್ರಮಕ್ಕೆ ಬರಲಾಗದಿದ್ದುದು ಎದ್ದು ಕಾಣುತ್ತಿತ್ತು.

ಸಾರ್ವಜನಿಕ ಕಾರ್ಯಕ್ರಮದಿಂದ ದೂರ
ಗೌತಮ್ ಪಟೇಲ್ ಅವರು ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ ಉಳಿಯುವ ಮನಸ್ಥಿತಿಯವರಾಗಿದ್ದಾರೆ ಎಂದು ಸರ್ದಾರ್ ಪಟೇಲರ ಇತರ ವಂಶಸ್ಥರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಭಾರತ ರತ್ನ ಪಡೆದಿದ್ದ ಗೌತಮ್ ಪಟೇಲ್
ಸರ್ದಾರ ಪಟೇಲರ ಮೊಮ್ಮಗ ಗೌತಮ್ ಅವರು 1991 ರಲ್ಲಿ ಸರ್ದಾರ ಪಟೇಲರಿಗೆ ನೀಡಲಾದ ಭಾರತ ರತ್ನವನ್ನು ಅವರೇ ತೆಗೆದುಕೊಂಡಿದ್ದರು. ಅದೇ ಅವರು ಭಾಗಿಯಾದ ಕೊನೆಯ ಸಾರ್ವಜನಿಕ ಹಾಗೂ ಸರ್ಕಾರಿ ಪ್ರಯೋಜಿತ ಕಾರ್ಯಕ್ರಮ ಎಂದು ಅವರ ಸಂಬಂಧಿಗಳು ಹೇಳಿದ್ದಾರೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications