ಯುವತಿಯನ್ನು ತೊಂದರೆಗೆ ತಳ್ಳಿದ ಬರ್ತಡೇ ಗಿಫ್ಟ್!
ರಾಯಪುರ, ಸೆ. 7 : ತಾನೇ ಮಾಡಿಕೊಂಡ ಯಡವಟ್ಟು ತನ್ನನ್ನು ಇಂಥ ತೊಂದರೆಗೆ ಸಿಲುಕಿಸುತ್ತದೆ ಎಂದು ಆ ಯುವತಿ ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ಇನಿಯನ 'ಹುಟ್ಟುಹಬ್ಬ'ದಂದು ತಾನೇ ನೀಡಿದ 'ಉಡುಗೊರೆ' ತನ್ನನ್ನು ಇಂಥ ಸಂದಿಗ್ಧಕ್ಕೆ ತಳ್ಳುತ್ತದೆ ಎಂದೂ ಆಕೆ ಊಹಿಸಿರಲಿಲ್ಲ. ಆದರೆ, ಆಕೆ ಊಹಿಸಿರದ ಘಟನೆ ನಡದೇಬಿಟ್ಟಿತ್ತು.
ಆ ಯುವತಿ ತನ್ನ ಗೆಳೆಯನ ಹುಟ್ಟುಹಬ್ಬಕ್ಕೆ ನೀಡಿದ ಉಡುಗೊರೆ ಎಂಥದು ಗೊತ್ತಾ? ತಾನೇ ಹುಟ್ಟುಡುಗೆಯಲ್ಲಿರುವ ನಗ್ನ ಚಿತ್ರಗಳು. ಅವೇ ನಗ್ನ ಚಿತ್ರಗಳು ಇನಿಯನ ಮೊಬೈಲಿನಿಂದ ಕಳ್ಳತನವಾಗಿ ಫೇಸ್ ಬುಕ್ ಸೋಷಿಯಲ್ ಮೀಡಿಯಾ ಸೈಟಿನಲ್ಲಿ ಕಾಣಿಸಿಕೊಂಡು, ಆಕೆ ಸಮಾಜಕ್ಕೆ ತನ್ನದೇ ಫೇಸ್ ತೋರಿಸದಂತೆ ಆಗಿರುವುದು ನಗ್ನಸತ್ಯ.

ಚತ್ತೀಸ್ ಘಡದ ಸರಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಯುವತಿ ತನ್ನ ಗೆಳೆಯನ ಹುಟ್ಟುಹಬ್ಬದ ದಿನದಂದು, ಆತನ ಕೋರಿಕೆಯಂತೆ ಅಂತಿಂಥ ಉಡುಗೊರೆಗಳನ್ನು ನೀಡದೆ, ತನ್ನದೇ ನಗ್ನ ಚಿತ್ರಗಳನ್ನು ಗಿಫ್ಟಾಗಿ ನೀಡಿದ್ದಳು. ಈ ಅವಕಾಶವನ್ನು ಬಳಸಿಕೊಂಡ ಗೆಳೆಯ ಆಕೆಯ ಸಾಕಷ್ಟು ಬೆತ್ತಲೆ ಚಿತ್ರಗಳನ್ನು ಮೊಬೈಲಿನಲ್ಲಿ ಸೆರೆಹಿಡಿದಿದ್ದ.
ಇದು ಹೇಗೋ ಆತನ ಸ್ನೇಹಿತ ಜಯೇಶ್ ಎಂಬಾತನಿಗೆ ತಿಳಿದುಬಿಟ್ಟಿದೆ. ಗೆಳೆಯನಿಗೆ ತಿಳಿಯದಂತೆ ಅವೆಲ್ಲ ಫೋಟೋಗಳನ್ನು ಜಯೇಶ್ ತನ್ನ ಮೊಬೈಲಿಗೆ ಇಳಿಸಿಕೊಂಡಿದ್ದಾನೆ. ನಂತರ, ಇದಕ್ಕಾಗಿಯೇ ಹೊಸ ಫೇಸ್ ಬುಕ್ ಖಾತೆ ತೆರೆದು ಅದಕ್ಕೆ ಅಪ್ ಲೋಡ್ ಮಾಡಿದ್ದಾನೆ. ಫೇಸ್ ಬುಕ್ಕಿಗೆ ಅಪ್ ಲೋಡ್ ಆದರೆ ಊರಿಗೆಲ್ಲ ಹಂಚುವುದು ಎಷ್ಟು ಹೊತ್ತು?
ಇದು ಯುವತಿಯ ಸಹೋದರನ ಗಮನಕ್ಕೆ ಬಂದಿದೆ. ಕೂಡಲೆ ಆತ ಪೊಲೀಸರಿಗೆ ದೂರು ನೀಡಿದ್ದಾನೆ. ಸಿಐಡಿ ಪೊಲೀಸರು ಕೂಡಲೆ ಕಾರ್ಯಾಚರಣೆಗೆ ಇಳಿದಿದ್ದಾರೆ. ಯುವತಿ, ಆತನ ಸ್ನೇಹಿತರನ್ನು ವಿಚಾರಿಸಲಾಗಿ ಸತ್ಯ ಸಂಗತಿ ಬಹಿರಂಗವಾಗಿದೆ. ಫೇಕ್ ಫೇಸ್ ಬುಕ್ ಅಕೌಂಟನ್ನು ಯುವಕನ ಗೆಳೆಯ ಜಯೇಶ್ ತೆರೆದು, ಇಂಥ ಹೇಯ ಕೃತ್ಯ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಫೇಸ್ ಬುಕ್ಕಿಗೆ ಯುವತಿಯ ನಗ್ನ ಚಿತ್ರಗಳನ್ನು ಅಪ್ ಲೋಡ್ ಮಾಡಿ ವಿಕೃತಿ ಮೆರೆದ ಜಯೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ಕಂಪ್ಯೂಟರ್ ಹಾರ್ಡ್ ಡಿಸ್ಕನ್ನು ವಶಪಡಿಸಿಕೊಳ್ಳಲಾಗಿದೆ. ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆದರೆ, ಬೆತ್ತಲೆ ಚಿತ್ರಗಳನ್ನು ತೆಗೆಯಲು ಯುವತಿಯೇ ಪೂರ್ವಅನುಮತಿ ನೀಡಿದ್ದರಿಂದ ಆಕೆಯ ಇನಿಯನನ್ನು ಪೊಲೀಸರು ಬಂಧಿಸಿಲ್ಲ. ಆದರೆ, ಗದರಿಸಿ ಕಳಿಸಿದ್ದಾರೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications