ಬೆಳಗಾವಿ: ವಿವಾಹಿತೆ ರೇಪ್-ಮರ್ಡರ್, ಮೂವರ ಸೆರೆ

ಬಸಪ್ಪ ದುರ್ಗಪ್ಪ ಮಾದಾರ (22), ಯಮನಪ್ಪ ಹನುಮಂತ ಮಾದಾರ (22) ಮತ್ತು ದುರ್ಗಪ್ಪ ಕಾರಪ್ಪ ಮಾದಾರ (28) ಬಂಧಿತ ಆರೋಪಿಗಳು. ಈ ತ್ರಿಮೂರ್ತಿಗಳು ಮಹಿಳೆಯನ್ನು ಅಪಹರಿಸಿ, ತಮ್ಮೊಂದಿಗೆ ಅನೈತಿಕ ಸಂಬಂಧ ಹೊಂದುವಂತೆ ಕೇಳಿದ್ದಾರೆ. ಮಹಿಳೆ ಅದಕ್ಕೆ ನಿರಾಕರಿಸಿದಾಗ ಈ ಕುಕೃತ್ಯವೆಸಗಿದ್ದಾರೆ.
ದುರ್ದೈವಿ ಭೀಮವ್ವ ಅಜ್ಜಪ್ಪ ತ್ಯಾಪಿ (22) ಭಾನುವಾರ ರಾತ್ರಿ ಬಹಿರ್ದೆಸೆಗೆಂದು ಹೊರಗೆ ಬಂದಾಗ ಮೂವರು ಆಕೆಯ ಮೇಲೆ ಹಲ್ಲೆ ನಡೆಸಿ, ಅತ್ಯಾಚಾರವೆಸಗಿ, ಹತ್ಯೆ ಮಾಡಿದ್ದರು.
ನಂತರ ಮೃತದೇಹವನ್ನು ಗ್ರಾಮದ ಮುಂದಿರುವ ಕಬ್ಬಿನ ಗದ್ದೆಯಲ್ಲಿ ಎಸೆದು ಹೋಗಿದ್ದರು. ಮಹಿಳೆಯ ಕಟುಂಬದವರು ರಾತ್ರಿಯಿಡೀ ಗ್ರಾಮದಲ್ಲಿ ಹುಡುಕಾಡಿದರೂ ಯಾವುದೇ ಸುಳಿವು ಸಿಗಲಿಲ್ಲ. ಸೋಮವಾರ ಬೆಳಗ್ಗೆ ಶವ ಪತ್ತೆಯಾಗಿತ್ತು. ಕಡಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಗುಪ್ತ ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಭೀಮವ್ವ ತ್ಯಾಪಿ ಸವದತ್ತಿ ತಾಲೂಕಿನ ಚಿತಾದಳ ಗ್ರಾಮದವರು. ಅಜ್ಜಪ್ಪ ಜತೆ ಇವರ ವಿವಾಹ ನೆರವೇರಿತ್ತು. ಅಜ್ಜಪ್ಪ ಮನೆಯಲ್ಲಿ ಇಲ್ಲದಿದ್ದಾಗ ಈ ಕೃತ್ಯ ನಡೆದಿದೆ.












Click it and Unblock the Notifications