ಚಿತ್ರಗಳಲ್ಲಿ: ಉಸೇನ್ ಬೋಲ್ಟ್ 'ಥಂಡರ್' ಓಟ
ಬೆಂಗಳೂರು, ಆ.12: ಮಾಸ್ಕೋದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಸ್ ನಲ್ಲಿ ಜಮೈಕಾದ ಉಸೇನ್ ಬೋಲ್ಟ್ ಮತ್ತೊಮ್ಮೆ ವಿಕ್ರಮ ಸಾಧಿಸಿದ್ದಾರೆ. ಭಾನುವಾರ ರಾತ್ರಿ ನಡೆದ ಓಟದ ಸ್ಪರ್ಧೆಯಲ್ಲಿ ಪುರುಷರ 100 ಮೀಟರ್ಸ್ ನಲ್ಲಿ ಮತ್ತೆ ಚಿನ್ನದ ಪದಕ ಗೆದ್ದಿದ್ದಾರೆ. ಉಳಿದಂತೆ ಬ್ರಿಟನ್ನಿನ ಮೊ ಫರಾ ಅವರು 10,000 ಮೀ ಫೈನಲ್ ನಲ್ಲಿ ಗೆಲುವು ಸಾಧಿಸಿದ್ದಾರೆ.
ಇಂದಿನ ಚಿತ್ರ ಸುದ್ದಿಗಳಲ್ಲಿ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಜತೆ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯಂ ಸ್ವಾಮಿ, ಮುಂಬೈನಲ್ಲಿ ಆರಂಭವಾದ ಗಣೇಶ ಚತುರ್ಥಿ ತಯಾರಿ, ಸದಾ-ಇ ಸರ್ಹದ್ ದೆಹಲಿ-ಲಾಹೋರ್ ಬಸ್ ಸೇವೆ ಆರಂಭ, ಆಗ್ರಾದಲ್ಲಿ ತಾಜ್ ಮಹಲ್ ಮುಂದೆ ಆಟ, ಸ್ವಾತಂತ್ರೋತ್ಸವದ ಅಂಗವಾಗಿ ನಡೆದಿರುವ ತಯಾರಿ ಮುಂದಿನ ಚಿತ್ರಗಳಿವೆ ತಪ್ಪದೇ ನೋಡಿ...

ಮಾಸ್ಕೋದಲ್ಲಿ ಬೋಲ್ಟ್
ಮಾಸ್ಕೋದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಸ್ ನಲ್ಲಿ ಜಮೈಕಾದ ಉಸೇನ್ ಬೋಲ್ಟ್ ಮತ್ತೊಮ್ಮೆ ವಿಕ್ರಮ ಸಾಧಿಸಿದ್ದಾರೆ.

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಸ್
ಬ್ರಿಟನ್ನಿನ ಮೊ ಫರಾ ಅವರು 10,000 ಮೀ ಫೈನಲ್ ನಲ್ಲಿ ಗೆಲುವು ಸಾಧಿಸಿದ್ದಾರೆ.

ಮುಂಬೈನಲ್ಲಿ ಮಿಲ್ಕಾ
ಫ್ಲೈಯಿಂಗ್ ಸಿಖ್ ಎಂದೇ ಖ್ಯಾತರಾಗಿರುವ ಮಿಲ್ಕಾ ಸಿಂಗ್ ಅವರು ಥಾಣೆಯಲ್ಲಿ 'ಕ್ರಾಂತಿ ದೌಡ್' ಗೆ ಚಾಲನೆ ನೀಡಿದರು.

ಸೂಪರ್ ಸ್ಟಾರ್ ರಾಜೇಶ್ ಖನ್ನ
ಮುಂಬೈ: ಬಾಂದ್ರಾ ಬ್ಯಾಂಡ್ ಸ್ಟ್ಯಾಂಡ್ ನಲ್ಲಿ ಅನಾವರಣಗೊಂಡ ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್ ರಾಜೇಶ್ ಖನ್ನ ಅವರ ಪ್ರತಿಮೆ ಜೊತೆ ಅವರ ಪತ್ನಿ ಡಿಂಪಲ್ ಕಪಾಡಿಯಾ

ಜೇನು ಜೋಡಿ
ಐಲ್ಮರ್: ಮುಖದ ಮೇಲೆ ಜೇನು ಹುಳು ಬಿಟ್ಟುಕೊಳ್ಳುವ ಸ್ಪರ್ಧೆ : ಮರೆಂಡಾ ಸ್ಕಿಪ್ಪರ್ ಹಾಗೂ ಪ್ಯಾಟ್ರಿಕ್ ಬೊಲ್ ಸ್ಟೆರಲಿ ವಾರ್ಷಿಕ ಸ್ಪರ್ಧೆಗಳಲ್ಲಿ ಕಂಡು ಬಂದಿದ್ದು ಹೀಗೆ, ಕೆನಡಾದ ಒಂಟರಿಯೋದಲ್ಲಿ ಸ್ಪರ್ಧೆ ನಡೆಯಿತು.

ಇತ್ತೀಚೆಗೆ ಚಿತ್ರಗಳಲ್ಲಿ
ಇತ್ತೀಚೆಗೆ ಚಿತ್ರಗಳಲ್ಲಿ ಕಂಡ ಸುದ್ದಿ

ಗಾಂಧಿನಗರದ ವಿದ್ಯಾರ್ಥಿಗಳು
ಗಾಂಧಿನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳು 2ನೇ ಘಟಿಕೋತ್ಸವ ನಂತರ ಸಂಭ್ರಮದಲ್ಲಿ ಕುಣಿದಾಡಿದರು.

ಇರಾನಿ ನಟಿ
ಮುಂಬೈ: 9ನೇ ವಾರ್ಷಿಕ ಜೆಮ್ ಫಿಲ್ಡ್ ಹಾಗೂ ನಜ್ರಾನಾ ರೀಟೆಲ್ ಜ್ಯುವೆಲ್ಲರ್ ಇಂಡಿಯಾ ಪ್ರಶಸ್ತಿ ಸಮಾರಂಭದಲ್ಲಿ ಇರಾನಿ ನಟಿ ಸಹಾರ್ ಬಿನಿಯಾಜ್

ನವಭಾರತ್ ಯುವಭೇರಿ
ಹೈದರಾಬಾದ್ : ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ನರೇಂದ್ರ ಮೋದಿ ಭಾಷಣ ಕೇಳಲು ಬಂದ ಪುಟ್ಟ ಭಾರತೀಯ.. ಸಮಾರಂಭದ ಇನ್ನಷ್ಟು ಚಿತ್ರಗಳು... ಇಲ್ಲಿವೆ ತಪ್ಪದೇ ನೋಡಿ

ಪಣಜಿಯಲ್ಲಿ ರಾಹುಲ್
ಕ್ರಿಕೆಟರ್ ರಾಹುಲ್ ದ್ರಾವಿಡ್ ಅವರು ಬಿಟ್ಸ್ ಪಿಲಾನಿ ವಿವಿ ಘಟಿಕೋತ್ಸವದಲ್ಲಿ ಪಾಲ್ಗೊಂಡಾಗ ಕಾಣಿಸಿದ್ದು ಹೀಗೆ

ಕೆಂಪು ಕೋಟೆಗೆ ಭದ್ರತೆ
ನವದೆಹಲಿ: ಸ್ವಾತಂತ್ರೋತ್ಸವ ಸಮಾರಂಭಕ್ಕೆ ಉಗ್ರರ ಬೆದರಿಕೆ ಇರುವುದರಿಂದ ಕೆಂಪುಕೋಟೆಗೆ ಕಾಯುತ್ತಿರುವ ಭದ್ರತಾ ಸಿಬ್ಬಂದಿ. PTI Photo by Shahbaz Khan

ನಾಗಪಂಚಮಿ ನಿಮಿತ್ತ
ಸಾಂಗ್ಲಿ: ಮಹಾರಾಷ್ಟ್ರದಲ್ಲಿ ನಾಗಪಂಚಮಿ ನಿಮಿತ್ತ ಕೃಷ್ಣಾ ನದಿಯಲ್ಲಿ ಬೋಟ್ ರೇಸ್ ಹಮ್ಮಿಕೊಳ್ಳಲಾಗಿತ್ತು.

ಸದಾ-ಇ ಸರ್ಹದ್
ಸದಾ-ಇ ಸರ್ಹದ್, ದೆಹಲಿ-ಲಾಹೋರ್ ಬಸ್ ಮತ್ತೆ ಸೇವೆ ಆರಂಭ

ಪ್ರವಾಸಿಗರ ಮೋಜು
ಆಗ್ರಾದ ಪ್ರೇಮಸೌಧ ತಾಜ್ ಮಹಲ್ ಎದುರಿನ ನೀರಿನ ಕಾರಂಜಿಯಲ್ಲಿ ಪ್ರವಾಸಿಗರು ಆಟವಾಡುತ್ತಿದ್ದಾರೆ.

ಮುಂಬೈ ಗಣೇಶ
ಹಿಂದೂ ಭಕ್ತಾದಿಗಳು ಗಣೇಶ ಪ್ರತಿಮೆಯನ್ನು ವರ್ಕ್ ಶಾಪ್ ನಿಂದ ಪೂಜಾ ವೇದಿಕೆ ಕಡೆಗೆ ಕರೆದೊಯ್ಯುತ್ತಿರುವ ದೃಶ್ಯ PTI Photo by Santosh Hirlekar

ಅಡ್ವಾಣಿ- ಸ್ವಾಮಿ ಜೋಡಿ
ನವದೆಹಲಿ: ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಹಾಗೂ ಜನತಾ ಪಕ್ಷದ ಸುಬ್ರಮಣ್ಯ ಸ್ವಾಮಿ ಅವರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಹೀಗೆ(ಸಂಗ್ರಹ ಚಿತ್ರ) ಜನತಾ ಪಕ್ಷವನ್ನು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಳಿಸಲಾಗಿದೆ.

ಐಎನ್ಎಸ್ ವಿಕ್ರಾಂತ್ ನೌಕೆ
ಭಾರತದ ಮೊಟ್ಟಮೊದಲ ದೇಸೀ ನಿರ್ಮಾಣವಾದ ವಿಮಾನವಾಹಕ ಐಎನ್ಎಸ್ ವಿಕ್ರಾಂತ್ ನೌಕೆಯನ್ನು ರಕ್ಷಣಾ ಸಚಿವ ಎ.ಕೆ.ಆಂಟನಿ ಅವರ ಪತ್ನಿ ಎಲಿಜಬೆತ್ ಆಂಟನಿ ಅವರು ಕೊಚ್ಚಿ ಬಂದರಿನಲ್ಲಿ ಸೋಮವಾರ ಲೋಕಾರ್ಪಣೆ ಮಾಡಿದರು. ಸಂಪೂರ್ಣ ವರದಿ ಇಲ್ಲಿದೆ ಓದಿ












Click it and Unblock the Notifications