ಆರ್ಟಿಐ ತಿದ್ದುಪಡಿ : ಬೆಂಗಳೂರಲ್ಲಿ ಎಎಪಿ ಪ್ರತಿಭಟನೆ

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮಾಹಿತಿ ಹಕ್ಕು ಕಾಯ್ದೆ 2005 ಕಲಂ-2 ಮತ್ತು ಜನತಾ ಪ್ರತಿನಿದಿ ಕಾಯ್ದೆ 1951ರ ಕಲಂ-8(4) ಅನ್ನು ಇತ್ತೀಚಿನ CEC (ಕೇಂದ್ರ ಮಾಹಿತಿ ಆಯೋಗ) ಮತ್ತು ಸರ್ವೋಚ್ಚ ನ್ಯಾಯಾಲಯ ನೀಡಿರುವ ಆದೇಶಗಳ ಪರಿಣಾಮವನ್ನು ತಡೆಯಲು ಮತ್ತು ಈ ಕಾಯ್ದೆಗಳಿಂದ ತನ್ನನ್ನು ತಾನು ದೂರವಿಡಲು, ಕಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿದ್ದು ಆಮ್ ಆದ್ಮಿ ಪಾರ್ಟಿ (AAP) ಕರ್ನಾಟಕ ವಿರೋಧಿಸುತ್ತದೆ. ಎಲ್ಲಾ ರಾಷ್ಟ್ರೀಯ ಪಕ್ಷಗಳು ಇದಕ್ಕೆ ಸಮ್ಮತಿ ಸೂಚಿಸಿರುವುದು ನಿಜಕ್ಕೂ ದುರಂತ.
ದಿನಾಂಕ 1-8-2013 ರಂದು ನಡೆದ ಸರ್ವಪಕ್ಷ ಸಭೆಯಲ್ಲಿ ತಿದ್ದುಪಡಿಗೆ ಎಲ್ಲ ಪಕ್ಷಗಳು ಭೇದ ಮರೆತು ತಿದ್ದುಪಡೆಯನ್ನು ಬೆಂಬಲಿಸಿರುವುದು ದೇಶದ ಭ್ರಷ್ಟ ವ್ಯವಸ್ಥೆಗೆ ಪಕ್ಷಗಳು ಎಷ್ಟರಮಟ್ಟಿಗೆ ಬದ್ಧ ಮತ್ತು ಗಂಭೀರವಾಗಿದೆ ಎಂಬುದನ್ನು ತೋರಿಸುತ್ತದೆ. ಇಂತಹ ತಿದ್ದುಪಡಿಗಳು ಭಾರತದ ಹಿಂದಿನ ರಾಜಕೀಯ ವ್ಯವಸ್ಥೆಗೆ ಪ್ರತಿಕೂಲವಾಗಿದ್ದು, ಇದರಿಂದ ಪ್ರಸ್ತುತ ವ್ಯವಸ್ಥೆಯಲ್ಲಿ ಭ್ರಷ್ಟತೆಗೆ ಸಮ್ಮತಿ ಮತ್ತು ಉತ್ತೇಜನ ನೀಡಿದಂತಾಗಿದೆ.
ಇದರ ವಿರುದ್ದ ಜನತೆ ಎಚ್ಚೆತ್ತು ಇದನ್ನು ಒಕ್ಕೊರಲಿನಿಂದ ವಿರೋಧಿಸಬೇಕಾಗಿದೆ. AAP ಕರ್ನಾಟಕವು ತನ್ನ ಅಂತರ್ಜಾಲದಲ್ಲಿ ತಮ್ಮೆಲ್ಲ ಮಾಹಿತಿಗಳನ್ನು ಈಗಾಗಲೇ ಸಾರ್ವಜನಿಕರ ವೀಕ್ಷಣೆಗೆ ಇರಿಸಿದೆ. ಪ್ರಜಾಪ್ರತಿನಿಧಿ ಕಾಯ್ದೆಗೆ ಒಳಪಟ್ಟು, ಯಾವುದೇ ಅಪರಾಧಿಗಳಿಗೆ ಪಕ್ಷವು ಸ್ಥಾನ ಅಥವಾ ಟಿಕೆಟನ್ನು ನೀಡದೆ ಮಾದರಿಯಾಗಿದ್ದು ರಾಷ್ರೀಯ ಪಕ್ಷಗಳು ತಿದ್ದುಪಡೆಗೆ ನೀಡುತ್ತಿರುವ ಕಾರಣಗಳು ಕ್ಷುಲ್ಲಕ ಮತ್ತು ಜನತೆಯನ್ನು ವಾಸ್ತವದಿಂದ ದೂರವಿರಿಸುವ ಯತ್ನವಾಗಿದೆ.
CEC ಮತ್ತು SC ಈ ತೀರ್ಪು ಸ್ವಾಗತಿಸಿದಂತಹ ಏಕಮಾತ್ರ ಪಕ್ಷ AAPಯಾಗಿದ್ದು ಸಮಾಜಿಕ ಹಿತಾಸಕ್ತಿಗೆ ಮತ್ತು ಭ್ರಷ್ಟ ವ್ಯವಸ್ಥೆಯನ್ನು ಉತ್ತೇಜಿಸುವಂತಹ ಇಂತಹ ತಿದ್ದ್ಡುಪಡಿಗಳನ್ನು ಒಂದು ವೇಳೆ ಕೇಂದ್ರ ಸರ್ಕಾರವು ಜಾರಿಗೆ ತಂದದ್ದೆ ಆದಲ್ಲಿ AAP ಅದನ್ನು ಉಗ್ರವಾಗಿ ಖಂಡಿಸುತ್ತದೆ ಮತ್ತು ಇದರ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುವುದಾಗಿ ಕೇಂದ್ರ ಸರ್ಕಾರಕ್ಕೆ ಈ ಮೂಲಕ ಎಚ್ಚರಿಸಲಾಗುತ್ತದೆ. ಆಮ್ ಆದ್ಮಿ ಪಾರ್ಟಿಯು ಅಮಾನತಿಗೆ ಒಳಗಾಗಿರುವ ಉತ್ತರಪ್ರದೇಶದ ನಿಷ್ಟಾವಂತ IAS ಅಧಿಕಾರಿ ದುರ್ಗಾ ನಾಗಪಾಲ್ ಅವರಿಗೆ ನಮ್ಮ ಪಕ್ಷಕ್ಕೆ ಸೇರಲು ಕೋರಿಕೊಂಡಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications