ಶಿವಾಜಿನಗರ: ಇಲ್ಲಿ ಇಲಿಯೇ ಶಾಸ್ತ್ರ ಹೇಳುತ್ತದೆ!
ಬೆಂಗಳೂರು, ಆಗಸ್ಟ್ 2: ಶಿವಾಜಿನಗರದಲ್ಲಿ ಜ್ಯೋತಿಷಿಯೊಬ್ಬರು ಜನರ ಭವಿಷ್ಯ ಹೇಳಲು ಇಲಿಯೊಂದನ್ನು ಸಾಕಿಕೊಂಡಿದ್ದಾರೆ. ಭವಿಷ್ಯ ಹೇಳಲು ಇಲಿಯಾದರೇನು, ಗಿಳಿಯಾದರೇನು? ಒಟ್ಟಿನಲ್ಲಿ ತಮ್ಮ ಭವಿಷ್ಯ ತಿಳಿಸಿಕೊಂಡರೆ ಸಾಕು ಎನ್ನುತ್ತಾರೆ ಜನ.
ಜನರ ಈ ಮನೋಸ್ಥಿತಿ ಅರಿತಿರುವ ಗಿಳಿ ಶಾಸ್ತ್ರ ಹೇಳುವ ಅಲ್ಲಲ್ಲ ಇಲಿ ಶಾಸ್ತ್ರ ಹೇಳುವ ಗೋವಿಂದರಾಜು ಮುದ್ದಾದ ಒಂದು ಇಲಿಯನ್ನು ಪಳಗಿಸಿಟ್ಟುಕೊಂಡಿದ್ದಾರೆ. ಅದು ಭವಿಷ್ಯವನ್ನು ಸಾರುವ ಕಾರ್ಡುಗಳನ್ನು ಎತ್ತಿ ಗೋವಿಂದರಾಜು ಕೈಗೆ ಕೊಡುತ್ತದೆ - ಥೇಟ್ ಗಿಳಿಯಂತೆ!
68 ವರ್ಷದ ಗೋವಿಂದರಾಜು ಶಿವಾಜಿನಗರ ಬಿಟಿಎಸ್ ಬಸ್ ಸ್ಟಾಂಡ್ ಸಮೀಪ ಬೀದಿ ಬದಿ ದಿನಾ ಭವಿಷ್ಯದ ಗೂಡಂಗಡಿ ತೆರೆಯುತ್ತಾರೆ. 'ತಮ್ಮ ಭವಿಷ್ಯ' ರೂಪಿಸುತ್ತಿರುವ ಇಲಿಗೆ 'ಗಣೇಶ' ಅಂತಲೂ ಗೋವಿಂದರಾಜು ಹೆಸರಿಟ್ಟಿದ್ದಾರೆ.

ಇದ್ದಿದ್ದೊಂದು ಇಲಿ ಕಚ್ಕೊಂಡು ಹೋಯ್ತು
ಇದಕ್ಕೆ ಮೊದಲು ನನ್ನ ಬಳಿ 2 ಗಿಳಿಗಳು ಇದ್ದವು. ಆದರೆ ಅರಣ್ಯ ಇಲಾಖೆಯವರು ಬಂದು ಅದನ್ನು ವಶಪಡಿಸಿಕೊಂಡು ಹೊರಟುಹೋದರು. ದಿಕ್ಕುತೋಚದಂತಾಗಿ ಶಿವಾಜಿನಗರದ ಗಲ್ಲಿಯೊಲ್ಲಿ ನಡೆದುಹೋಗುತ್ತಿದ್ದಾಗ ಅಂಗಡಿಯೊಂದರಲ್ಲಿ ಬಣ್ಣ ಬಣ್ಣದ ಇಲಿಗಳನ್ನು (ಗಿಳಿಗಳಂತೆ) ಮಾರಾಟಕ್ಕಿಟ್ಟಿರುವುದು ಕಣ್ಣಿಗೆಬಿತ್ತು. ತಕ್ಷಣ ಆಲೋಚನೆಯೊಂದು ಬಂತು- ಹಾಗಾಗಿ ಒಂದು ಇಲಿಯನ್ನು ಖರೀದಿಸಿ, ಅದನ್ನು ಮಗುವಿನಂತೆ ನೋಡಿಕೊಂಡು ಪಳಗಿಸಿದೆ.

ಗಣೇಶನಿಗೆ ಈಗ 5 ವರ್ಷ ವಯಸ್ಸು
ಗಣೇಶನಿಗೆ ಈಗ 5 ವರ್ಷ ವಯಸ್ಸು. ಇಲಿ ಶಾಸ್ತ್ರ ಹೇಳುವ ಮೂಲಕ ಗೋವಿಂದರಾಜು ದಿನಾ 300 ರೂ ಸಂಪಾದಿಸುತ್ತಿದ್ದಾರೆ. ಮದುವೆ ಮುಂತಾದ ಸಮಾರಂಭಗಳು ನಡೆದಾಗ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಆಗ ಭವಿಷ್ಯ ಅರಸಿ, ಜನ ನನ್ನ ಬಳಿ ಹೆಚ್ಚಾಗಿ ಬರುತ್ತಾರೆ. ಇಲಿ ಶಾಸ್ತ್ರ ಹೇಳುತ್ತದೆ ಎಂಬುದು ಜನರಿಗೆ ವಿಶೇಷ ಆಕರ್ಷಣೆಯಾಗಿದೆ ಎಂದು ಇಲಿ ಶಾಸ್ತ್ರ ಹೇಳುವ 'ಬೆಂಗಳೂರು ಮಿರರ್' ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಪಂಚತಾರಾ ಹೋಟೆಲಿನ ವಿದೇಶಿ ಅತಿಥಿಗಳಿಗೂ ಭವಿಷ್ಯ
ಅನೇಕ ಬಾರಿ ಪಂಚತಾರಾ ಹೋಟೆಲಿನವರು ಫೋನ್ ಮಾಡಿ ನನ್ನನ್ನು ಕರೆಸಿಕೊಳ್ಳುವುದುಂಟು. ಹೋಟೆಲಿಗೆ ಬಂದ ವಿಶೇಷ ವಿದೇಶಿ ಅತಿಥಿಗಳಿಗೆ ನಾನು ಅಲ್ಲಿ ಭವಿಷ್ಯ ಹೇಳುತ್ತೇನೆ. 2008ರಲ್ಲಿ ಅಂದ್ಕೋತೀನಿ - ಬೆಂಗಳೂರಿಗೆ ಬಂದಿದ್ದ ಅಮೆರಿಕದ ಟೆನಿಸ್ ತಾರೆ ಸರಿನಾ ವಿಲಿಯಮ್ಸ್ ಅವರಿಗೂ ನಾನು ಭವಿಷ್ಯ ಹೇಳಿದ್ದೆ. ಅನೇಕ ಗಣ್ಯ ವ್ಯಕ್ತಿಗಳು ನನ್ನ ಇಲಿ ಶಾಸ್ತ್ರಕ್ಕೆ ಮನ್ನಣೆ ಕೊಡುತ್ತಾರೆ ಎಂದ ಗೋವಿಂದರಾಜು ಮುಖದಲ್ಲಿ ಮಂದಹಾಸ ಮೂಡಿತ್ತು.

ಕಡಲೆ ಚೆರ್ಪು ತಿನ್ನಿಸುತ್ತಾ ಭವಿಷ್ಯ ಅರಸುವ ಕಲೆ:
ಮಕ್ಕಳಿಗೆ ಪಾಠ ಹೇಳಿಕೊಡುವಂತೆ ಗಣೇಶನಿಗೆ ಕಾರ್ಡ್ ಎತ್ತುವ ಕಲೆ ಕಲಿಸಿದೆ. ಆರಂಭದಲ್ಲಿ ತಲೆಹರಟೆ ಮಾಡುತ್ತಿತ್ತು. ಆಮೇಲಾಮೇಲೆ ನನ್ನ ಮಾತು ಕೇಳತೊಡಗಿತು. ಅದಕ್ಕೆ ಕಡಲೆ ಅಂದರೆ ತುಂಬಾ ಇಷ್ಟ ಎಂಬುದನ್ನು ತಿಳಿದುಕೊಂಡೆ ... ಒಂದೊಂದೇ ಕಡಲೆ ಹಾಕುತ್ತಾ ಭವಿಷ್ಯ ಅರಸುವ ಕಲೆ ಕಲಿಸಿದೆ ಎನ್ನುತ್ತಾರೆ ಗೋವಿಂದರಾಜು. ಗಣೇಶನ ಹಬ್ಬ ಇನ್ನು ಒಂದು ತಿಂಗಳಿದೆ. ನೀವು ನಿಮ್ಮ ಭವಿಷ್ಯ ತಿಳಿಯಲು ಶಿವಾಜಿನಗರದತ್ತ ಹೆಜ್ಜೆ ಹಾಕಬಹುದು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications