ದಕ್ಷಿಣದಲ್ಲಿ ಮೋದಿಗೆ ಸೋಲು, ರಾಹುಲ್ ಗೇಕೆ ಜಯ?
ಬೆಂಗಳೂರು, ಜು.29: ಮುಂಬರುವ ಲೋಕಸಭೆ ಚುನಾವಣೆ ಬಗ್ಗೆ ರಾಷ್ಟ್ರೀಯ ಸುದ್ದಿ ವಾಹಿನಿಗಳು ಈಗಾಗಲೇ ಹತ್ತು ಹಲವು ಸಮೀಕ್ಷೆಗಳನ್ನು ನಡೆಸಿ ವರದಿಗಳನ್ನು ವಿಶ್ಲೇಷಿಸುತ್ತಿವೆ. ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಕೈಗೊಂಡಿರುವ ಸಮೀಕ್ಷೆಯ ಪಕ್ಷಿನೋಟ ಇಲ್ಲಿ ಓದಿರುತ್ತೀರಿ. ಈಗ ದಕ್ಷಿಣ ಭಾರತದಲ್ಲಿ ಮೋದಿಗೇಕೆ ಸೋಲು, ರಾಹುಲ್ ಗೇಕೆ ಜಯ ಎಂಬುದರ ಬಗ್ಗೆ ವಿವರಗಳನ್ನು ನೋಡಿ...
ನವದೆಹಲಿಯ CSDS-CNN-IBN ಹಾಗೂ ದಿ ಹಿಂದೂ ಸಮೀಕ್ಷೆ ಪ್ರಕಾರ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಆಡಳಿತಾರೂಢ (ಸಮ್ಮಿಶ್ರ ಸರಕಾರ ಮತ್ತು ಮೋದಿ ನೇತೃತ್ವದ ಬಿಜೆಪಿ ಆಡಳಿತ) ಪಕ್ಷಗಳ ಪರವೇ ಜನ ಈ ಕ್ಷಣದ ಮಟ್ಟಿಗೆ ಒಲವು ಇದೆ ಎನ್ನಲಾಗಿದೆ.
ಆದರೆ, ದಕ್ಷಿಣ ಭಾರತದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಹಿನ್ನಡೆ ಉಂಟಾಗಲಿದೆ ಎಂಬ ಉತ್ತರ ಹೊರಬಿದ್ದಿದೆ. ಇದಲ್ಲದೆ, ಪ್ರಧಾನಿ ಹುದ್ದೆಗೆ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಯಾರು ಪೈಪೋಟಿ ಹೊಂದಿದ್ದಾರೆ. ಜನರ ಒಲವು ಯಾರ ಕಡೆಗಿದೆ ಎಂಬುದು ಬಹಿರಂಗವಾಗಿದೆ.
ಜೊತೆಗೆ ನರೇಂದ್ರ ಮೋದಿ vs ರಾಹುಲ್ ಗಾಂಧಿ, ಮುಸ್ಲಿಂ ಮತಗಳ ವಿಭಜನೆ, ತಜ್ಞರ ಅಭಿಪ್ರಾಯವೇನು ಎಂಬುದರ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ ನೋಡಿ

ಪ್ರಧಾನಿ ಹುದ್ದೆಗೆ ಸ್ಪರ್ಧೆ
| ನಾಯಕ | ಇವರು ಪ್ರಧಾನಿಯಾಗಬೇಕು in % | 2009ರಲ್ಲಿ % |
| ನರೇಂದ್ರ ಮೋದಿ | 19 | 2 |
| ರಾಹುಲ್ ಗಾಂಧಿ | 12 | 6 |
| ಸೋನಿಯಾ ಗಾಂಧಿ | 5 | 16 |
| ಮನಮೋಹನ್ ಸಿಂಗ್ | 6 | 18 |
| ಮಾಯಾವತಿ | 3 | 5 |
| ಎಲ್ ಕೆ ಅಡ್ವಾಣಿ | 2 | 15 |
| ಏನೂ ಹೇಳಲಾರೆ | 39 | 20 |

ಮೋದಿ ಹಾಗೂ ರಾಹುಲ್ ಹೋಲಿಕೆ
| ಪ್ರದೇಶ | ಮೋದಿ | ರಾಹುಲ್ |
| ಉತ್ತರ ಭಾರತ | 37 | 29 |
| ಮಧ್ಯ ಭಾರತ | 41 | 33 |
| ಪಶ್ಚಿಮ ಭಾರತ | 43 | 33 |
| ಪೂರ್ವ | 34 | 30 |
| ದಕ್ಷಿಣ | 17 | 37 |

ಕಾಂಗ್ರೆಸ್ ನಲ್ಲಿ ವೋಟ್
ಮುಸ್ಲಿಂ ಮತಗಳ ವಿಭಜನೆ ಪ್ರಕಾರ ಶೇ 45 ರಷ್ಟು ಮಂದಿ ರಾಹುಲ್ ಗಾಂಧಿ ಪರ ಇದ್ದರೆ, ಶೇ 18 ಜನ ಮೋದಿ ಪರ ಇದ್ದಾರೆ.
| ಕಾಂಗ್ರೆಸ್ ನಲ್ಲಿ | |
| ನಾಯಕ | ಶೇಕಡವಾರು |
| ರಾಹುಲ್ ಗಾಂಧಿ | 48% |
| ಸೋನಿಯಾ ಗಾಂಧಿ | 16% |
| ಮನಮೋಹನ್ ಸಿಂಗ್ | 14% |
| ಚಿದಂಬರಂ | 2% |

ಬಿಜೆಪಿಯಲ್ಲಿ ಹೇಗಿದೆ ಗಾಳಿ
ಒಟ್ಟಾರೆ ಮೋದಿ ಶೇ 79 ರಷ್ಟು ಹಾಗೂ ರಾಹುಲ್ ಶೇ 66 ರಷ್ಟು ಜನಪ್ರಿಯತೆ ಗಳಿಸಿದ್ದಾರೆ.
| ಬಿಜೆಪಿಯಲ್ಲಿ | |
| ನಾಯಕ | ಶೇಕಡವಾರು |
| ಮೋದಿ | 66% |
| ಅಡ್ವಾಣಿ | 12% |
| ಸುಷ್ಮಾ ಸ್ವರಾಜ್ | 5% |
| ಅರುಣ್ ಜೇಟ್ಲಿ | 1% |
| ರಾಜನಾಥ್ ಸಿಂಗ್ | 1% |

ತಜ್ಞರ ಅಭಿಪ್ರಾಯ
* ನರೇಂದ್ರ ಮೋದಿ ಉತ್ತಮ ಆಡಳಿತಗಾರ ಎಂಬುದು ಸಾಬೀತಾಗಿದೆ. ರಾಹುಲ್ ಇನ್ನೂ ಕೊಟ್ಟ ಯೋಜನೆಗಳಲ್ಲಿ ಫಲ ಕಂಡಿಲ್ಲ.
* ಮೋದಿ ಅವರು ಇಂಗ್ಲೀಷ್ ಭಾಷೆಯಲ್ಲಿ ಅಷ್ಟು ಸುಲಲಿತವಾಗಿಲ್ಲ ಹೀಗಾಗಿ ದಕ್ಷಿಣ ಭಾರತದಲ್ಲಿ ರಾಹುಲ್ ಬಲ ಹೆಚ್ಚಿದೆ.
* ದಕ್ಷಿಣದಲ್ಲಿ ಬಿಜೆಪಿ ತನ್ನ ನೆಲೆ ಕಳೆದುಕೊಂಡಿದೆ. ಹೀಗಾಗಿ ಮೋದಿ ತಕ್ಷಣಕ್ಕೆ ಯಾವುದೇ ಮ್ಯಾಜಿಕ್ ಮಾಡಲು ಸಾಧ್ಯವಿಲ್ಲ.
* ಮೋದಿ ಹಾಗೂ ರಾಹುಲ್ ಪಟ್ಟ ಕಟ್ಟಲು ಪ್ರಾದೇಶಿಕ ನಾಯಕರ ಬೆಂಬಲವೂ ಅಗತ್ಯ
* ದೊಡ್ಡ ಹುದ್ದೆ ಬೇಡ ಎಂದು ರಾಹುಲ್ ಹೇಳಿದ ಮೇಲೆ ಕಾಂಗ್ರೆಸ್ ಕೂಡಾ ಗೊಂದಲದಲ್ಲಿದೆ. ಬಿಜೆಪಿ ಕೂಡಾ ಮೋದಿ ಹೆಸರು ಸೂಚಿಸಲು ಹಿಂಜರೆಯುತ್ತಿದೆ. ಹೀಗಾಗಿ ಕದನ ಕುತೂಹಲ ಕೆರಳಿಸಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications