CNN-IBN: ಗುಜರಾತಿನಲ್ಲಿ ನರೇಂದ್ರ ಮೋದಿಗೇ ಗೆಲುವು
ನವದೆಹಲಿ, ಜುಲೈ 25: ಮುಂದಿನ ಲೋಕಸಭೆ ಚುನಾವಣೆ ನಿಮಿತ್ತ ಸಿಎನ್ಎನ್-ಐಬಿಎನ್ ಆಂಗ್ಲ ನ್ಯೂಸ್ ಚಾನೆಲ್ ಚುನಾವಣೆ ಪೂರ್ವ ಸಮೀಕ್ಷೆಯ ಮತ್ತೊಂದು ಕಂತನ್ನು ಬಿಡುಗಡೆ ಮಾಡಿದೆ. ಇದು ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಕೈಗೊಂಡಿರುವ ಸಮೀಕ್ಷೆಯ ಪಕ್ಷಿನೋಟ.
CSDS-CNN-IBN survey ಪ್ರಕಾರ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಆಡಳಿತಾರೂಢ (ಸಮ್ಮಿಶ್ರ ಸರಕಾರ ಮತ್ತು ಮೋದಿ ನೇತೃತ್ವದ ಬಿಜೆಪಿ ಆಡಳಿತ) ಪಕ್ಷಗಳ ಪರವೇ ಜನ ಈ ಕ್ಷಣದ ಮಟ್ಟಿಗೆ ಒಲವು ಹೊಂದಿದ್ದಾರೆ.
1990ರಿಂದ ಒಮ್ಮೆ Congress-Nationalist Congress Party ಅಧಿಕಾರಕ್ಕೆ ಮತ್ತೊಮ್ಮೆ Bharatiya Janata Party-Shiv Sena ಜೋಡಿ ಅಧಿಕಾರದ ಗದ್ದುಗೆಯೇರುತ್ತಿದೆ. ಆದರೆ ಬಹುತೇಕ 2 ದಶಕಗಳಿಂದ ಒಂದೇ ಸಮನೆ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ.

2009ರ ಲೋಕಸಭಾ ಚುನಾವಣೆಯಿಂದೀಚೆಗೂ ಪರಿಸ್ಥಿತಿ ಭಿನ್ನವಾಗಿಲ್ಲ. 2009ರಲ್ಲಿ Congress-NCP ಮೈತ್ರಿ ಶೇ. 39ರಷ್ಟು ಗಳಿಸಿತ್ತು. ಅದೀಗ ಶೇ. 43ಕ್ಕೆ ಜಿಗಿದಿದೆ. ಆದರೆ ಈ ಮತ ಗಳಿಕೆಯಿಂದ ಸ್ಥಾನಗಳ ಸಂಖ್ಯೆ ವೃದ್ಧಿಸಲಿದೆ ಎನ್ನುವ ಹಾಗಿಲ್ಲ. 23-27 ಸಂಸದರು ಆಯ್ಕೆಯಾಗಬಹುದು. 2009ರಲ್ಲಿ 25 ಸ್ಥಾನಗಳನ್ನು Congress-NCP ಮೈತ್ರಿ ಗೆದ್ದುಕೊಂಡಿತ್ತು.
ಇನ್ನು BJP-Shiv Sena ಜೋಡಿ 18-22 ಸ್ಥಾನ ಗಳಿಸಿದರೆ MNS ಮತ್ತಿತರ ಪಕ್ಷಗಳು 2-4 ಸ್ಥಾನ ಗೆದ್ದುಕೊಳ್ಳಬಹುದು. ಶೇ. 25ರಷ್ಟು ಮಂದಿ ಮತದಾರರು Congress-NCP ಜಂಟಿಯಾಗಿ ಚುನಾವಣೆ ಎದುರಿಸಬೇಕು ಎಂದಿದ್ದರೆ ಶೇ. 20ರಷ್ಟು ಮಂದಿ ಪ್ರತ್ಯೇಕವಾಗಿ ಚುನಾವಣೆ ಎದುರಿಸಲಿ ಎಂದು ಬಯಸಿದ್ದಾರೆ.
ಗುಜರಾತಿನಲ್ಲೇನು?
CSDS-CNN-IBN survey ಪ್ರಕಾರ ಗುಜರಾತ್ ರಾಜ್ಯದಲ್ಲಿ ಆಡಳಿತಾರೂಢ ಮೋದಿ ನೇತೃತ್ವದ ಬಿಜೆಪಿ ಆಡಳಿತಕ್ಕೆ ಜನ ಈ ಕ್ಷಣದ ಮಚ್ಚುಗೆ ತೋರಿದ್ದಾರೆ. ಕಾಂಗ್ರೆಸ್ ಮತಗಳಿಕೆ ಇಳಿಜಾರುತ್ತಿದ್ದರೆ ಬಿಜೆಪಿ ಮತ ಸಂಪಾದನೆ ಹೆಚ್ಚುತ್ತಾ ಸಾಗಿದೆ. ಮೋದಿ ಜನಪ್ರಿಯತೆ ಬಿಜೆಪಿಗೆ ವರದಾನವಾಗಲಿದೆ. 2009ರಲ್ಲಿ 15 ಸಂಸದರನ್ನು ಆರಿಸಿ ಕಳಿಸಿದ್ದ ಬಿಜೆಪಿ ಈ ಬಾರಿ 20-24 ಸ್ಥಾನಗಳನ್ನು ಗೆದ್ದುಕೊಳ್ಳಲಿದೆ. ಕಾಂಗ್ರೆಸ್ ಅಬ್ಬಬ್ಬಾ ಅಂದರೆ 2-6 ಸ್ಥಾನ (ಈ ಹಿಂದೆ 11) ಗೆಲ್ಲಬಹುದಷ್ಟೇ.
ಶೇ. 64ರಷ್ಟು ಮೋದಿ ಆಡಳಿತಕ್ಕೆ ಉಘೇ ಉಘೇ ಅಂದಿದ್ದಾರೆ. ಇದೇ ವೇಳೆ ಮೋದಿ ಪ್ರಧಾನಿಯಾಗಿ ದೆಹಲಿಗೆ ಹೊರಟರೆ ಅವರ ಕಟ್ಟಾ ಅನುಯಾಯಿ ಅಮಿತ್ ಷಾ ಗುಜರಾತ್ ಮುಖ್ಯಯಂತ್ರಿಯಾಗಬೇಕು ಎಂದು ಜನ ಬಯಸಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications