ಚಿತ್ರಗಳಲ್ಲಿ: ಕುಂಬ್ಳೆಗೆ ಮೈಸೂರು ಪೇಟ, ವಿವಿ ಗೌರವ
ಮೈಸೂರು, ಜು.5: ಮಾಜಿ ಟೀಂ ಇಂಡಿಯಾ ನಾಯಕ, ಹಾಲಿ ಕೆಎಸ್ ಸಿಎ ಅಧ್ಯಕ್ಷ ಅನಿಲ್ ಕುಂಬ್ಳೆ ಅವರಿಗೆ ಶುಕ್ರವಾರ ಮೈಸೂರಿನ ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ.
ಮೈಸೂರು ವಿಶ್ವವಿದ್ಯಾಲಯದ 93ನೇ ಘಟಿಕೋತ್ಸವದಲ್ಲಿ ಕುಲಪತಿ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಅವರು ಅನಿಲ್ ಕುಂಬ್ಳೆ ಅವರಿಗೆ ಮೈಸೂರು ಪೇಟ, ಶಾಲು ತೊಡೆಸಿ, ಗೌರವ ಡಾಕ್ಟರೇಟ್ ಪ್ರಮಾಣ ಪತ್ರ ನೀಡಿದರು.
ಸ್ವಾತಂತ್ರ್ಯ ಪ್ರತಿಮೆ ನೋಡಲು ಜನ ಮುಗಿಬಿದ್ದಿದ್ದಾರೆ. ಲಿಬರ್ಟಿ ಪ್ರತಿಮೆ ಇರುವ ದ್ವೀಪಕ್ಕೆ ಮೊದಲ ಫೆರಿ ಜನರನ್ನು ಹೊತ್ತು ಹೊಯ್ದಿದೆ. ಸ್ಯಾಂಡಿ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಮಸುಕಾಗಿದ್ದ ಪ್ರತಿಷ್ಠಿತ ಪ್ರತಿಮೆ ಈಗ ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಿದೆ. ಜು.4 ರಂದು ಲಿಬರ್ಟಿ ಪ್ರತಿಮೆ ಸಾರ್ವಜನಿಕರ ದರ್ಶನಕ್ಕೆ ಮುಕ್ತವಾದ ಸಂಭ್ರಮವನ್ನು ಅಮೆರಿಕದೆಲ್ಲೆಡೆ ಆಚರಿಸಲಾಗಿದೆ.
ಕೈರೋ: ಈಜಿಪ್ಟಿನಲ್ಲಿ ಎಲ್ಲೆಡೆ ಸೇನೆಯ ದಂಡು ಕಂದು ಬಂದಿದೆ. ನಸ್ಸರ್ ನಗರದಲ್ಲಿ ಮುಸ್ಲಿಂ ಸಮುದಾಯದವರು ಪದಚ್ಯುತ ಅಧ್ಯಕ್ಷ ಮೊರ್ಸಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ನಡುವೆ ಈಜಿಸ್ಟಿನ ಮುಖ್ಯ ನ್ಯಾಯಮೂರ್ತಿ ಮಧ್ಯಂತರ ಅಧ್ಯಕ್ಷರಾಗಿ ಪ್ರಮಾಣ ಸ್ವೀಕರಿಸಿದ ಮೇಲೆ ಹಲವೆಡೆ ಪ್ರತಿಭಟನೆ, ಸಂಭ್ರಮಾಚರಣೆಯಾಗಿ ಮಾರ್ಪಟ್ಟಿದೆ.
ಲಂಡನ್: ಈ ಬಾರಿಯ ವಿಂಬಲ್ಡನ್ ನಲ್ಲಿ ಎರಡನೇ ಸ್ಟೆಫಿ ಗ್ರಾಫ್ ಎಂದೇ ಗುರುತಿಸಲ್ಪಡುತ್ತಿರುವ ಜರ್ಮನಿಯ ಸಬಿನ್ ಲಿಶಿಕಿ ಅವರು ಪೋಲ್ಯಾಂಡಿನ ಸ್ಪರ್ಧಿ ರಾವಾನ್ಸ್ಕ ಸೋಲಿಸಿ ಮಹಿಳೆಯರ ಸಿಂಗಲ್ಸ್ ಫೈನಲ್ ತಲುಪಿದ್ದಾರೆ.
ಉಳಿದಂತೆ ಅಹಮದಾಬಾದ್ ಸಂಪೂರ್ಣ ಜಲಾವೃತವಾಗಿದೆ.ಕರ್ನಾಟಕದ ಕರಾವಳಿ, ಮಲೆನಾಡು ಭಾಗಗಳಲ್ಲಿ ಆರಿದ್ರಾ ಮಳೆ ಆರ್ಭಟ ಮುಂದುವರೆದಿದೆ.. ಇಂದಿನ ಚಿತ್ರ ಸುದ್ದಿಗಳನ್ನು ನೋಡಿ...

ಡಾ. ಅನಿಲ್ ಕುಂಬ್ಳೆ
ಮೈಸೂರು: ಮಾಜಿ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ, ಏರೋನಾಟಿಕಲ್ ವಿಜ್ಞಾನಿ ರೊದ್ದಮ್ ನರಸಿಂಹ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೂ. ರಂಗಸ್ವಾಮಿ, ಕಾನೂನು ತಜ್ಞ ಟಿ.ಕೆ ವಿಶ್ವನಾಥನ್ ಅವರಿಗೆ ಜು.5 ರಂದು ನಡೆದ 93ನೇ ವಿವಿ ಘಟಿಕೋತ್ಸವ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.

ಸ್ವಾತಂತ್ರ್ಯಪ್ರತಿಮೆ ಮುಕ್ತ
ನ್ಯೂಯಾರ್ಕ್ : ಲಿಬರ್ಟಿ ಪ್ರತಿಮೆ ನೋಡಲು ಸಾಗಿದ ಜನ ಸಮೂಹ

ಕೈರೋದಲ್ಲಿ ಅಶಾಂತಿ
ಈಜಿಪ್ಟಿನಲ್ಲಿ ಎಲ್ಲೆಡೆ ಸೇನೆಯ ದಂಡು ಕಂದು ಬಂದಿದೆ. ನಸ್ಸರ್ ನಗರದಲ್ಲಿ ಮುಸ್ಲಿಂ ಸಮುದಾಯದವರು ಪದಚ್ಯುತ ಅಧ್ಯಕ್ಷ ಮೊರ್ಸಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಹೊಸ ಕಾರು
ಪುಣೆ: ಮರ್ಸೀಡೆಸ್ ಬೆಂಜ್ ಇ ಕ್ಲಾಸ್ ನ ಹೊಸ ಕಾರನ್ನು ಗುರುವಾರ ಹೊರ ಬಿಡಲಾಗಿದೆ.

ವಿಂಬಲ್ಡನ್ ಚಿತ್ರಗಳು
ಲಂಡನ್: ಫ್ರಾನ್ಸಿನ ಬಾರ್ಟೋಲಿ ಅವರು ಬೆಲ್ಜಿಯಂನ ಫ್ಲಿಕೆನ್ಸ್ ಸೋಲಿಸಿ ಫೈನಲ್ ತಲುಪಿದ್ದಾರೆ.

ವಾಟರ್ ಫೈನಲ್ ಪಂದ್ಯ
ಲಂಡನ್: ಫ್ರಾನ್ಸಿನ ಬಾರ್ಟೋಲಿ ಅವರು ಬೆಲ್ಜಿಯಂನ ಫ್ಲಿಕೆನ್ಸ್ ನಡುವಿನ ಕ್ವಾಟರ್ ಫೈನಲ್ ಪಂದ್ಯದ ಚಿತ್ರ

ಜರ್ಮನಿಯ ಪ್ರತಿಭೆ
ದೈತ್ಯ ಸಂಹಾರಿಯಾಗಿ ಫೈನಲ್ ತಲುಪಿರುವ ಜರ್ಮನಿಯ ಲಿಶಿಕಿ ಸೆಮಿಫೈನಲ್ ಪಂದ್ಯ ಗೆದ್ದ ಖುಷಿಯಲ್ಲಿ ಕಂಡು ಬಂದಿದ್ದು ಹೀಗೆ

ವಿಂಬಲ್ಡನ್ ಚಿತ್ರಗಳು
ಜರ್ಮನಿಯ ಲಿಶಿಕಿ ಸೆಮಿಫೈನಲ್ ಪಂದ್ಯದ ಆಟದ ಭಂಗಿ

ಮಂಗಳೂರು ಮಳೆ
ಮಂಗಳೂರು: ಹೋಮ್ ಗಾರ್ಡ್ ಸಹಾಯದಿಂದ ಮರವೂರಿನ ಅಣೆಕಟ್ಟನ್ನು ದಾಟುತ್ತ್ತಿರುವ ಜನ. ಮಂಗಳೂರಿನ ಸುತ್ತಮುತ್ತಲಿನ ಊರುಗಳಲ್ಲಿ ಮಳೆ ತನ್ನ ಅರ್ಭಟ ಶುಕ್ರವಾರವೂ ಮುಂದುವರೆಸಿದೆ.

ಅಹಮದಾಬಾದ್ ಚಿತ್ರ
ಸಂಪೂರ್ಣ ಜಲಮಯವಾಗಿರುವ ಅಹಮದಾಬಾದ್

ಅಹಮದಾಬಾದ್ ಜಲಮಯ
ಸಂಪೂರ್ಣ ಜಲಮಯವಾಗಿರುವ ಅಹಮದಾಬಾದ್ ಪ್ರಮುಖ ರಸ್ತೆಗಳು

ಅಹಮದಾಬಾದ್ ಚಿತ್ರ
ಸಂಪೂರ್ಣ ಜಲಮಯವಾಗಿರುವ ಅಹಮದಾಬಾದ್ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕ ಸಾರಿಗೆ ಸಂಚಾರ

ಮಂಗಳೂರಿನ ಮಳೆ
ಮನೆಗೆ ನೀರು ನುಗ್ಗಿದ್ದರಿಂದ ಗಾಬರಿಯಾಗಿ ನಿಂತು ನೋಡುತ್ತಿರುವ ಮಂಗಳೂರು ಜನ
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications