ರಸೆಲ್ ಮಾರ್ಕೆಟ್ ಹಿತ್ತಲಿನಲ್ಲಿದೆ ಮತ್ಸ್ಯಲೋಕ!

ರಸೆಲ್ ಮಾರ್ಕೆಟ್ಟಿನ ಹಿತ್ತಲಲ್ಲಿದೆ ಮತ್ಸ್ಯಲೋಕ! ಜೀವಂತ ಫಿಶ್ ನೋಡಲು ಇಲ್ಲಿ ಕ್ಲಿಕ್ಕಿಸಿ. ಅದಕ್ಕೂ ಮುನ್ನ ರಸೆಲ್ ಮಾರ್ಕೆಟ್ ಮೀನುಲೋಕದ ಉಸ್ತುವಾರಿ ಹೊತ್ತಿರುವ ಮನೋಹರ್ ಏನು ಹೇಳುತ್ತಾರೆ ಕೇಳಿ:
ಸದ್ಯಕ್ಕೆ ಆಷಾಢದ ಗಾಳಿ ಬೀಸುತ್ತಿದೆ. ಹಾಗಾಗಿ ಸರಕಾರ ಫಿಶಿಂಗ್ ಮಾಡಲು ಬಿಡುವುದಿಲ್ಲ. ಬೇಸಿಗೆಯ ಉಷ್ಣಕಾಲ ಮುಗಿದು ಮಳೆಗಾಲದ ಶೀತಗಾಳಿ ಜೋರಾಗುತ್ತಿದ್ದಂತೆ ನಮ್ಮ ಮಾರುಕಟ್ಟೆಯೂ ಜೀವಂತಿಕೆ ಪಡೆಯುತ್ತದೆ.
ಸುಮಾರು 40 ಅಂಗಡಿಗಳು ಇಲ್ಲಿವೆ. ಇಲ್ಲೆಲ್ಲಾ ಹೋಲ್ ಸೇಲ್ ದರದಲ್ಲಿಯೇ ಫಿಶ್ ಸಿಗುತ್ತದೆ. ಸಿಟಿ ಮಾರ್ಕೆಟ್ಟಿನಲ್ಲಿ ಹತ್ತು, ಯಶವಂತಪುರದಲ್ಲೂ ಆರೇಳು ಫಿಶ್ ಮಾರುಕಟ್ಟೆಗಳಿವೆ. ಆದರೆ ಅಲ್ಲಿ ತಾಜಾ ಫಿಶ್ ಸಿಗುವುದಿಲ್ಲ. ಜತೆಗೆ ರೇಟೂ ದುಬಾರಿ.
ನಮ್ಮಲ್ಲಿ ವೆರೈಟಿ ಇದೆ. ದೂರದ ರಾಮೇಶ್ವರ, ಪಾಂಡಿಚೆರಿ, ಕಡಲೂರು, ನಾಗಪಟ್ಟಣಂದಿಂದ ಫಿಶ್ ಬರುತ್ತದೆ. ಸದ್ಯಕ್ಕೆ ಮಂಗಳೂರಿನಿಂದ ಫಿಶ್ ಬರುವುದು ಕಡಿಮೆಯಾಗಿದೆ. ಈ ಬಹುರಾಷ್ಟ್ರೀಯ ಕಂಪನಿಗಳ ಹಾವಳಿ ಹೆಚ್ಚಾಗಿದೆ. Fish export ಹೆಚ್ಚಾಗುತ್ತಿದೆ. ಇದು ದೊಡ್ಡ ಸಮಸ್ಯೆಯಾಗಿದೆ.
ನಮಗೆ ಫಿಶ್ಶೇ ಸಿಗುತ್ತಿಲ್ಲ. ಮೀನುಗಾರರು ನೇರವಾಗಿ ರಫ್ತುದಾರರಿಗೆ ಮಾರಿಬಿಡುತ್ತಾರೆ. ನಮಗೆ ಮೀನು ಸಿಗುವುದೇ ಇಲ್ಲ. ಜತೆಗೆ exportಗೆ ಮಾರುವುದರಿಂದ ಮೀನುಗಾರರಿಗೆ ಹೆಚ್ಚಿನ ಹಣ ಬರುತ್ತದೆ. ಅದರಿಂದ ನಮಗೆ ಸಿಗುವ ಮೀನಿನ ರೇಟ್ ಜಾಸ್ತಿಯಾಗುತ್ತಿದೆ.
ಸರಕಾರ ಇದರತ್ತ ಗಮನಹರಿಸಬೇಕು. ನಮ್ಮಲ್ಲಿ ಸಿಗುವ ಫಿಶ್ ಗೆ ನಮ್ಮಲ್ಲೇ ಸಾಕಷ್ಟು ಬೇಡಿಕೆಯಿದೆ. ಇಲ್ಲಿನ ಹೊಟ್ಟೆಗಳೇ ಹೆಚ್ಚಾಗಿರುವಾಗ export ಯಾಕೆ ಮಾಡಬೇಕು? ಎಂದು ತಲೆಯಮೇಲೆ ಕೈಹೊತ್ತು ಕೇಳುತ್ತಾರೆ ಮನೋಹರ್. ಏನು ಹೇಳುವುದು ಅವರಿಗೆ !?
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಏಪ್ರಿಲ್ 11ರ ದರಪಟ್ಟಿ












Click it and Unblock the Notifications