ಸಕಲೇಶಪುರ: ರೈಲಿಗೆ ಸಿಕ್ಕಿ 6 ಎಮ್ಮೆಗಳ ದಾರುಣ ಸಾವು

hassan-sakleshpur-rail-accident-6-buffalos-dead
ಸಕಲೇಶಪುರ, ಜೂನ್ 27: ಪಟ್ಟಣದ ಹೊರವಲಯದಲ್ಲಿ ಆಚಂಗಿ ಬಡಾವಣೆಯ ಸಮೀಪ ಮಂಗಳವಾರ ರಾತ್ರಿ ದಾರುಣ ಅಪಘಾತವೊಂದು ನಡೆದಿದೆ. ಆಹಾರ ಹುಡುಕಿಕೊಂಡು ಸಾಗುತ್ತಿದ್ದ ಎಮ್ಮೆಗಳ ಹಿಂಡೊಂದು ರೈಲ್ವೆ ಹಳಿಯನ್ನು ದಾಟಲು ಮುಂದಾದಾಗ ರೈಲೊಂದು ಅವುಗಳ ಮೇಲೆ ಚಲಿಸಿ, ಆರು ಎಮ್ಮೆಗಳು ಪ್ರಾಣಬಿಟ್ಟಿವೆ. ಮೂರು ಎಮ್ಮೆಗಳು ಮಾರಣಾಂತಿಕವಾಗಿ ಗಾಯಗೊಂಡಿವೆ.

ರೈಲಿಗೆ ಸಿಕ್ಕಿ ಮೃತಪಟ್ಟ ಎಮ್ಮೆಗಳ ಕಾಲು, ರುಂಡ, ಮುಂಡ ಹಾಗೂ ದೇಹದ ನಾನಾ ಭಾಗಗಳು ಸುಮಾರು ಒಂದು ಕಿ.ಮಿ. ದೂರದವರಗೆ ಚೆಲ್ಲಾಡಿದ್ದು ನೋಡಗರ ಮನಕರಗುವಂತಿತ್ತು.

ಬುಧವಾರ ಬೆಳಿಗ್ಗೆ ಸ್ಥಳೀಯರಿಗೆ ವಿಷಯ ತಿಳಿದುಬಂದಿದೆ. ಅರೆ ಜೀವವಾಗಿದ್ದ ಎರಡು ಎಮ್ಮೆಗಳು ಮತ್ತು ಹಿಂಬದಿ ಕಾಲುಗಳನ್ನು ಕಳೆದುಕೊಂಡಿದ್ದ ಒಂದು ಎಮ್ಮೆಯ ರಕ್ಷಣೆಗೆ ಅವುಗಳ ಮಾಲೀಕರಾಗಲಿ ಅಥವಾ ಪಶುವೈದ್ಯರಾಗಲಿ ಸ್ಪಂದಿಸಲಿಲ್ಲ. ಸುರಿಯುತ್ತಿದ್ದ ಧಾರಾಕಾರ ಮಳೆಯಲ್ಲಿ ಎಮ್ಮೆಗಳು ನೋವಿನಿಂದ ನರಳುತ್ತ ಬಿದ್ದಿದ್ದವು.

ಘಟನೆಗೆ ಕಾರಣ: ಪಟ್ಟಣದ ರೈಲ್ವೆ ನಿಲ್ದಾಣದಿಂದ ಕೇವಲ ಎರಡು ಕಿಮಿ ದೂರದಲ್ಲಿ ಗುಡ್ಡ ಕೊರೆದು ರೈಲ್ವೆ ಹಳಿ ನಿರ್ಮಾಣ ಮಾಡಲಾಗಿದೆ. ಅಲ್ಲಿ ಯಥೇಚ್ಚವಾಗಿ ಹಸಿರು ಹುಲ್ಲು ಬೆಳೆದಿದೆ. ಈ ಎಮ್ಮೆಗಳು ಅದನ್ನು ಮೇಯಲು ಹೋಗಿವೆ. ಆದರೆ ರೈಲು ಬಂದ ಸಮಯದಲ್ಲಿ ತಪ್ಪಿಸಿಕೊಳ್ಳಲು ಸ್ಥಳವಿಲ್ಲದ ಕಾರಣ ರೈಲಿನಡಿ ಬಿದ್ದು ದಾರುಣವಾಗಿ ಸತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+