ಇಂಟೆಲ್ ಹೆಸರಿನಲ್ಲಿ ವಂಚನೆ ಜಾಲ ಪತ್ತೆ

ಬಹುರಾಷ್ಟ್ರೀಯ ಕಂಪನಿ ಮತ್ತು ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಗಳಲ್ಲಿ ಕೆಲಸ ಕೊಡಿಸುತ್ತೇವೆ ಎಂದು ಅಂತರ್ಜಾಲದ ಮೂಲಕ ನಿರುದ್ಯೋಗಿ ಯುವಕರಿಗೆ ಆಮಿಷವೊಡ್ಡುವ ವಂಚಕರು, ಭದ್ರತಾ ಹೆಸರಿನಲ್ಲಿ ಸಾವಿರಾರು ರೂಪಾಯಿ ಹಣ ಪಡೆದುಕೊಂಡು ವಂಚಿಸುತ್ತಿದ್ದಾರೆ.
ಇ-ಮೇಲ್ ವಂಚನೆ : ಇಂಟೆಲ್ ಕಂಪನಿ ಹೆಸರಿನಲ್ಲಿ ಅಂತರ್ಜಾಲದಲ್ಲಿ ವಾಕ್ ಇನ್ ಇಂಟರ್ ವ್ಯೂ ಜಾಹೀರಾತು ನೀಡಲಾಗುತ್ತಿದೆ. ಇದನ್ನು ನೋಡಿ, ಕಾಲೇಜು ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿ ಯುವಕರು ಕರೆ ಮಾಡುತ್ತಾರೆ.
ಅವರ ವಿವಿರ ಪಡೆದುಕೊಂಡು ನಂತರ ಇ ಮೇಲ್ ಗೆ ಆರಂಭಿಕ ಸಂಬಳ 22 ಸಾವಿರ, 4 ಲಕ್ಷದವರೆಗೆ ವೇತನ ಏರಿಕೆಯಾಗಲಿವೆ. ಅನುಭವದ ಅಗತ್ಯವಿಲ್ಲ ಎಂದು ವಂಚಕರು ಮಾಹಿತಿ ನೀಡುತ್ತಾರೆ.
ನಿಮ್ಮ ಸಂದರ್ಶನ ಇಂತಹ ದಿನಾಂಕ ನಡೆಯಲಿದೆ ಎಂದು ಸಮಯ, ಸ್ಥಳದ ಮಾಹಿತಿ ನೀಡಿ, ನೀವು ಭದ್ರತಾ ಠೇವಣಿಯಾಗಿ 7,850 ರೂ. ನೀಡುವಂತೆ ನಕಲಿ ಇಂಟವ್ಯೂ ಲೆಟರ್ ಕಳಿಸಲಾಗುತ್ತದೆ. ನಂತರ ಜಾಹೀರಾತು ಅಂತರ್ಜಾಲದಿಂದ ಮರೆಯಾಗುತ್ತದೆ.
ಇಂಟೆಲ್ ಕಂಪನಿ ಹೆಸರಿನಲ್ಲಿ ನಗರದದಲ್ಲಿ ಈ ರೀತಿ ವಂಚನೆ ಮಾಡುತ್ತಿರುವ ಕುರಿತು, ಓಲ್ಡ್ ಏರ್ ಪೋರ್ಟ್ ಠಾಣೆ ಮತ್ತು ಸೈಬರ್ ಕ್ರೈಂ ಪೊಲೀಸರಿಗೆ ದೂರು ದಾಖಲಾಗಿದೆ. ಡಿಡಿ ರೂಪದಲ್ಲಿ ಹಣ ನೀಡಿದ್ದೇವೆ, ಆದರೆ ಇದುವರೆಗೂ ಯಾವುದೇ ಮಾಹಿತಿ ನೀಡಿಲ್ಲ. ಸಂದರ್ಶನಕ್ಕೂ ಕರೆದಿಲ್ಲ ಎಂದು ಹಣ ಕಳೆದುಕೊಂಡವರು ಪೊಲೀಸರಿಗೆ ದೂರು ನೀಡಿದ್ದಾರೆ.
ಇಂಟೆಲ್ ಸ್ಪಷ್ಟನೆ : ನಾವು ಯಾವುದೇ ನೇಮಕಾತಿ ಮಾಡಿಕೊಳ್ಳುತ್ತಿಲ್ಲ. ಕಂಪನಿ ಹೆಸರಿನಲ್ಲಿ ನಕಲಿ ಜಾಹೀರಾತು ನೀಡಿ ಜನರನ್ನು ವಂಚಿಸಲಾಗುತ್ತಿದೆ. ಇದನ್ನು ನಂಬಬೇಡಿ ಎಂದು ಇಂಟೆಲ್ ಕಂಪನಿ ಈಗಾಗಲೇ ಸ್ಪಷ್ಟನೆ ನೀಡಿದೆ. ನೀವು ಇಂತಹ ಜಾಹೀರಾತುಗಳ ಬಗ್ಗೆ ಎಚ್ಚರವಾಗಿರಿ.
-
ದುಬೈಗೂ ಮೊದಲೇ ನಟಿ ರನ್ಯಾ ರಾವ್ಗೆ ಉಗಾಂಡಾ ಏಜೆಂಟ್ ಕೋಟ್ಯಂತರ ರೂಪಾಯಿ ವಂಚನೆ: ಚಾರ್ಜ್ಶೀಟ್ನಲ್ಲಿ ಸ್ಫೋಟಕ ಮಾಹಿತಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications