ಚಿತ್ರಗಳಲ್ಲಿ: ಜಲ ಪ್ರಳಯದಲ್ಲಿ ಸಿಲುಕಿದವರಿಗೆಯೋಧರ ಆಸರೆ
ಉತ್ತರಾಖಂಡ್, ಜೂ.19: ಆಪಾಯ ಮಟ್ಟ ಮೀರಿ ಜಲ ಪ್ರವಾಹ ಸೃಷ್ಟಿಸಿರುವ ಜೀವ ನದಿಗಳು, ಮನೆಮಠಗಳು, ವಾಹನಗಳು ಕೊಚ್ಚಿಹೋಗುತ್ತಿರುವ ಭಯಂಕರ ದೃಶ್ಯಗಳು, ನೀರಿನ ನಡುಗಡ್ಡೆಯಲ್ಲಿ ಸಿಲುಕಿ ಅತಂತ್ರ ಸ್ಥಿತಿಯಲ್ಲಿರುವ ಸಾವಿರಾರು ಮಂದಿಯನ್ನು ರಕ್ಷಿಸುವ ಹೊಣೆ ಹೊತ್ತ ಭಾರತೀಯ ಸೈನಿಕರ ಜೊತೆಗೆ ಈಗ ಆರೆಸ್ಸೆಸ್ ಕಾರ್ಯಕರ್ತರು ಕೈ ಜೋಡಿಸಿದ್ದಾರೆ.
ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪುವ ಭೀತಿ ಎಲ್ಲೆಡೆ ಹಬ್ಬಿದೆ. ಸಾವಿನ ಸಂಖ್ಯೆ 500ರ ಗಡಿ ದಾಟಬಹುದು ಎಂದು ಹೇಳಲಾಗುತ್ತಿದ್ದು ಪರಿಹಾರ ಕಾರ್ಯಗಳು ಭರದಿಂದ ಸಾಗುತ್ತಿದೆ. 5000ಕ್ಕೂ ಅಧಿಕ ಯೊಧರು ಚಮೋಲಿ, ರುದ್ರಪ್ರಯಾಗ, ಉತ್ತರಕಾಶಿ ಹಾಗೂ ಪಿಥೋಘರ್ ಸುತ್ತು ವರೆದಿದ್ದು, ಭೀಕರ ಮಳೆ, ಕೊರೆಯುವ ಚಳಿ ಲೆಕ್ಕಿಸದೆ ಜನರ ರಕ್ಷಣೆಗೆ ಮುಂದಾಗಿದ್ದಾರೆ.
ಉತ್ತರ ಪ್ರದೇಶದ ಶಹರಣ್ ಪುರ, ಬಿಜ್ನೊರ್, ಮುಜಾಫರ್ ನಗರ ಹಾಗೂ ಫಿಲಿಬಿತ್ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯ ಮುಂದುವರೆದಿದೆ. ಯೋಧರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದಂತೆ ವಿವಿಧ ಸಂಸ್ಥೆಗಳು ನೆರವಿಗೆ ಧಾವಿಸಿದೆ. ದೆಹಲಿಯ ರಾಘವೇಂದ್ರ ಸ್ವಾಮಿ ಮಠ ಕೂಡಾ ಸಂತ್ರಸ್ತರಿಗೆ ಆಶ್ರಯ ನೀಡಲು ಮುಂದೆ ಬಂದಿದೆ.
ದಿನ ಕಳೆದಂತೆ ಆತಂಕ ಕೂಡ ಹೆಚ್ಚಾಗುತ್ತಿದೆ. ನೆರವಿನ ಹಸ್ತ ಯಾವಾಗ ಸಿಗಲಿದೆ ಎಂದು ಎದುರು ನೋಡುತ್ತಿದ್ದೇವೆ. ತಮ್ಮವರನ್ನು ನೆನೆಸಿಕೊಂಡು ದೇಶದ ವಿವಿಧೆಡೆಗಳಿಂದ ಬಂದಿರುವವರು ಅಳುತ್ತಿದ್ದರೆ, ನೂರಾರು ಮಂದಿ ಕಣ್ಮರೆಯಾಗಿದ್ದಾರೆ. ಹುಡುಕಾಟದ ದಾರಿ ಕಾಣದೆ ಕಂಗಾಲಾಗಿದ್ದಾರೆ. ಅದರೆ, ಯೋಧರು ಆಶಾಕಿರಣವಾಗಿ ಕಾಣಿಸಿಕೊಂಡಿದ್ದಾರೆ. ಮಳೆ ರುದ್ರ ನರ್ತನ ಹಾಗೂ ಯೋಧರು, ಆರೆಸ್ಸೆಸ್ ನೆರವಿನ ಹಸ್ತ ಚಾಚಿದ ಚಿತ್ರಗಳು ಇಲ್ಲಿದೆ ತಪ್ಪದೇ ನೋಡಿ.. ಚಿತ್ರ ಕೃಪೆ : ಸಂವಾದ.ಆರ್ಗ್

ಸಂತ್ರಸ್ತರಿಗೆ ಯೋಧರ ಆಸರೆ
ಉತ್ತರಾಖಂಡ್ ನ ವಿವಿಧ ಜಿಲ್ಲೆಗಳಲ್ಲಿ ಭೂ ಕುಸಿತ

ತಾತ್ಕಾಲಿಕ ನಿಲುಗಡೆ ತಾಣ
ಉತ್ತರಾಖಂಡ್ ನ ವಿವಿಧ ಜಿಲ್ಲೆಗಳಲ್ಲಿ ಭಾರತೀಯ ಸೇನೆಯ ಯೋಧರು ನೆರವಿನ ಹಸ್ತ ಚಾಚಿದ ದೃಶ್ಯಗಳು

ಶಿಖರದಿಂದ ಅವರೋಹಣ
ಉತ್ತರಾಖಂಡ್ ನ ವಿವಿಧ ಜಿಲ್ಲೆಗಳ ಬೆಟ್ಟದ ತಪ್ಪಲಿನಲ್ಲಿ ಭಾರತೀಯ ಸೇನೆಯ ಯೋಧರು ನೆರವಿನ ಹಸ್ತ ಚಾಚಿದ ದೃಶ್ಯಗಳು

ಭೂ ಕುಸಿತ
ಉತ್ತರಾಖಂಡ್, ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಭೂ ಕುಸಿತ ಹಾಗೂ ರಸ್ತೆ ಸಂಪರ್ಕ ಕಡಿತ

ಮೇಲಿನಿಂದ ಕಂಡ ಧರೆ
ಉತ್ತರಾಖಂಡ್ ನ ವಿವಿಧ ಜಿಲ್ಲೆಗಳಲ್ಲಿ ರಸ್ತೆ ಸಂಪರ್ಕ ಸಾಧ್ಯತೆ ಕಡಿಮೆ ನಡುವೆ ಸಂಚಾರ.. ವೈಮಾನಿಕ ಚಿತ್ರ

ಪ್ರವಾಹದ ಪಕ್ಕದಲ್ಲೇ
ರಸ್ತೆಗಳನ್ನು ನುಂಗಿ ಹರಿಯುತ್ತಿರುವ ಜೀವನದಿಗಳಾದ ಗಂಗೆ, ಯುಮುನಾ ರಭಸಗೊಂಡು ಬೆಚ್ಚಿರುವ ಜನತೆ

ಯೋಧರಿಂದ ರಕ್ಷಣೆ
ಉತ್ತರಾಖಂಡ್ ನ ವಿವಿಧ ಜಿಲ್ಲೆಗಳ ಬೆಟ್ಟದ ತಪ್ಪಲಿನಲ್ಲಿ ಅಪಾಯದಲ್ಲಿ ಸಿಲುಕಿರುವ ಕುಟುಂಬಗಳ ರಕ್ಷಣೆ ಮಾಡುತ್ತಿರುವ ಭಾರತೀಯ ಸೇನೆಯ ಯೋಧರು

ವೈದ್ಯಕೀಯ ನೆರವು
ರಕ್ಷಣೆ ಪಡೆದ ಸಂತ್ರಸ್ತರಿಗೆ ತುರ್ತು ವೈದ್ಯಕೀಯ ನೆರವು ನೀಡುತ್ತಿರುವ ಯೋಧರು

ತಾತ್ಕಾಲಿಕ ನೆಲೆ
ಯಾತ್ರಾರ್ಥಿಗಳಿಗೆ ತಾತ್ಕಾಲಿಕ ಶೆಡ್ ಗಳಲ್ಲಿ ನೆಲೆ ಒದಗಿಸಿರುವ ಭಾರತೀಯ ಯೋಧರು

ಅಬ್ಬಾ !ಜೀವ ಬಂತು
ನೀರಿನ ಮಧ್ಯ ಸಿಲುಕಿದ್ದ ಜನರನ್ನು ಗುರುತಿಸಿ ನೆರವು ನೀಡುತ್ತಿರುವ ಯೋಧರು

ರಸ್ತೆ ಸಿಕ್ಕಿದ್ದೆ ಖುಷಿ
ರಕ್ಷಣೆ ನೆರವು ಸಿಕ್ಕ ಮೇಲೆ ಸರಿಯಾದ ಹೆಜ್ಜೆ ಇಡುತ್ತಿರುವ ಸಿಖ್ ಸಮುದಾಯದ ಕುಟುಂಬ

ಬೆಟ್ಟದಿಂದ ಬೇರೆಡೆಗೆ
ಬೆಟ್ಟದ ತಪ್ಪಲಿನಲ್ಲಿ ಸಿಲುಕಿದ್ದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಿರುವ ಯೋಧರು

ಗಂಗೆ ಆರ್ಭಟಕ್ಕೆ ಎಲ್ಲಾ ನಾಶ
ಆಪಾಯ ಮಟ್ಟ ಮೀರಿ ಜಲ ಪ್ರವಾಹ ಸೃಷ್ಟಿಸಿರುವ ಜೀವ ನದಿಗಳು, ಮನೆಮಠಗಳು, ವಾಹನಗಳು ಕೊಚ್ಚಿಹೋಗುತ್ತಿರುವ ಭಯಂಕರ ದೃಶ್ಯ

ವಿನಾಶಗೊಂಡ ಭೂ ನಕ್ಷೆ
ಮನೆಮಠಗಳು, ವಾಹನಗಳು ಕೊಚ್ಚಿಹೋಗುತ್ತಿರುವ ಭಯಂಕರ ದೃಶ್ಯ

ಸಂಪರ್ಕ ಸೇತುವೆ
ಭಾರತೀಯ ಯೊಧರು ಕೇದಾರನಾಥ ಭಕ್ತಾದಿಗಳನ್ನು ನದಿ ದಾಟಿಸುತ್ತಿದ್ದಾರೆ.

ಪಕ್ಕದಲ್ಲೇ ಪ್ರಪಾತ
ಭೂ ಕುಸಿತದಿಂದ ಪ್ರಪಾತ ಸೃಷ್ಟಿಯಾಗಿದ್ದನ್ನು ವೀಕ್ಷಿಸುತ್ತಿದ್ದಾರೆ.

ಬೆಟ್ಟದಿಂದ ಇಳಿಯುವ ರೀತಿ
ಹೆಜ್ಜೆ ಹೆಜ್ಜೆಗೂ ಭಕ್ತಾದಿಗಳ ಸುರಕ್ಷೆ ಕಾಯುತ್ತಿರುವ ಯೋಧರು, ಬೆಟ್ಟದಿಂದ ಇಳಿಯಲು ಸಹಾಯ ಮಾಡುತ್ತಿದ್ದಾರೆ.

ಭದ್ರತೆ ಸಿಕ್ಕ ಖುಷಿ
ಸುರಕ್ಷಿತ ಸ್ಥಳಕ್ಕೆ ಬಂದಿಳಿಯುತ್ತಿರುವ ಭಕ್ತಾದಿಗಳು

ಆಹಾರದ ಕೊರತೆ
ತಾತ್ಕಾಲಿಕವಾಗಿ ಸಿಕ್ಕ ತಿಂಡಿ, ತೀರ್ಥದಲ್ಲೇ ಭಕ್ತಾದಿಗಳು ತೃಪ್ತಿಪಡುತ್ತಿದ್ದಾರೆ. ಆಹಾರ ಕೊರತೆ ಇನ್ನೂ ಕಾಡುತ್ತಿದೆ.

ನೀರಿನ ದಾಹ
ಕೊರೆಯುವ ಚಳಿಯಲ್ಲಿ ಜಲಪ್ರಳಯದ ನಡುವೆ ನೀರಿನ ದಾಹ ಆಮ್ಲಜನಕ ಕೊರತೆ ಕಾಡುತ್ತಿದೆ.

ದಾರಿ ಕಾಣಿಸುತ್ತಿದೆ
ಉತ್ತರಾಖಂಡ್ ನ ವಿವಿಧ ಜಿಲ್ಲೆಗಳ ಬೆಟ್ಟದ ತಪ್ಪಲಿನಲ್ಲಿ ಅಪಾಯದಲ್ಲಿ ಸಿಲುಕಿರುವ ಕುಟುಂಬಗಳ ರಕ್ಷಣೆ ಮಾಡುತ್ತಿರುವ ಭಾರತೀಯ ಸೇನೆಯ ಯೋಧರು

ಸಂತ್ರಸ್ತರಿಗೆ ಆಸರೆ
ಉತ್ತರಾಖಂಡ್ ನ ವಿವಿಧ ಜಿಲ್ಲೆಗಳ ಬೆಟ್ಟದ ತಪ್ಪಲಿನಲ್ಲಿ ಭಾರತೀಯ ಸೇನೆಯ ಯೋಧರು ನೆರವಿನ ಹಸ್ತ ಚಾಚಿದ ದೃಶ್ಯಗಳು

ಸುರಕ್ಷೆ
ಉತ್ತರಾಖಂಡ್ ನ ವಿವಿಧ ಜಿಲ್ಲೆಗಳ ಬೆಟ್ಟದ ತಪ್ಪಲಿನಲ್ಲಿ ಅಪಾಯದಲ್ಲಿ ಸಿಲುಕಿರುವ ಕುಟುಂಬಗಳ ರಕ್ಷಣೆ ಮಾಡುತ್ತಿರುವ ಭಾರತೀಯ ಸೇನೆಯ ಯೋಧರು

ಸಂತ್ರಸ್ತರಿಗೆ ಆಸರೆ
ಮಳೆ ರುದ್ರ ನರ್ತನ ಹಾಗೂ ಯೋಧರು, ಆರೆಸ್ಸೆಸ್ ನೆರವಿನ ಹಸ್ತ ಚಾಚಿದ ಚಿತ್ರಗಳು ಇಲ್ಲಿದೆ ತಪ್ಪದೇ ನೋಡಿ

ಕೊರೆಯುವ ಚಳಿ
ಆರ್ಮಿ ಕ್ಯಾಂಪಿನಲ್ಲಿ ತಾತ್ಕಾಲಿಕ ರಕ್ಷಣೆ ಪಡೆದಿರುವ ಭಕ್ತಾದಿಗಳಿಗೆ ಚಳಿಯ ಕಾಟ ಕಾಡುತ್ತಿದೆ.

ಮಕ್ಕಳ ರಕ್ಷಣೆ
ಸುರಕ್ಷೆ ಜಾಕೆಟ್ ಧರಿಸಿದ ಮಕ್ಕಳಲ್ಲಿ ನೆಮ್ಮದಿಯ ಭಾವ

ತಾತ್ಕಾಲಿಕ ಆಹಾರ
ಆರ್ಮಿ ಕ್ಯಾಂಪಿನಲ್ಲಿ ತಾತ್ಕಾಲಿಕ ರಕ್ಷಣೆ ಊಟ ವ್ಯವಸ್ಥೆ

ಜೀವ ಭಯ ಲೆಕ್ಕಿಸದ ಯೋಧ
ಜಲ ಪ್ರವಾಹದ ನಡುವೆ ಈಜುತ್ತಿರುವ ಭಾರತೀಯ ಸೇನೆಯ ಯೋಧ

ಆರೋಗ್ಯ ನೆರವು
ತಾತ್ಕಾಲಿಕ ಆರೋಗ್ಯ ಕ್ಯಾಂಪ್ ನಲ್ಲಿ ವೈದ್ಯಕೀಯ ನೆರವು ನೀಡಲಾಗುತ್ತಿದೆ.

ಬೆಟ್ಟದಿಂದ ಧರೆಗೆ
ಮಳೆ ರುದ್ರ ನರ್ತನ ಹಾಗೂ ಯೋಧರು, ಆರೆಸ್ಸೆಸ್ ನೆರವಿನ ಹಸ್ತ ಚಾಚಿದ ಚಿತ್ರಗಳು

ಬೆಟ್ಟದಿಂದ ಧರೆಗೆ
ಬೆಟ್ಟದ ತಪ್ಪಲಿನಲ್ಲಿ ಸಿಲುಕಿದ್ದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಿರುವ ಯೋಧರು

ಬೆಟ್ಟದಿಂದ ಬೇರೆಡೆಗೆ
ಬೆಟ್ಟದ ತಪ್ಪಲಿನಲ್ಲಿ ಸಿಲುಕಿದ್ದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಿರುವ ಯೋಧರು

ಎಲ್ಲೆಡೆ ನೀರು
ಉತ್ತರಾಖಂಡ್ ನ ವಿವಿಧ ಜಿಲ್ಲೆಗಳಲ್ಲಿ ರಸ್ತೆ ಸಂಪರ್ಕ ಸಾಧ್ಯತೆ ಕಡಿಮೆ ನಡುವೆ ಸಂಚಾರ.. ವೈಮಾನಿಕ ಚಿತ್ರ

ಬೆಟ್ಟದಿಂದ ಬೇರೆಡೆಗೆ
ಬೆಟ್ಟದ ತಪ್ಪಲಿನಲ್ಲಿ ಸಿಲುಕಿದ್ದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಿರುವ ಭಾರತೀಯ ಸೇನೆ ಯೋಧರು

ಎಲ್ಲವೂ ಕೊಚ್ಚಿ ಹೋಗಿದೆ
ಜಲ ಪ್ರಳಯದ ವೈಮಾನಿಕ ದೃಶ್ಯ

ಬೆಟ್ಟದಿಂದ ಧರೆಗೆ
ಹೆಜ್ಜೆ ಹೆಜ್ಜೆಗೂ ಭಕ್ತಾದಿಗಳ ಸುರಕ್ಷೆ ಕಾಯುತ್ತಿರುವ ಯೋಧರು, ಬೆಟ್ಟದಿಂದ ಇಳಿಯಲು ಸಹಾಯ ಮಾಡುತ್ತಿದ್ದಾರೆ.

ಪರೀಕಾರ್ಥ ನೋಟ
ಭಾರತೀಯ ಸೇನೆ ಅಧಿಕಾರಿಯೊಬ್ಬರು ರಸ್ತೆ ಸಂಪರ್ಕ ಕಡಿತಗೊಂಡಿರುವುದನ್ನು ವೀಕ್ಷಿಸುತ್ತಿದ್ದಾರೆ.
-
Bengaluru Rain: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ: ಯುಗಾದಿಗೆ ಮೊದಲ ಮಳೆ; ರಾಜ್ಯಕ್ಕೆ ಶುಭಸೂಚಕ -
ಮೊದಲ ಮಳೆಗೆ ಎಚ್ಚೆತ್ತ GBA: 2000 ಕೋಟಿ ರೂ. ವೆಚ್ಚದ ರಾಜಕಾಲುವೆ ಕಾಮಗಾರಿಗಳಿಗೆ ಡೆಡ್ಲೈನ್ -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Rain Alert: ಬೇಸಿಗೆ ಮಳೆಗೆ ಬೆಂಗಳೂರಿನ ಕೆಲವೆಡೆ ಸಂಚಾರ ಅಸ್ತವ್ಯಸ್ತ, ಮಾ.21ರವರೆಗೂ ಮಳೆ -
Karnataka Rain Alert: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ, ಮಿನಿ ಕಾಶ್ಮೀರದಂತಾದ ರಸ್ತೆಗಳು; ಇನ್ನೆಷ್ಟು ದಿನ ವರುಣನ ಆರ್ಭಣ? -
Bengaluru Rain: ಬೆಂಗಳೂರಿನಲ್ಲಿ ತಾಪಮಾನ ಕುಸಿತ: ಸುಡುಬಿಸಿಲಿಗೆ ಬ್ರೇಕ್ ಹಾಕಿದ ವರ್ಷದ ಮೊದಲ ಮಳೆ, ತಂಪಾದ ಸಿಲಿಕಾನ್ ಸಿಟಿ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು












Click it and Unblock the Notifications