ಮೋಕಾ ಪಕಡ್ ಬಂಧಿ ಬಿಗಿ: ಶ್ರೀಶಾಂತ್ ಕಥೆ ಫಿನಿಶ್
ನವದೆಹಲಿ, ಜೂನ್ 5: ಕಳ್ಳಾಟದ ಬೆನ್ನುಹತ್ತಿರುವ ಪೊಲೀಸರು ನಿನ್ನೆ ಸಖತ್ ಧೈರ್ಯ/ಬುದ್ಧಿಮತ್ತೆ ತೋರಿದ್ದಾರೆ. ಕಳ್ಳಾಟಕ್ಕೆ ಸಾಧ್ಯವಾದಷ್ಟು ಮಟ್ಟಿಗೆ ಅಂತ್ಯಹಾಡಿ ಸಭ್ಯ ಆಟಕ್ಕೆ ಅಂಟಿರುವ ಕಳಂಕವನ್ನು ಹೋಗಲಾಡಿಸಲು ಮುಂದಾಗಿರುವ ಪೊಲೀಸರು ಕಳ್ಳಾಟದ A1 ಧೂರ್ತ ಶ್ರೀಶಾಂತನ ವಿರುದ್ಧ ಮೋಕಾ (MCOCA) ಕೇಸು ಜಡಿದಿದ್ದಾರೆ.
A1 ಧೂರ್ತ ಶ್ರೀಶಾಂತ ಈಗ ಒಂದಿನಿತೂ ಅನುಮಾನಕ್ಕೆ ಎಡೆಮಾಡಿಕೊಡದಂತೆ ತಾನು ತಪ್ಪಿತಸ್ಥನಲ್ಲ ಎಂದು ನಿರೂಪಿಸುವುದು ಅತ್ಯಗತ್ಯವಾಗಿದೆ. ಇಲ್ಲವಾದಲ್ಲಿ Maharashtra Control of Organised Crime Act ಅನ್ವಯ ಸೆಕ್ಷನ್ 3ರಲ್ಲಿ ದೆಹಲಿ ಪೊಲೀಸರು ಕೇಸು ದಾಖಲಿಸಿರುವುದರಿಂದ ಶ್ರೀಶಾಂತ ತಾನು ಬಳಸುತ್ತಿದ್ದ ಕುಖ್ಯಾತ ಬಿಳಿ ಟರ್ಕಿ ಟವಲಿನಲ್ಲಿ ಜೀವಾವಧಿ ಕಣ್ಣೀರು ಒರಿಸಿಕೊಳ್ಳುವ ದುರ್ಗತಿ ಒದಗಲಿದೆ.

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಈ ತ್ರಿಮೂರ್ತಿಗಳ ವಿರುದ್ಧ ಬಲಾಢ್ಯ ಸಾಕ್ಷ್ಯವಿದೆ. ಹಾಗಾಗಿ ಅವರ ವಿರುದ್ಧ ಮೋಕಾ ಜಾರಿಗೊಳಿಸಿರುವುದಾಗಿ ಪೊಲೀಸರು ನಿನ್ನೆ ಕೋರ್ಟಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಪ್ರಕರಣದಲ್ಲಿ ಇನ್ನೂ 20ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದೇವೆ ಎಂದೂ ಪೊಲೀಸರು ಹೇಳಿದ್ದಾರೆ.
ಶ್ರೀಶಾಂತನ ವಿರುದ್ಧ ಆರೋಪ ದೃಢಪಟ್ಟರೆ ಜೀವಾವಧಿ ಶಿಕ್ಷೆ (ಇತ್ತೀಚೆಗೆ ಜೀವಾವಧಿ ಶಿಕ್ಷೆ ಅಂದರೆ ಜೀವನದುದ್ದಕ್ಕೂ ಜೈಲು ಶಿಕ್ಷೆ ಅನುಭವಿಸುವುದು ಎಂದು ಮಾರ್ಪಟ್ಟಿದೆ) ಜತೆಗೆ 5 ಲಕ್ಷ ರೂ ದಂಡ ತೆರಬೇಕಾಗುತ್ತದೆ. ಜತೆಗೆ ಆರೋಪಿಗಳಿಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ಶ್ರೀಶಾಂತನೇನೋ ಸರಿ ಈಗಾಗಲೇ ತಮ್ಮ ಸುಪರ್ದಿಯಲ್ಲಿದ್ದಾನೆ. ಆದರೆ ಆ ಜೋಡಿಯೆಲ್ಲಿ? ದಾವೂದ್ ಇಬ್ರಾಹಿಂ ಮತ್ತು ಛೋಟಾ ಶಕೀಲರು? ಇವರನ್ನು ಯಾವಾಗ ಹೆಡೆಮುರಿಗೆ ಕಟ್ಟಿ ಭಾರತಕ್ಕೆ ತರುವುದು?
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications