ಚಿಲ್ಲರೆ ಹಣಕ್ಕಾಗಿ ಐದು ಕೊಲೆ, ಸೈಕೋ ಕಿಲ್ಲರ್ ಬಂಧನ

ಬುಧವಾರ ಮೈಸೂರಿನ ಮಂಡಿ ಠಾಣಾ ಪೊಲೀಸರು, ಶಾಂತಿನಗರ ನಿವಾಸಿ ಕೈಸರ್ (24) ಹಾಗೂ ಆತನ ಸಹಚರ ಹರೀಶ್(26) ಬಂಧಿತರು. ನಿರುದ್ಯೋಗಿಯಾಗಿದ್ದ ಕೈಸರ್, ಕುಡಿತ ಸೇರಿದಂತೆ ದುಶ್ಚಟಕ್ಕೆ ಬಲಿಯಾಗಿದ್ದ. ಹಣ ಗಳಿಸಲು ಈತ ಕೊಲೆ ಮಾಡುತ್ತಿದ್ದ ಎಂದು ನಗರ ಪೊಲೀಸ್ ಆಯುಕ್ತ ಕೆ.ಎಲ್.ಸುಧೀರ್ ಹೇಳಿದ್ದಾರೆ.
ಬಂಧಿತ ಕೈಸರ್ ಮತ್ತು ಹರೀಶ್ ಮೇ 19ರಂದು ಮೈಸೂರಿನ ಆರ್ಎಂಸಿ ಬಳಿ, ಕೂಲಿ ಕಾರ್ಮಿಕನ ಜೊತೆ ಜಗಳವಾಡಿ, ಆತನ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಹಣ ದೋಚಿ ಪರಾರಿಯಾಗಿದ್ದರು. ಇವರಿಬ್ಬರ ಮೇಲೆ ಮೈಸೂರಿನ ವಿವಿಧ ಠಾಣೆಗಳಲ್ಲಿ ಐದಕ್ಕೂ ಹೆಚ್ಚು ಕೊಲೆ ಪ್ರಕರಣಗಳು ದಾಖಲಾಗಿವೆ.
ಕೈಸರ್ ಓರ್ವ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವುದಲ್ಲದೆ, ನೂರು ರೂಪಾಯಿಗಳಿಗಾಗಿಯೂ ಕೊಲೆ ಮಾಡಿದ್ದೇನೆ ಎಂದು ಪೊಲೀಸರು ಹೇಳಿದ್ದಾರೆ. ಕೈಸರ್ ಮೇಲೆ ಉದಯಗಿರಿ, ಲಷ್ಕರ್, ಹಾಗೂ ವಿವಿ ಪುರಂ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣಗಳು ದಾಖಲಾಗಿದ್ದವು.
ಹರೀಶ್ ಸಹ ಕೈಸರ್ ಮಿತ್ರನಾಗಿದ್ದು ಕೊಲೆ ಪ್ರಕರಣಗಳಲ್ಲಿ ಆತನಿಗೆ ಸಹಾಯ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಜನರ ಪರಿಚಯ ಮಾಡಿಕೊಂಡು ಸ್ನೇಹ ಸಂಪಾದಿಸಿ, ಕುಡಿದ ಮತ್ತಿನಲ್ಲಿ ಅವರನ್ನು ಕೊಂದು ಹಣ ದೋಚುವುದೇ ಇವರ ಕೆಲಸವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಬಂಧಿತರು ಜೊತೆಯಾಗಿ ಉದಯಗಿರಿ ಠಾಣಾ ವ್ಯಾಪ್ತಿಯ ಕೆ.ಆರ್.ನಗರದ ನಿವಾಸಿ ಲತಾ (40), ಲಷ್ಕರ್ ಠಾಣಾ ವ್ಯಾಪ್ತಿಯಲ್ಲಿ ಚಾಂದ್ ಷರೀಫ್, ಗುಂಡ್ಲುಪೇಟೆಯಲ್ಲಿ ಬಸವಶೆಟ್ಟಿಯನ್ನು ಕೊಲೆ ಮಾಡಿದ್ದರು.
ಹೊಳೆ ನರಸೀಪುರದಲ್ಲಿ ಸೋಮಚಾರಿ ಎಂಬುವವನ್ನು ಕೊಲೆ ಮಾಡಿ ಎರಡು ಸಾವಿರ ರೂಪಾಯಿ ದೋಚಿದ್ದರು. ಇವರ ಬಂಧನದ ಮೂಲಕ ನಗರದಲ್ಲಿ ಒಂಭತ್ತು ತಿಂಗಳಿನಲ್ಲಿ ನಡೆದ ಐದು ಕೊಲೆಗಳ ರಹಸ್ಯ ಬಯಲಾಗಿದೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications