ಲಕ್ಷ್ಮೀ ಮಿತ್ತಲ್ ಕೊಲೆಗೆ ಫ್ರಾನ್ಸ್ ಆಟ

ನಮ್ಮ ಎದುರಿಗಿರುವ ಶತ್ರುವನ್ನು ಮುಟ್ಟಲೂ ಆಗದಿದ್ದಾಗ, ನಾವು ಆತನ ಪೋಟೋವನ್ನು ಸುಟ್ಟುಹಾಕಿ ವಿರೋಧ ವ್ಯಕ್ತಪಡಿಸುತ್ತೇವೆ. ಇದೇ ತಂತ್ರವನ್ನು ಫ್ರಾನ್ಸ್ ಸದ್ಯ ಅನುಸರಿಸಿದ್ದು, ಪರದೆಯ ಮೂಲಕ ಮಿತ್ತಲ್ ಅವರನ್ನು ಕೊಂದು ಸೇಡು ತೀರಿಸಿಕೊಳ್ಳುತ್ತಿದ್ದಾರೆ.
ಕಿಲ್ ಮಿತ್ತಲ್ ಎಂಬ ವಿಡಿಯೊ ಗೇಮ್ ಗೆ ಭಾರಿ ಜನಪ್ರಿಯತೆ ಜೊತೆಗೆ ವಿರೋಧವೂ ವ್ಯಕ್ತವಾಗಿದೆ. ಗೇಮ್ನ ನಿರ್ಮಿಸಿದ ಅಲೆಕ್ಸಾಂಡರ್ ಗ್ರಿಲ್ಲೆಟ್ಟಾ. ಇದು ಯುವಕರನ್ನು ಪ್ರಚೋದಿಸುವ ತಂತ್ರವಲ್ಲ. ಇದೊಂದು ಕಿಲ್ ಮಿತ್ತಲ್ ವಿಡಿಯೊ ಗೇಮ್ನಲ್ಲಿ ರಕ್ತಸಿಕ್ತ ಹಿಂಸಾಚಾರವೇನೂ ಇಲ್ಲ. ಇದು ಕೇವಲ ಆಟವಷ್ಟೇ ಎಂದು ತಮ್ಮ ಘನ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ.
ಮಿತ್ತಲ್ ಮೇಲೆ ಕೋಪವೇಕೆ : ಫ್ರಾನ್ಸ್ ನಲ್ಲಿ ಉಕ್ಕು ಕಂಪನಿಗಳನ್ನು ಸ್ಥಾಪಿಸಿ ಮಿತ್ತಲ್ ಸುಮಾರು 20 ಸಾವಿರ ಜನರಿಗೆ ಉದ್ಯೋಗ ನೀಡಿದ್ದಾರೆ. ಆದರೆ, ಕೆಲವು ದಿನಗಳ ಹಿಂದೆ ದಕ್ಷಿಣ ಫ್ರಾನ್ಸ್ನ ಫ್ಲೊರೆಂಜ್ನಲ್ಲಿರುವ ಅವರ ಕಬ್ಬಿಣ ಅದಿರು ಕರಗಿಸುವ ಘಟಕವೊಂದು ಮುಚ್ಚಿಹೋಗಿದೆ.
ಇದರ ಜೊತೆಗೆ ಡನ್ಕಿರ್ಕ್ನಲ್ಲಿರುವ ಘಟಕವೊಂದರ ಪುನಶ್ಚೇತನ ಯೋಜನೆಯನ್ನು ಮಿತ್ತಲ್ ಕಂಪನಿ ಮುಂದೂಡಿದೆ. ಇದರಿಂದಾಗಿ ಸಾವಿರಾರು ನೌಕರರು ಉದ್ಯೋಗ ಕಳೆದುಕೊಂಡಿದ್ದಾರೆ. ಹೀಗೆ ನಿರುದ್ಯೋಗಿಗಳಾದ ಕಾರ್ಮಿಕರ ಅಭಿಪ್ರಾಯ ಸಂಗ್ರಹಿಸಿ ಅಲೆಕ್ಸಾಂಡರ್ ವಿಡಿಯೋ ಗೇಮ್ ಸಿದ್ದ ಪಡಿಸಿ ತನ್ನ ಜೇಬು ತುಂಬಿಸಿಕೊಂಡಿದ್ದಾನೆ.
ಆಟದಲ್ಲಿ ಏನಿದೆ : ವಿಡಿಯೋ ಗೇಮ್ ನಲ್ಲಿ ಲಕ್ಷ್ಮಿ ಮಿತ್ತಲ್ ಅವರರನ್ನು ರೊಬೊಟ್ ಕಾರ್ಟೂನ್ ಮಾದರಿಯಲ್ಲಿ ಚಿತ್ರಿಸಲಾಗಿದೆ. ಮಿತ್ತಲ್ ಮತ್ತು ಪೊಲೀಸರತ್ತ ಆಟವಾಡುವ ಜನರು ಬ್ಯಾರಲ್ಗಳನ್ನು ಹಾಗೂ ಕೋಲಿನಂತಹ ವಸ್ತುಗಳನ್ನು ಎಸೆದು ಕಂಪನಿ ಪ್ರಾರಂಭಿಸುವಂತೆ ಒತ್ತಾಯಿಸಬಹುದು.
ಫ್ರಾನ್ಸ್ ನ ಈ ಕಾರ್ಯಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ತಮ್ಮ ದೇಶದ ಜನರಿಗೆ ಉದ್ಯೋಗ ನೀಡಿದ್ದಾರೆ ಎಂಬ ಕೃತಜ್ಞತೆ ಮರೆತ ಫ್ರಾನ್ಸ್ ಕಿಲ್ ಮಿತ್ತಲ್ ಎಂಬ ಹೆಸರಿಟ್ಟು, ಆಟವಾಡುತ್ತಿದೆ. ದೇಶದ ಇಂತಹ ಕೆಲಸಕ್ಕೆ ಏನು ಹೇಳಬೇಕೋ ತಿಳಿಯದು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications