ಫಣೀಶ್ ಮೇಲೆ ಕಾನೂನು ಸಮರಕ್ಕೆ ರೊಯಿಜ್ ಸಜ್ಜು
ಕ್ಯಾಲಿಫೋರ್ನಿಯಾ, ಮೇ.23: ಅರಸೆಲಿ ರೊಯಿಜ್ ಅವರೊಡನೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ಹೊಂದಿದ ಆರೋಪದ ಮೇಲೆ ಫಣೀಶ್ ಮೂರ್ತಿ ಅವರು ಐಗೇಟ್ ತೊರೆಯಬೇಕಾಯಿತು. ಈಗ ರೊಯಿಜ್ ಅವರು ಗರ್ಭಿಣಿಯಾಗಿದ್ದು, ಫಣೀಶ್ ವಿರುದ್ಧ ಲಕ್ಷಾಂತರ ಡಾಲರ್ ಗಳ ಮೊಕದ್ದಮೆ ಹೂಡಲು ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ.
ರೋಯಿಜ್ ಅವರು ಬೇಡದ ಗರ್ಭವನ್ನು ತೆಗೆಸಲು ನಿರಾಕರಿಸಿದ್ದು, ಅಬಾರ್ಷನ್ ಗೆ ಒಪ್ಪಿಲ್ಲ. ರೊಯಿಜ್ ಅವರನ್ನು ಕೆಲಸದಿಂದ ತೆಗೆದು ಹಾಕಲು ಫಣೀಶ್ ಯತ್ನಿಸಿದ್ದರು. ಜೊತೆ ಸಂಬಂಧವನ್ನು ಗುಪ್ತವಾಗಿ ಇರಿಸಿಕೊಳ್ಳಲು ಯೋಜಿಸಿದ್ದರು ಎಂದು ರೋಯಿಜ್ ಪರ ಕಾನೂನು ಸಂಸ್ಥೆ ಐಮಾನ್ ಸ್ಮಿತ್ ಅಂಡ್ ಮರ್ಸಿ ಪತ್ರಿಕಾ ಹೇಳಿಕೆ ನೀಡಿದೆ.

ಈ ಘಟನೆ ನಂತರ ಮೂರ್ತಿ ಅವರು ಐಗೇಟ್ ಬೋರ್ಡಿಗೆ ಈ ವಿಷಯ ತಿಳಿಸಿದರು. ಅಷ್ಟರಲ್ಲಿ ಬೋರ್ಡ್ ಸದಸ್ಯರಿಗೆ ಇವರಿಬ್ಬರ ಸಂಬಂಧದ ಬಗ್ಗೆ ಮಾಹಿತಿ ಸಿಕ್ಕಿತ್ತು. ಈಗ ರೋಯಿಜ್ ಪರವಾಗಿ ಕಾನೂನು ಸಮರ ನಡೆಸುತ್ತಿದ್ದೇವೆ ಮೂರ್ತಿ ಹಾಗೂ ಐಗೇಟ್ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತ್ತೇವೆ ಎಂದು ಕಾನೂನು ಸಂಸ್ಥೆ ಹೇಳಿದೆ.
ಇದಕ್ಕೂ ಮುನ್ನ ಫೋರ್ಬ್ ಇಂಡಿಯಾ ಜೊತೆ ಮಾತನಾಡುತ್ತಾ ಮೂರ್ತಿ ಅವರು, ಸತ್ಯಕ್ಕೆ ಎರಡು ಮುಖಗಳಿರುತ್ತದೆ. ಪ್ರಕರಣ ಈಗ ಕೋರ್ಟ್ ಮೆಟ್ಟಿಲೇರುವ ಹಂತದಲ್ಲಿದೆ ಹೀಗಾಗಿ ನಾನು ಹೆಚ್ಚು ಪ್ರತಿಕ್ರಿಯಿಸಲಾರೆ ಎಂದಿದ್ದರು. ರೋಯಿಜ್ ಸದ್ಯಕ್ಕೆ ಮೆಡಿಕಲ್ ರಜೆ ಪಡೆದಿದ್ದಾರೆ. ಫ್ರಿಮಾಂಟ್ ನಿವಾಸದಲ್ಲಿ ಕುಳಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಮೂರ್ತಿ ತಮ್ಮ ರಾಜೀನಾಮೆ ಬಗ್ಗೆ ಸಾರ್ವಜನಿಕ ಹೇಳಿಕೆ ನೀಡಿದ್ದರು.
ಫಸ್ಟ್ ಪೋಸ್ಟ್ ನ ವರದಿಗಾರರು ರೋಯಿಜ್ ಪರ ಕಾನೂನು ಸಂಸ್ಥೆಯೊಡನೆ ಮಾತನಾಡಿ ಕೆಲವು ಕುತೂಹಲ ಪ್ರಶ್ನೆಗಳನ್ನು ಕೇಳಿದ್ದಾರೆ.
ಪ್ರಶ್ನೆ : ಐಗೇಟ್ ಸೇರುವ ಮೊದಲು ರೋಯಿಜ್ ಹಾಗೂ ಮೂರ್ತಿಗೆ ಗೆಳತನವಿತ್ತಾ?
ಉತ್ತರ: ಇಲ್ಲ
ಪ್ರ: ಗರ್ಭಧಾರಣೆ ಬಗ್ಗೆ ರೋಯಿಜ್ ಗೆ ಯಾವಾಗ ತಿಳಿಯಿತು?
ಉ: ಮಾರ್ಚ್ 2013
ಪ್ರ: ತಮ್ಮಿಬ್ಬರ ಸಂಬಂಧದ ಬಗ್ಗೆ ಬೋರ್ಡ್ ಗೆ ಮೂರ್ತಿ ಯಾವಾಗ ಹೇಳಿದರು?
ಉ: ಮೇ 2, 2013
ಪ್ರ: ಐಗೇಟ್ ನಿಂದ ರೋಯಿಜ್ ಹೊರ ಹಾಕಲು ಫಣೀಶ್ ಯತ್ನಿಸಿದ್ದರೆ?
ಉ: ಹೌದು, ಐಗೇಟ್ ತೊರೆಯುವಂತೆ ಸೂಚಿಸಿದ್ದರು.
ರೋಯಿಜ್ ಪರ ವಕೀಲರು ನೀಡಿರುವ ಪತ್ರಿಕಾ ಹೇಳಿಕೆ ಪೂರ್ಣ ಪಾಠ ಇಲ್ಲಿದೆ
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications