ಚೆನ್ನೈ ನಲ್ಲಿ ಬಲೆಗೆ ಬಿದ್ದ 6 ಮಂದಿ ಬುಕ್ಕಿಗಳು

ಚೆನ್ನೈನ ಸೌಕಾರ್ ಪೇತ್, ತ್ರಿಪ್ಲಿಕೆನ್, ಪುರುಷ್ ವಾಲ್ಕಂ ಸೇರಿದಂತೆ ನಾಲ್ಕು ವಿವಿಧ ಪ್ರದೇಶಗಳಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಬೆಟ್ಟಿಂಗ್ ಜಾಲದ ಪ್ರಮುಖ ಆರೋಪಿ ಎಸ್.ವಿರುಧಾಚಲಂ ಅಲಿಯಾಸ್ ವೇಧಾಚಲಂ, ಹೆಸರೂ ಸೇರಿದೆ. ಉಳಿದ ಮೂವರು ಬುಕ್ಕಿಗಳು ಕಣ್ಮರೆಯಾಗಿದ್ದು ಅವರಲ್ಲೊಬ್ಬ ದಕ್ಷಿಣ ಆಪ್ರಿಕಾಕ್ಕೆ ಸೇರಿದವನು ಎಂದು ತಿಳಿದುಬಂದಿದೆ.
ಕಳೆದೊಂದು ದಶಕಗಳಿಂದ ಲೀಲಾಜಾಲವಾಗಿ ನಡೆಯುತ್ತಿದ್ದ ಈ ಬೆಟ್ಟಿಂಗ್ ಮಾಫಿಯಾ ಸಂಬಂಧ ರಾಜಸ್ತಾನ ರಾಯಲ್ಸ್ ತಂಡದ ಶ್ರೀಶಾಂತ್, ಅಂಕೀತ್ ಚವ್ಹಾಣ್ ಮತ್ತು ಅಜಿತ್ ಚಂಡಿಲ ಜತೆಗೆ 14 ಮಂದಿ ಬುಕ್ಕಿಗಳನ್ನು ದೆಹಲಿ ಪೊಲೀಸರು ಬಂಧಿಸಿದ ಬೆನ್ನಲ್ಲೇ ತಮಿಳುನಾಡು ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಯಾವೊಬ್ಬ ತಮಿಳುನಾಡು ಆಟಗಾರರ ಮೇಲೂ ಅನುಮಾನ ವ್ಯಕ್ತವಾಗಿಲ್ಲ ಎಂದು Crime Branch-Crime Investigation Department (CBCID) ಅಧಿಕಾರಿಗಳು ಹೇಳಿದ್ದಾರೆ.
ಹಣ ಪಾವತಿಯ ದಾಖಲೆಗಳು, ಐದು ಲ್ಯಾಪ್ ಟಾಪ್ ಮತ್ತು ಎರಡು ಡೆಸ್ಕ್ ಟಾಪ್ ಕಂಪ್ಯೂಟರುಗಳು, ಆರು ಲ್ಯಾಂಡ್ ಲೈನ್ ಫೋನು, ಆರು ವೈರ್ ಲೆಸ್ ಫಿಕ್ಸೆಡ್ ಲ್ಯಾಂಡ್ ಫೋನ್ ಗಳನ್ನು ಹಾಗೂ 14.3 ಲಕ್ಷ ರೂಪಾಯಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಬುಕ್ಕಿಗಳಿಗೂ, ದೆಹಲಿ, ಮುಂಬಯಿ ಮತ್ತು ಅಹಮದಾಬಾದಿನಲ್ಲಿರುವ ಬುಕ್ಕಿಗಳಿಗೂ ನಿಕಟ ಸಂಪರ್ಕವಿರುವ ಮಾಹಿತಿ ಈಗಾಗಲೇ ಲಭ್ಯವಾಗಿದೆ. ಆದರೆ ಇದೀಗ ಚೆನ್ನೈನಲ್ಲಿ ಬಂಧಿಯಾಗಿರುವ ಯಾವುದೇ ಆರೋಪಿಗಳಿಗೂ ಸ್ಪಾಟ್ ಫಿಕ್ಸಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಜಾಲದಲ್ಲಿ ಸಿಲುಕಿರುವ ಕ್ರಿಕೆಟ್ ಆಟಗಾರರಿಗೂ ಯಾವುದೇ ರೀತಿಯ ಸಂಪರ್ಕವಿರುವುದು ಕಂಡುಬಂದಿಲ್ಲ.
ದೆಹಲಿಯಲ್ಲಿ ವಿಚಾರಣೆ: ಈ ನಡುವೆ ನಿನ್ನೆ ಬಂಧಿತರಾದ ಮೂವರು ಆಟಗಾರ ಪೈಕಿ ಅಂಕಿತ್ ಚೌವ್ಹಾಣ್ ತನ್ನ ತಪ್ಪು ಒಫ್ಪಿಕೊಂಡಿದ್ದಾನೆ. ಐಪಿಎಲ್ ನ ಆರನೆ ಆವೃತ್ತಿಯಲ್ಲಿ ನಡೆದಿರುವ 15 ಪಂದ್ಯಗಳ ಬಗ್ಗೆ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಈ ಬಾರಿ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭೂಗತ ಪಾತಕಿಗಳ ನಂಟು ಹೊಂದಿರುವುದು ಕಂಡುಬಂದಿದೆ.
ನವದೆಹಲಿ, ಮುಂಬೈ, ಅಹಮದಾಬಾದ್, ಕೊಚ್ಚಿ, ಕರಾಚಿ, ದುಬೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಬುಕ್ಕಿಗಳು ಅಲ್ಲಿಂದಲೇ ಕುಳಿತು ಸ್ಪಾಟ್ ಫಿಕ್ಸಿಂಗ್ ನಡೆಸಿದ್ದಾರೆ. ಮುಂಬೈ ಇಂಡಿಯನ್ಸ್, ಕಿಂಗ್ಸ್ ಪಂಜಾಬ್, ಪುಣೆ ವಾರಿಯರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಡೇರ್ ಡೇವಿಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಸೇರಿದಂತೆ ಪ್ರಮುಖ ಪಂದ್ಯಗಳು ನಡೆಯುವಾಗ ರಾಜಸ್ಥಾನ್ ರಾಯಲ್ಸ್ ನ ಈ ಆಟಗಾರರು ಬುಕ್ಕಿಗಳ ಜತೆ ಸಂಪರ್ಕ ಹೊಂದಿರುವ ಶಂಕೆ ವ್ಯಕ್ತವಾಗಿದೆ. ತನಿಖೆ ಮುಂದುವರೆದಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications