ಸಿಎಂ ಸಿದ್ದು ಮಾಧ್ಯಮ ಸಲಹೆಗಾರರಾಗಿ ದಿನೇಶ್

Dinesh Aminmattu as Siddaramaiah's Media advisor
ಬೆಂಗಳೂರು, ಮೇ.14: ರಾಜ್ಯದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿ ಹಿರಿಯ ಪತ್ರಕರ್ತ, ರಾಜಕೀಯ ವಿಶ್ಲೇಷಕ ದಿನೇಶ್ ಅಮೀನ್ ಮಟ್ಟು ಅವರನ್ನು ನೇಮಕ ಮಾಡಿ ಮಂಗಳವಾರ ಆದೇಶ ಹೊರಡಿಸಲಾಗಿದೆ.

ಪಿ.ಕೆ.ಶ್ರೀನಿವಾಸ್ ಸಲಹೆಗಾರರಾಗಿದ್ದರಿಂದ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರ ಸಾರ್ವಜನಿಕ ವ್ಯಕ್ತಿತ್ವ ಹೆಚ್ಚಾಗಿತ್ತು. ಜಗದೀಶ್ ಅವರು ಆಗಿನ ಸಿಎಂ ಯಡಿಯೂರಪ್ಪ ಅವರಿಗೆ ಆಗಾಗ ಕಿವಿ ಮಾತು ಹೇಳಿದ್ದು ಹೆಚ್ಚಿನ ಲಾಭ ತರಲಿಲ್ಲ ಎಂಬ ಮಾತು ಮಾಧ್ಯಮ ವಲಯದಲ್ಲಿದೆ. ಈಗ ದಿನೇಶ್ ಅವರ ಬಗ್ಗೆ ಕೂಡಾ ಕುತೂಹಲ ಹೆಚ್ಚಿದೆ.

ಮಾಧ್ಯಮಗಳ ಮುಂದೆ ನಡೆದುಕೊಳ್ಳುವ ರೀತಿ ನೀತಿ ಹೇಗಿರಬೇಕು? ಏನು ಹೇಳಬೇಕು? ಎಷ್ಟೂ ಹೇಳಬೇಕು? ಯಾವ ಮಾಧ್ಯಮ ಯಾವ ರೀತಿ ಚಿಂತಿಸುತ್ತಿದೆ. ಸರ್ಕಾರದ ಇಮೇಜ್ ಯಾವ ರೀತಿ ಉಳಿಸಿಕೊಳ್ಳಬೇಕು ಎಂಬ ಹಲವು ಅಂಶಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಧ್ಯಮ ಸಲಹೆಗಾರರು ಆಗಾಗ ತಿಳಿ ಹೇಳುತ್ತಿರುತ್ತಾರೆ.

ರಾಜ್ಯ ಕರಾವಳಿ ಭಾಗದ ಉಡುಪಿ ತಾಲೂಕಿನ ಮಟ್ಟು ಗ್ರಾಮದ ದಿನೇಶ್ ಅಮಿನ್ ಅವರು 1983ರಿಂದ ಪತ್ರಿಕಾರಂಗದಲ್ಲಿದ್ದಾರೆ. ಮುಂಗಾರು ಪತ್ರಿಕೆಯಲ್ಲಿ ದುಡಿದ ನಂತರ 1989ರಲ್ಲಿ 'ಪ್ರಜಾವಾಣಿ' ಸೇರಿದ ಮೇಲೆ ರಾಜಕೀಯ ವಿಶ್ಲೇಷಕರಾಗಿ ಜನಪ್ರಿಯತೆ ಗಳಿಸಿದರು. ದೇವರಾಜ್ ಅರಸ್ ಹೆಸರಿನ ಪ್ರಶಸ್ತಿ ಕೂಡಾ ಅವರನ್ನು ಹುಡುಕಿಕೊಂದು ಬಂದಿತ್ತು.

ಜಾತ್ಯಾತೀತ ನಿಲುವಿನ ದಿನೇಶ್ ತಮ್ಮ ಹೊಸ ಜವಾಬ್ದಾರಿಯಲ್ಲಿ ನಿರ್ವಹಿಸುವುದರ ಜೊತೆಗೆ ಪ್ರಜಾವಾಣಿ ಹುದ್ದೆಯನ್ನು ನಿರ್ವಹಿಸುತ್ತಾರಾ ಇಲ್ಲವಾ ಎಂಬ ಕುತೂಹಲ ಕೂಡಾ ಇದೆ. ದಿನೇಶ್ ಅವರಿಗೆ ಒನ್ ಇಂಡಿಯಾ ಕನ್ನಡ ತಂಡದಿಂದ ಶುಭ ಹಾರೈಕೆಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+