ಎಲೆಕ್ಷನ್ ಚಿತ್ರ: ತಾರೆಗಳ ಜೊತೆ ಡೆಲ್ಲಿ ದೊರೆಗಳು
ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ರಮ್ಯಾ ಅವರು ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಜೊತೆ ಕಾಣಿಸಿಕೊಂಡು ಕಾಂಗ್ರೆಸ್ ಪರ ಮತಯಾಚಿಸಿದ್ದಾರೆ. ಮಾಜಿಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ರಮ್ಯಾ ಅವರು ಕೂಡಾ ಹರಿಹಾಯ್ದಿರುವುದು ಲೇಟೆಸ್ಟ್ ಸುದ್ದಿ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಹಾಗೂ ಕಿಚ್ಚ ಸುದೀಪ್ ಇಬ್ಬರು ಪಕ್ಷಕ್ಕಿಂತ ಅಭ್ಯರ್ಥಿಯೇ ಮುಖ್ಯ ಎಂಬ ತತ್ವಕ್ಕೆ ಅಂಟಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅವರು ಇತ್ತೀಚೆಗೆ ಕರ್ನಾಟಕ ಮಕ್ಕಳ ಪಕ್ಷದ ಅಭ್ಯರ್ಥಿ ನೈಸ್ ಕಂಪನಿ ಒಡೆಯ ಅಶೋಕ್ ಖೇಣಿ ಪರ ಬೀದರ್ ನಲ್ಲಿ ಮತಯಾಚಿಸಿದ್ದಾರೆ.
ಅತ್ತ ಬಳ್ಳಾರಿಯಲ್ಲಿ ನನ್ನವರು ಯಾರು ಇಲ್ಲ ಎನ್ನುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಲಾಡ್ ಅವರು ಮತ್ತೆ ಹುರುಪಿನಿಂದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಉಳಿದಂತೆ ಕೈಯಲ್ಲಿ ಖಡ್ಗ ಹಿಡಿದು ನಿಂತ ರಾಹುಲ್ ಗಾಂಧಿ, ಶೋಭಾ ಕರಂದ್ಲಾಜೆ ಹಾಗೂ ಬಿಎಸ್ ಯಡಿಯೂರಪ್ಪ ಚಿತ್ರ, ಮೋದಿ ಹಾಗೂ ಅಡ್ವಾಣಿ ಜೊತೆ ಶೆಟ್ಟರ್ ಕೊಟ್ಟ ಪೋಸ್ ಎಲ್ಲವೂ ಇಲ್ಲಿದೆ.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಲೋಕಸತ್ತಾ, ಕೆಜೆಪಿ ಸೇರಿದಂತೆ ರಂಗು ರಂಗಿನ ಚುನಾವಣಾ ಕಣದ ಚಿತ್ರಗಳು ನಿಮಗೆ ಇಲ್ಲಿ ಮಾತ್ರ ಸಿಗಲಿದೆ.. ನಿಮ್ಮ ನೆಚ್ಚಿನ ನಾಯಕರನ್ನು ಚಿತ್ರ ಸರಣಿಯಲ್ಲಿ ನೋಡಿ...
ಎಲೆಕ್ಷನ್ ಚಿತ್ರ: ತಾರೆಗಳ ಜೊತೆ ಡೆಲ್ಲಿ ದೊರೆಗಳು
ಗೌರಿಬಿದನೂರಿನಲ್ಲಿ ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಜೊತೆ ಲಕ್ಕಿಸ್ಟಾರ್ ರಮ್ಯಾ
ಎಲೆಕ್ಷನ್ ಚಿತ್ರ: ತಾರೆಗಳ ಜೊತೆ ಡೆಲ್ಲಿ ದೊರೆಗಳು
ಗಂಭೀರವದನರಾದ ಬಿಜೆಪಿ ನಾಯಕರು ಎಲ್ ಕೆ ಅಡ್ವಾಣಿ ಹಾಗೂ ಜಗದೀಶ್ ಶೆಟ್ಟರ್
ಎಲೆಕ್ಷನ್ ಚಿತ್ರ: ತಾರೆಗಳ ಜೊತೆ ಡೆಲ್ಲಿ ದೊರೆಗಳು
ಬ್ಯಾಟರಾಯನಪುರದ ಅಭ್ಯರ್ಥಿ ಕೃಷ್ಣಭೈರೇಗೌಡ ಪರ ಕೇಂದ್ರ ಪ್ರವಾಸೋದ್ಯಮ ಸಚಿವ ಚಿರಂಜೀವಿ
ಎಲೆಕ್ಷನ್ ಚಿತ್ರ: ತಾರೆಗಳ ಜೊತೆ ಡೆಲ್ಲಿ ದೊರೆಗಳು
ಎಚ್ ಡಿ ರೇವಣ್ಣ ಅವರು ಪತ್ನಿ ಭವಾನಿ ರೇವಣ್ಣ, ಪುತ್ರರಾದ ಸೂರಜ್ ಹಾಗೂ ಪ್ರಜ್ವಲ್ ಅವರ ಜೊತೆ ಹೊಳೆನರಸೀಪುರದಲ್ಲಿ ಮತಯಾಚಿಸಿದರು.
ಎಲೆಕ್ಷನ್ ಚಿತ್ರ: ತಾರೆಗಳ ಜೊತೆ ಡೆಲ್ಲಿ ದೊರೆಗಳು
ಸ್ಥಳೀಯ ಕಾರ್ಪೊರೇಟರ್ ಗಳು ನನ್ನ ಜೊತೆಗಿಲ್ಲ ಎಂದು ಕೂಗೆಬ್ಬಿಸಿದ್ದ ಬಳ್ಳಾರಿ ನಗರ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಲಾಡ್ ಅವರು ತಮ್ಮ ಚಿನ್ಹೆಯ ಬಗ್ಗೆ ಮತದಾರರಿಗೆ ತೋರಿಸುತ್ತಿರುವುದು ಹೀಗೆ
ಎಲೆಕ್ಷನ್ ಚಿತ್ರ: ತಾರೆಗಳ ಜೊತೆ ಡೆಲ್ಲಿ ದೊರೆಗಳು
ಜೆಡಿಯು ಪ್ರಣಾಳಿಕೆ ಬಿಡುಗಡೆ ಚಿತ್ರ.. ಶರದ್ ಯಾದವ್ ಜೊತೆ ರಾಜರಾಜೇಶ್ವರಿ ನಗರ ಅಭ್ಯರ್ಥಿ ಪ್ರಿಯ
ಎಲೆಕ್ಷನ್ ಚಿತ್ರ: ತಾರೆಗಳ ಜೊತೆ ಡೆಲ್ಲಿ ದೊರೆಗಳು
ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜಗದೀಶ್ ಶೆಟ್ಟರ್ ಜೊತೆ ನರೇಂದ್ರ ಮೋದಿ
ಎಲೆಕ್ಷನ್ ಚಿತ್ರ: ತಾರೆಗಳ ಜೊತೆ ಡೆಲ್ಲಿ ದೊರೆಗಳು
ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮೈಸೂರಲ್ಲಿ ಖಡ್ಗ ಹಿಡಿದಿದ್ದು ಹೀಗೆ
ಎಲೆಕ್ಷನ್ ಚಿತ್ರ: ತಾರೆಗಳ ಜೊತೆ ಡೆಲ್ಲಿ ದೊರೆಗಳು
ಕರ್ನಾಟಕ ಮಕ್ಕಳ ಪಕ್ಷದ ಅಭ್ಯರ್ಥಿ ನೈಸ್ ಕಂಪನಿ ಒಡೆಯ ಅಶೋಕ್ ಖೇಣಿ ಪರ ಬೀದರ್ ನಲ್ಲಿ ಮತಯಾಚಿಸಿದರು. ಚಿತ್ರ ಕೃಪೆ: KKSFA