ಇದು ಚುನಾವಣೆ ವಾರ: ಬಿಜೆಪಿ ನಿರ್ಗಮನಕ್ಕೆ ಕ್ಷಣಗಣನೆ

ಹಾಗಂತ ಮುಂದಿನ ಬಾರಿಗೂ ಮತ್ತೆ ಇದೇ ಬಿಜೆಪಿ ಸರಕಾರವನ್ನು ಜನ ಆರಿಸಿ ಕಳುಹಿಸಿದರೆ ಅದು ಬೇರೆಯದೇ ಮಾತು. ಆದರೆ ಸದ್ಯಕ್ಕಂತೂ ಹಾಲಿ/ಆಡಳಿತಾರೂಢ ಬಿಜೆಪಿಗೆ ವಂದನಾರ್ಪಣೆ ಸಲ್ಲಿಸುವ ಸಂದರ್ಭ ಬಂದೇ ಬಿಟ್ಟಿದೆ.
ರಾಜ್ಯದಲ್ಲಿ ಏನು ಕಡಿದು ಕಟ್ಟೆ ಹಾಕಿದರು, ರಾಜ್ಯವನ್ನು ಏನು ಉದ್ಧಾರ ಮಾಡಿದರು ಎಂದು ಇವರಿಗೆ ವಂದನಾರ್ಪಣೆ/ಅಭಿನಂದನೆಗಳನ್ನು ಸಲ್ಲಿಸಬೇಕೋ ತಿಳಿಯುತ್ತಿಲ್ಲ. ಆದರೆ ಕಾಲಾವಧಿ ಮುಗಿಯಿತೆಂದು ಐದು ವರ್ಷಗಳ ಜನರ ಸಂಕಷ್ಟವು ತನ್ನಷ್ಟಕ್ಕೇ ತಾನೇ ದೂರವಾಗುತ್ತಿದೆ. ಅಲ್ಲ, ಯಾವ ಕರ್ಮಕ್ಕಾಗಿ ಕರ್ನಾಟಕದ ಜನ ಇಷ್ಟೆಲ್ಲ ದುರಾಡಳಿತವನ್ನು ಸಹಿಸಬೇಕಾಯಿತು/ಕಾಣಬೇಕಾಯಿತು? ಇದರಲ್ಲಿ ಜನ ಮಾಡಿದ ತಪ್ಪಾದರೂ ಎನು?
ಕಾಲಚಕ್ರ ಅವರ ಕಾಲಿಗೇ ತೊಡರಿಕೊಂಡಿದೆ: ಅಬ್ಬಬ್ಬಾ ಪದ್ಮಪ್ರಿಯಾ ಹಗರಣದಿಂದ ಹಿಡಿದು ರಘುಪತಿ ಭಟ್ಟರ ತಾಜಾ ವಿಡಿಯೋವರೆಗೂ ಕರ್ನಾಟಕದ ಜನ ಏನೆಲ್ಲ ನೋಡಿ ಪರಮ ಪಾವನರಾದರು. ಆದರೆ ಸದ್ಯ ಇನ್ನೊಂದೆರಡು ದಿನ ಸಹಿಸಿಕೊಂಡರೆ ಸಾಕು ಈ ಸರಕಾರ ಜನ ಮಾನಸದಿಂದ ದೂರವಾಗಲಿದೆ. ಮುಂದೆ ಅಧಿಕಾರಕ್ಕೆ ಬರೋ ಪಕ್ಷದ ಆಡಳಿತ ಹೇಗಿರುತ್ತದೋ, ಆದರೆ ಸದ್ಯ ಬಿಜೆಪಿ ದುರಾಡಳಿತ ಕೊನೆಗಾಣುತ್ತಿದೆ ಎಂಬ ಸಂಗತಿಯೇ ಜನತೆಗೆ ಆನಂದ ತರುತ್ತಿದೆ.
ಇದು ಚುನಾವಣೆ ವಾರ: ನಾವೀಗ ಚುನಾವಣೆ ವಾರದಲ್ಲಿದ್ದೇವೆ. ಮತ ಹಾಕಲು ಇನ್ನು ಆರೇ ದಿನಗಳು ಬಾಕಿಯಿವೆ. ಬಿಜೆಪಿಯ ಆಡಳಿತ ನಿರ್ಗಮನಕ್ಕೂ ಇನ್ನು ಆರೇ ದಿನ. ಕಳೆದೈದು ವರ್ಷಗಳ ಆಡಳಿತವನ್ನು ರಿವೈಂಡ್ ಮಾಡಿ... ಅದೊಂದು ದುಃಸ್ವಪ್ನ ಎಂದುಕೊಂಡು ಮರೆತು, ಹೊಸ ಭರವಸೆಯೊಂದಿಗೆ, ನಿಮ್ಮ ವಿವೇಚನೆ ಬಳಸಿ ಮತಹಾಕಿ ಬನ್ನಿ. ನಿಮಗೆ ಶುಭವಾಗಲಿ!
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications