ಬೆಂಗಳೂರು: 'ಜಾಣ ಮೋದಿ' ಭಾಷಣ ಕೇಳಿದಿರಾ?

'ಜಾಣ ಮೋದಿ' ಭಾಷಣ ಮಾಡಿದ್ದು ಪ್ರಧಾನಿ ಅಭ್ಯರ್ಥಿಯಾಗಿಯೇ ಹೊರತು ಬಿಜೆಪಿ ಸ್ಟಾರ್ ಪ್ರಚಾರಕರಾಗಿ ಅಲ್ಲ. ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮಾತನಾಡಿ ಅಂದರೆ ತಮ್ಮ 'ಪ್ರಧಾನಿ ಅಭ್ಯರ್ಥಿತನವನ್ನು' ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅವರು ನೇರವಾಗಿ ಗುರಿಯಾಗಿಸಿಕೊಂಡಿದ್ದು ಕಾಂಗ್ರೆಸ್ ಪಕ್ಷವನ್ನು!
ಇನ್ನು ನಾಮ್ ಕೆ ವಾಸ್ತೆ ಇತರೆ ಪಕ್ಷಗಳ ಹೆಸರುಗಳನ್ನೂ ಅವರು ಪ್ರಸ್ತಾಪಿಸಲಿಲ್ಲ. ವಾಸ್ತವವಾಗಿ ಜೆಡಿಎಸ್, ಕೆಜೆಪಿ ಬಗ್ಗೆ ಅವರು ಮಾತನಾಡಬೇಕಿತ್ತು. ಇನ್ನು ಆ ಪಕ್ಷಗಳ ನಾಯಕರನ್ನೂ ಸಂಭೋದಿಸಲಿಲ್ಲ. ಯಡಿಯೂರಪ್ಪ ಹೆಸರು ಕೇಳಿಬರುತ್ತದಾ ಎಂದು ಖುದ್ದು ಬಿಜೆಪಿ ಕಾರ್ಯಕರ್ತರೇ ಕಾಯುತ್ತಿದ್ದರು. ಆದರೆ ಯಡಿಯೂರಪ್ಪ ಆಗಲಿ ಅವರ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆಯಾಗಲಿ ಮೋದಿ ಬಾಯಿಂದ ಒಂದೇ ಒಂದು ಶಬ್ದವೂ ಹೊರಡಲಿಲ್ಲ.
ಬೆಂಗಳೂರು, ಕರ್ನಾಟಕದಲ್ಲಿಯೂ ತಮ್ಮ ಪ್ರಧಾನಿಪಟ್ಟಕ್ಕೆ ಅನುಕೂಲವಾಗುವ 'ಮಿನಿ ಭಾರತ'ವನ್ನು ಕಂಡರೇ ಹೊರತು ಸ್ಥಳೀಯರು ಅವರ ಕಣ್ಣಿಗೆ ಗೋಚರಿಸಲೇ ಇಲ್ಲ. ಮೋದಿ ಅವರು ಸಿಬಿಐ ಬಗ್ಗೆ ದಾಳಿ ಮಾಡಿದಾಗ ಅನಿಸಿದ್ದು ತಮಗೆ ಅನುಕೂಲಕರವಾಗಿರುವ ವಿಷಯಗಳನ್ನು ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಮಾತನಾಡಿದರೇ ಹೊರತು ಬಿಜೆಪಿ ಅಭ್ಯರ್ಥಿಗಳಿಗೆ ಧೈರ್ಯ ತುಂಬುವ ಧಾಟಿಯಲ್ಲಿ ಮಾತನಾಡಲಿಲ್ಲ.
ಅದಕ್ಕೇ ಹೇಳಿದ್ದು ಅವರು ಮುಂದಿನ 2014ರ ಲೋಕಸಭೆ ಚುನಾವಣೆಗೆ ಪ್ರಚಾರ ಭಾಷಣ ಮಾಡಿದರೇ ಹೊರತು ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ಥಳೀಯ ಬಿಜೆಪಿ ಅಭ್ಯರ್ಥಿಗಳ ಪರ ಮಾತನಾಡಲಿಲ್ಲ ಎಂದು. ಇಂದಿರಾ ಕಾಂಗ್ರೆಸ್ಸಿನಿಂದ ಹಿಡಿದು ಮುಖರಹಿತ ಇಂದಿನ ಕಾಂಗ್ರೆಸ್ ನಾಯಕತ್ವದ ಬಗ್ಗೆ ಮೋದಿ ಮಾತನಾಡಿದರೆ ಹೊರತು ಸ್ಥಳೀಯ ರಾಜಕೀಯ ಮುತ್ಸದ್ದಿಗಳ ಬಗ್ಗೆ ಮಾತೇ ಹೊರಡಲಿಲ್ಲ. ಅದು ಹೇಗೋ ಪಾಪಾ ವಿದೇಶಾಂಗ ಸಚಿವ ಕೃಷ್ಣ ಬಂದು ಹೋದರು. (ಅಷ್ಟಕ್ಕೂ ಅಂದು ಕೃಷ್ಣ ಯಾಮಾರಿದ್ದು ತಪ್ಪಾ ಎಂಬುದೇ ಪ್ರಶ್ನಾರ್ಹ).
ಭ್ರಷ್ಟಾಚಾರದ ಬಗ್ಗೆ ರೇಸ್ ಕೋರ್ಸ್ ರಸ್ತೆಯಿಂದ ಜನಪಥ್ ವರೆಗೂ 2ಜಿ ಲಂಚದ ದುಡ್ಡನ್ನು ಹಾಸಬಹುದು ಎಂದರೇ ಹೊರತು ಅದೇ ರೇಸ್ ಕೋರ್ಸಿನಲ್ಲಿ ವಿರಾಜಮಾನರಾಗಿದ್ದ ಬ್ರಹ್ಮಾಂಡ ಭ್ರಷ್ಟಾಚಾರಿಯ ಬಗ್ಗೆ ಅಪ್ಪಿತಪ್ಪಿಯೂ ಉಸಿರೆತ್ತಲಿಲ್ಲ ಮೋದಿ ಸಾಹೇಬರು. ಏಕೆಂದರೆ ಮುಂದೆ ಹೇಗೋ ಏನೋ. ತಾವು ಪ್ರಧಾನಿಯಾಗಲು ಆಕಸ್ಮಾತ್ ಯಡಿಯೂರಪ್ಪ ಪಕ್ಷದ ಸಂಸದರ ಜತೆಯೇ ಕೈಜೋಡಿಸುವ ಪ್ರಸಂಗ ಬಂದರೆ... ಅಂತ ಯಡ್ಡಿ ಬಗ್ಗೆ ಮೋದಿ ಮಾತನಾಡಲಿಲ್ಲ.
ಏನೋಪ್ಪಾ ರಾಜಕೀಯ ಪಂಡಿತರು ಮೋದಿ ಭಾಷಣವನ್ನು ಹೇಗೆಲ್ಲಾ ವಿಶ್ಲೇಷಿಸುತ್ತಿದ್ದಾರೋ ನಾ ಕಾಣೆ. ಆದರೆ ನನಗನ್ನಿಸಿದಂತೂ ಇಷ್ಟೇ.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು?












Click it and Unblock the Notifications