ಸಿಎಂ ಸ್ಥಾನ ಕಳೆದುಕೊಂಡಿದ್ದು ಹೀಗೆ : ಡಿವಿಎಸ್

ಉದಾಸಿ ಒಬ್ಬ ಭಾರಿ ಭ್ರಷ್ಟಾಚಾರಿ. ನಾನು ಮುಖ್ಯಮಂತ್ರಿಯಾಗಿದ್ದಾಗ ನನ್ನ ಸಂಪುಟದಲ್ಲಿ ಸಚಿವರಾಗಿದ್ದ ಉದಾಸಿ ಅವರು, ಪ್ರತಿ ಟೆಂಡರ್ನಲ್ಲಿ ಹಣ ಕೀಳುತ್ತಿದ್ದರು. ಆದರೆ ನಾನು ಅವರ ಅಕ್ರಮಕ್ಕೆ ಕಡಿವಾಣ ಹಾಕಿ, ಸಿಎಂ ಕುರ್ಚಿ ಕಳೆದುಕೊಂಡೆ ಎಂದು ಸದಾನಂದ ಗೌಡ ಹೇಳಿದ್ದಾರೆ.
ಆದರೆ ಡಿವಿ ದದಾನಂದ ಗೌಡ ಅವರ ಆರೋಪವನ್ನುತಳ್ಳಿ ಹಾಕಿದ ಉದಾಸಿ, ಸಿಎಂ ಕುರ್ಚಿ ಕಳೆದುಕೊಂಡ ನಂತರ ಅವರಿಗೆ ಮತಿ ಭ್ರಮಣೆ ಆಗಿದೆ ಎಂದಿದ್ದಾರೆ. ಅಲ್ಲದೆ ತಮ್ಮ ವಿರುದ್ಧ ಭ್ರಷ್ಟಾಚಾರದ ದಾಖಲೆಗಳಿದ್ದರೆ ಬಹಿರಂಗಪಡಿಸಲಿ. ಸದಾನಂದಗೌಡರು ಮೊದಲು ಗೌರವದಿಂದ ಮಾತಾಡೋದನ್ನು ಕಲಿಯಲಿ ಎಂದು ಉದಾಸಿ ಕಿಡಿ ಕಾರಿದರು.












Click it and Unblock the Notifications