Get Updates
Get notified of breaking news, exclusive insights, and must-see stories!

ಟ್ರೈನಿನಲ್ಲಿ ಬಲಾತ್ಕಾರ: ಮಾಜಿ ಸಂಸದನ ಬಂಧನ

Ex SP MP Chandra Nath held for molesting girl on train
ಲಖ್ನೋ, ಉತ್ತರಪ್ರದೇಶ, ಮಾ.18: ಇಡೀ ಗಂಗಾ ನೀರನ್ನು ಹರಿಸಿದರೂ ಉತ್ತರಪ್ರದೇಶಕ್ಕೆ ಅಂಟಿಕೊಂಡಿರುವ 'ರೇಪ್ ರಾಜ್ಯ' ಎಂಬ ಕಳಂಕ ದೂರವಾಗುವ ಲಕ್ಷಣಗಳಿಲ್ಲ. ದೌರ್ಭಾಗ್ಯವೆಂದರೆ ಈ ಬಾರಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದನೇ ಭಾಗಿಯಾಗಿದ್ದು, ಆತನನ್ನು ಬಂಧಿಸಲಾಗಿದೆ.

ಆರೋಪಿಯನ್ನು ಚಂದ್ರನಾಥ್ ಸಿಂಗ್ ಎಂದು ಗುರುತಿಸಲಾಗಿದ್ದು, ಮಚಲೀಷಹರದ ಈ ಮಾಜಿ ಸಂಸದ ಸಮಾಜವಾದಿ ಪಕ್ಷದವ. ಇದರಿಂದ ಮುಲಾಯಂ ಸಿಂಗ್ ಮತ್ತು ಅಖಿಲೇಶ್ ಎಂಬ ಅಪ್ಪ-ಮಕ್ಕಳ ಎಸ್ಪಿ ಪಕ್ಷ ಮತ್ತೆ ಮುಜುಗುರಕ್ಕೊಳಗಾಗಿದೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಪರಾಮರ್ಶಿಸಲು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಸಭೆ ಕರೆದಿದ್ದ ದಿನದಂದೆ ಈ ಘಟನೆ ನಡೆದಿದೆ. ಆಡಳಿತಾರೂಢ ಸಮಾಜವಾದಿ ಪಕ್ಷಕ್ಕೆ ಸೇರಿದ ಜನಪ್ರತಿನಿಧಿಗಳೇ ಹೆಚ್ಚಾಗಿ ಅಪರಾಧ ಪ್ರಕರಣಗಳಲ್ಲಿ ತೊಡಗಿರುವುದು ವ್ಯಾಪಕವಾಗಿ ಕಂಡುಬರುತ್ತಿದೆ.

ಪದ್ಮಾವತ್ ಎಕ್ಸ್ ಪ್ರೆಸ್ ಟ್ರೈನಿನಲ್ಲಿ ಈ ಬಲಾತ್ಕಾರ ಪ್ರಕರಣ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ಸಂಸದ ಚಂದ್ರನಾಥ್, ಷಾಹಜಹಾನ್ ಪುರ ಬಳಿ ಜತೆಯಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳ ಮೇಲೆ ಬಲಾತ್ಕಾರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ರೈಲ್ವೆ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಸಹ ಪ್ರಯಾಣಿಕರು ಯುವತಿಯ ಆರೋಪವನ್ನು ದೃಢೀಕರಿಸಿದ್ದು, ಸಂಸದ ಚಂದ್ರನಾಥಗೆ ಕಂಟಕ ತಂದೊಡ್ಡಿದೆ. ಆರೋಪವನ್ನು ನಿರಾಕರಿಸಿರುವ ಸಂಸದ, 'ನಾನು ನನ್ನ ಬರ್ತ್ ನಲ್ಲಿ ಕುಳಿತುಕೊಳ್ಳಬೇಕಿತ್ತು. ಹಾಗಾಗಿ, ಇನ್ನು ಸ್ವಲ್ಪ ಆ ಕಡೆಗೆ ಜರುಗು ಎಂದು ಹುಡುಗಿಗೆ ಸೂಚಿಸಿದೆ. ಅಷ್ಟಕ್ಕೇ ಇಷ್ಟೆಲ್ಲಾ ಕಥೆ ಕಟ್ಟಿದ್ದಾರೆ' ಎಂದು ಗೋಳಾಡಿದ್ದಾರೆ.

ಪೊಲೀಸರು ಸಂಸದನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಷಾಹಜಹಾನಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಕುಡಿದ ಮತ್ತಿನಲ್ಲಿ ಸಂಸದ ಚಂದ್ರನಾಥ ನಡೆಯಲೂ ಆಗದಷ್ಟು ನಿತ್ರಾಣಗೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+