ಮನೆಗೇ ನುಗ್ಗಿ 8 ಗಂಟೆ ಪ್ರೇಯಸಿಯ ರೇಪ್ ಮಾಡಿದರು

ಘಟನೆ ವಿಚಿತ್ರವಾಗಿದೆ. ಏನಪಾ ಅಂದರೆ Cool Cab ಸಂಸ್ಥೆಯ ಟ್ಯಾಕ್ಸಿ ಚಾಲಕ ತನ್ನ ಹೆಂಡತಿಯನ್ನು ತವರು ಮನೆಗೆ ಕಳಿಸಿದ್ದ. ಮತ್ತು ಮಕ್ಕಳನ್ನು ಬಾವಮೈದುನನ ಮನೆಗೆ ಕಳಿಸಿದ್ದ. ಆದರೆ ಮನೆಯಲ್ಲಿ ಒಬ್ಬನೇ ಉಳಿದುಕೊಂಡ. ಏಕಾಂತದಲ್ಲಿ ಟ್ಯಾಕ್ಸಿ ಚಾಲಕ ತಡ ಮಾಡದೆ ತನ್ನ ಪ್ರೇಯಸಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಾನೆ.
ಸರಿ ಹಾಗೆ ಮನೆಗೆ ಬಂದ 23 ವರ್ಷದ ಗರ್ಲ್ ಫ್ರೆಂಡ್ ಜತೆ ರಾತ್ರಿ ಸರಸಕ್ಕೆ ಇಳಿದಿದ್ದಾನೆ. ಇದು ನಡು ರಾತ್ರಿ 2 ಗಂಟೆ ವರೆಗೂ ಮುಂದುವರಿದಿದೆ. ಸರಿಯಾಗಿ ಆ ಅವೇಳೆಯಲ್ಲೇ ಕುಡಿದ ಮತ್ತಿನಲ್ಲಿದ್ದ ನಾಲ್ವರು ಗೂಂಡಾಗಳು ಸೀದಾ ಚಾಲಕನ ಮನೆಗೆ ಎಂಟ್ರಿ ಕೊಡುತ್ತಾರೆ.
ಚಾಕು ತೋರಿಸಿ ಚಾಲಕನನ್ನು ಬಾತ್ ರೂಮಿನಲ್ಲಿ ಕೂಡಿಹಾಕುತ್ತಾರೆ. ಆ ನಂತರ ಚಾಲಕನ ಗರ್ಲ್ ಫ್ರೆಂಡ್ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡುತ್ತಾರೆ. ಈ ಮಧ್ಯೆ, ಚಾಲಕ ತನ್ನ ಗೆಳೆಯನಿಗೆ ಫೋನ್ ಮಾಡಿ, ತನಗೊದಗಿದ ದುಃಸ್ಥಿತಿಯನ್ನು ಅರಹುತ್ತಾನೆ. ಆದರೆ ಚಾಲಕ ಜೋಕ್ ಮಾಡುತ್ತಿದ್ದಾನೆ ಎಂದು ಗೆಳೆಯ ಸಹಾಯ ಮಾಡುವುದಕ್ಕೆ ಮುಂದಾಗುವುದಿಲ್ಲ. ಇತ್ತ ಚಾಲಕ ಮತ್ತು ಅವನ ಗರ್ಲ್ ಫ್ರೆಂಡ್ ದುಃಸ್ಥಿತಿ ಮುಂದುವರಿಯುತ್ತದೆ.
ಆರೋಪಿಗಳನ್ನು ರಾಜೇಶ್ ವರ್ಮಾ (21), ಮಹೇಶ್ ಕೇವತ್ (20), ಕೃಷ್ಣ ಕೇವತ್ (23) ಮತ್ತು ರಾಮಚಂದ್ರ ಹುಂಬೆ (30) ಎಂದು ಗುರುತಿಸಲಾಗಿದ್ದು, ನಾಲ್ವರನ್ನೂ ಪೊಲೀಸರು ಬಂಧಿಸಿದ್ದಾರೆ.
ಟ್ಯಾಕ್ಸಿ ಚಾಲಕ ಹೆಂಡತಿಗೆ ಅನ್ಯಾಯ ಮಾಡಿರುವುದರ ಬಗ್ಗೆ ಪಶ್ಚಾತ್ತಾಪ ಪಡುತ್ತಿದ್ದು, ವಿಷಯ ತಿಳಿದರೆ ಅವಳು ತನ್ನನ್ನು ಬಿಟ್ಟು ಹೋಗುತ್ತಾಳೆ ಎಂದು ಆತಂಕಗೊಂಡಿದ್ದಾನೆ.
ಪೊಲೀಸರಿಗೆ ವಿಷಯ ಗೊತ್ತಾಗಿದ್ದು ಹೇಗೆ?: ರಾತ್ರಿ ಒಂದ್ಹೊತ್ತಿನಲ್ಲಿ ತಮ್ಮ ಗೆಳೆಯ ಫೋನ್ ಮಾಡಿದ್ದು, ತನ್ನ ಮನೆಗೆ ನುಗ್ಗಿದ ಗೂಂಡಾಗಳು ಅತ್ಯಾಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾನೆ ಎಂಬ ವಿಷಯವನ್ನು ಆ ಗೆಳೆಯ ಮತ್ತೊಬ್ಬ ಚಾಲಕ ಗೆಳೆಯನಿಗೆ ಬೆಳಗ್ಗೆ ತಿಳಿಸುತ್ತಾನೆ. ಆಗ ವಿಷಯ ನಿಜವಿರಬಹುದು ಎಂದು ಆತಂಕಗೊಂಡ ಆ ಮೂರನೆಯ ಗೆಳೆಯ ಪೊಲೀಸರಿಗೆ ವಿಷಯ ತಿಳಿಸುತ್ತಾನೆ. ಪೊಲೀಸರು ಬಂದು ನೋಡಿದಾಗ ಕಿಟಕಿಯಲ್ಲಿ ಬಗ್ಗಿ ನೋಡಿದಾಗ ಅತ್ಯಾಚಾರ ನಡೆಯುತ್ತಿರುವುದು ಪೊಲೀಸರ ಕಣ್ಣಿಗೆ ಬೀಳುತ್ತದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications