ಕಾಂಗೈಗೆ ಎಂಟ್ರಿ ಕೊಟ್ಟ ಸ್ವತಂತ್ರ ಶಿವರಾಜ್ ತಂಗಡಗಿ
ಇದಕ್ಕೆ 'ಸ್ಥಳೀಯ ಫಲಿತಾಂಶ' ಹೊರಬಿದ್ದ ಬಳಿಕ, ಮಾರ್ಚ್ 15ರಂದು ಮಹೂರ್ತ ನಿಗದಿಯಾಗಿದೆ ಎಂದು ಕ್ವೀನ್ಸ್ ರೋಡ್ ಮೂಲಗಳು ಖಚಿತಪಡಿಸಿವೆ. ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಅವರು ಇದಕ್ಕೆ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಇದೇ ವೇಳೆ, ಇನ್ನಿಬ್ಬರು ಸರ್ವಸ್ವತಂತ್ರರಾದ ನರೇಂದ್ರಸ್ವಾಮಿ ಮತ್ತು ವೆಂಕಟರಮಣಪ್ಪ ಅವರುಗಳು ಸ್ಥಳೀಯ ಕಾಂಗ್ರೆಸ್ಸಿಗರ ವಿರೋಧದ ನಡುವೆಯೂ ಕಾಂಗ್ರೆಸ್ ಪ್ರವೇಶವನ್ನು ಖಚಿತಪಡಿಸಿಕೊಂಡಿದ್ದಾರೆ. ಸುರಪುರದ ಬಿಜೆಪಿ ಶಾಸಕ ರಾಜುಗೌಡರಿಗೂ ಸ್ಥಳೀಯರ ವಿರೋಧವಿದ್ದರೂ ಕಾಂಗೈ ಸೇರ್ಪಡೆ ಹಾದಿ ಸುಗಮವಾಗಿದೆ.
ಈ
ಮೂವರೂ
ತಂಗಡಗಿ
ಸೇರ್ಪಡೆಯಾದ
ಮರುದಿನವೇ
ಕಾಂಗ್ರೆಸಿಗೆ
ಸೇರುವುದು
ನಿಕ್ಕಿಯಾಗಿದೆ.
ಇನ್ನು
ವರ್ತೂರು
ಪ್ರಕಾಶ್
ಮತ್ತು
ಡಿ
ಸುಧಾಕರ್
ಸೇರ್ಪಡೆ
ಪೆಂಡಿಂಗ್
ನಲ್ಲೇ
ಇದೆ.
ಹಸ್ತೋದಕ:
ಈ
ಮಧ್ಯೆ,
ಈ
ಬಾರಿ
ಚುನಾವಣೆಯಲ್ಲಿ
ಕಾಂಗ್ರೆಸ್
ಹವಾ
ಇದೆ
ಎಂದು
ಈಗಿಂದಲೇ
ಬಿರುಗಾಳಿ
ಊದುವ
ಕಾರ್ಯವೂ
ನಡೆಯುತ್ತಿದೆ.
ಹಾಗಾಗಿ,
ಆಡಳಿತಾರೂಢ
ಬಿಜೆಪಿ
ಮತ್ತು
ಜೆಡಿಎಸ್
ನಿಂದಲೂ
ಸಾಕಷ್ಟು
ಮಂದಿ
ಕಾಂಗ್ರೆಸ್
ಮುಂದೆ
ಅರ್ಜಿ
ಹಿಡಿದು
ನಿಂತಿದ್ದಾರೆ
ಎನ್ನಲಾಗುತ್ತಿದೆ.
ಕಾಂಗ್ರೆಸ್
ಪಕ್ಷಕ್ಕೆ
ಲಾಭವಾಗುವುದಾದರೆ
ಯಾರು
ಬೇಕಾದರೂ
ಬರಲಿ
ಎಂಬ
ಮಾತು
ಕಾಂಗ್ರೆಸ್
ನಾಯಕರ
ನಾಲಿಗೆಯ
ಮೇಲೆ
ಹರಿದಾಡುತ್ತಿದೆ.
ಗೂಳಿಹಟ್ಟಿ ಶೇಖರ್ ನಡೆ ಕಾಂಗ್ರೆಸ್ಸಿನತ್ತಲೋ, ಬಿಜೆಪಿಗೇ ಸೀಮಿತವೋ ಎಂಬುದು ಇಂಟರೆಸ್ಟಿಂಗ್ ಆಗಿದೆ.