Get Updates
Get notified of breaking news, exclusive insights, and must-see stories!

ರಜೆ ಗೋಳು: ಪೊಲೀಸ್ ಪೇದೆ ಆತ್ಮಹತ್ಯೆಗೆ ಯತ್ನ

Kolar Bangarpet PCI Jagadish denies leave constable Anil attempts suicide
ಕೋಲಾರ, ಫೆ.23: ಬೆಂಗಳೂರಿನ ರಾಜಾನುಕುಂಟೆಯಲ್ಲಿ ಸಬ್ ಇನ್ಸ್ ಪೆಕ್ಟರ್ ವಿಜಯ ಕುಮಾರ್ ತನ್ನ ಕೈಕೆಳಗಿನ ಪೇದೆ ಆನಂದಗೆ ರಜೆ ನೀಡದೆ ಅವನಿಂದಲೇ ಹತನಾದ ಘಟನೆ ನಡೆದು ಇನ್ನೂ ಒಂದು ತಿಂಗಳು ಕಳೆದಿಲ್ಲ...

ಆಗಲೇ ಮತ್ತೊಂದು ಅಂತಹ ಘಟನೆ ನಡೆದಿದೆ. ಆದರೆ ಯಾರದೇ ಪ್ರಾಣ ಹೋಗಿಲ್ಲ. ಬದಲಿಗೆ ಪೇದೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ರಾಜಾನುಕುಂಟೆ ಘಟನೆ ನಡೆದ 15 ದಿನಗಳಲ್ಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತ ಮಿರ್ಜಿ ಸಾಹೇಬರು ಪೇದೆಗಳು ಮೊದಲು ರಜೆ ಕೊಟ್ಟುಬಿಡಿ ಎಂದು ಫರ್ಮಾನು ಹೊರಡಿಸಿದ್ದರು ಎಂಬುದು ಗಮನಾರ್ಹ. ಆದರೆ ಪಕ್ಕದ ಕೋಲಾರ ಜಿಲ್ಲಾ ಪೊಲೀಸರು ಮಿರ್ಜಿ ಸಾಹೇಬರ ಅಧಿಕಾರ ವ್ಯಾಪ್ತಿಗೆ ಬರೋಲ್ಲ. ಹಾಗಾಗಿ

ಕೋಲಾರ ಜಿಲ್ಲೆ ಬಂಗಾರ ಪೇಟೆಯಲ್ಲಿ ರಜೆ ಗೋಳಿನ ಪ್ರಸಂಗವೊಂದು ಇಂದು ಬೆಳಗ್ಗೆ ನಡೆದಿದೆ. ಅನಿಲ್ ಎಂಬ ಪೇದೆ ಎಸ್ ಡಿಎ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ನಾಳೆಯೇ ಪರೀಕ್ಷೆ. 'ಸ್ವಾಮಿ ನಾಳೆ ಪರೀಕ್ಷೆ ಬರೆಯಬೇಕಾಗಿದೆ. ಹಾಗಾಗಿ ರಜೆ ಕೊಡಿ' ಎಂದು ತಮ್ಮ ಮೇಲಧಿಕಾರಿ ಇನ್ಸ್ ಪೆಕ್ಟರ್ ಜಗದೀಶರನ್ನು ಕೇಳಿಕೊಂಡಿದ್ದಾನೆ. ಆದರೆ ಆಯಪ್ಪ ಒಪ್ಪಿಲ್ಲ.

ಅದಕ್ಕೇ ಅನಿಲ ಏನು ಮಾಡಿದನೆಂದರೆ ಬೇತಮಂಗಲದಲ್ಲಿರುವ ತಮ್ಮ ಮನೆಯಲ್ಲಿ ಇಂದು ಬೆಳಗ್ಗೆ ನಿದ್ದೆ ಮಾತ್ರೆ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಜಾಲಪ್ಪ ಆಸ್ಪತ್ರೆಗೆ ಸೇರಿಸಲಾಗಿದೆ. ಅನಿಲ್ ಪರಿಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಈ ಪೊಲೀಸ್ ಅಧಿಕಾರಿಗಳಿಗೆ ಯಾವಾಗ ಬುದ್ಧಿಬರುತ್ತದೋ...?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+