ಕರ್ನಾಟಕದ ವಿರುದ್ಧವೇ ಹರಿಯಿತು ಕಾವೇರಿ ಅಧಿಸೂಚನೆ
ನವದೆಹಲಿ, ಫೆ.20: ನಿರೀಕ್ಷೆಯಂತೆ ಕರ್ನಾಟಕದ ಮೇಲೆ ಬರಸಿಡಿಲು ಬಡಿದಿದೆ. ಆದರೆ ಮಾಜಿ ಪ್ರಧಾನಿ ದೇವೇಗೌಡರಿಂದ ಹಿಡಿದು ಬೆಂಗಳೂರಿನ ಪ್ರಜೆ ಸೇರಿದಂತೆ ಕಾವೇರಿ ಕೊಳ್ಳದ ರೈತನವರೆಗೂ ಯಾರೂ ಇದನ್ನು ಆಪೇಕ್ಷಿಸಿರಲಿಲ್ಲ. ಏನಪ್ಪಾ ಅಂದರೆ ಕಾವೇರಿ ನೀರು ಹಂಚಿಕೆ ಕುರಿತು ಐ ತೀರ್ಪಿನ ಅಧಿಸೂಚನೆಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಆದರೆ ಇದು ಜಾರಿಗೆ ಬರಲು 90 ದಿನಗಳ ಕಾಲಾವಕಾಶವಿದೆ.
ಕಾವೇರಿ ಅಧಿಸೂಚನೆಯಿಂದ ಕರ್ನಾಟಕಕ್ಕೂ ಏನಾದರೂ ಪ್ರಯೋಜನವಾಗಲಿದೆಯಾ ಅಂದರೆ ಒಂದೆರಡು ಹೀಗಿವೆ:
* 1991ರ ಮಧ್ಯಂತರ ಆದೇಶದಿಂದ ಬಚಾವು: ಈ ತೀರ್ಪಿನ ಪ್ರಕಾರ ಮೆಟ್ಟೂರು ಜಲಾಶಯಕ್ಕೆ 205 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ ಈಗ 2007ರ ಐತೀರ್ಪಿನ ಪ್ರಕಾರ 192 ಟಿಎಂಸಿ ನೀರು ಬಿಟ್ಟರೆ ಸಾಕಾದೀತು.

ಇನ್ನು, ಕಾವೇರಿ ಅಧಿಸೂಚನೆಯಿಂದ ಕರ್ನಾಟಕಕ್ಕೆ ಅನಾನುಕೂಲವಾಗಲಿದೆಯಾ ಅಂದರೆ ಒಂದಾ, ಎರಡಾ? ಹತ್ತಾರುಎನ್ನಬಹುದು.
* ಮೆಟ್ಟೂರು ಜಲಾಶಯ ನೀರು ಸಂಗ್ರಹ ಸಾಮರ್ಥ್ಯ 42 ಟಿಎಂಸಿ ನೀರು. ಆದರೆ ನ್ಯಾಯಧಿಕರಣದ ತೀರ್ಪಿನ ಪ್ರಕಾರ 55 ಟಿಎಂಸಿ ನೀರನ್ನು ಬಿಡಬೇಕಾದ ಅನಿವಾರ್ಯುತೆ ಕರ್ನಾಟಕಕ್ಕೆ.
* ಕಾವೇರಿ ನದಿ ನೀರು ಪ್ರಾಧಿಕಾರ ಸಂಕಷ್ಟ ಪರಿಹಾರ ಸೂತ್ರ ಅಂತಿಮಗೊಂಡಿಲ್ಲ. ಹಾಗಿರುವಾಗ, ಕಾವೇರಿ ಬಿಕ್ಕಟ್ಟಿಗೆ ಅಂತಿಮ ಪರಿಹಾರ ಸಿಗುವುದು ದೂರದ ಮಾತಾಗಿದೆ.
* ಕರ್ನಾಟಕ ಕೇಳಿದ್ದು 465 ಟಿಎಂಸಿ ನೀರು ಆದರೆ ದಕ್ಕುವುದು 270 ಟಿಎಂಸಿ ನೀರು ಮಾತ್ರ.
* ತಮಿಳುನಾಡಿನಲ್ಲಿ ಅಂತರ್ಜಲ ಮಟ್ಟ 47 ಟಿಎಂಸಿ ಇದೆ ಎಂದು ಸ್ವತಃ ತಮಿಳುನಾಡೇ ಮಾಹಿತಿ ಒದಗಿಸಿತ್ತು. ಆದರೆ ಮುಂದೆ ನ್ಯಾಯಾಧೀಕರಣ ಸ್ಥಳ ಸಮೀಕ್ಷೆ ನಡೆಸಿ, ತಮಿಳುನಾಡಿನಲ್ಲಿ ಕೇವಲ 20 ಟಿಎಂಸಿ ಅಂತರ್ಜಲ ಇದೆ ಎಂದು ಬರೆಯಿತು. ಹಾಗಾಗಿ ಈಗ 192 ಟಿಎಂಸಿ ನೀರು ಬಿಡುವುದು ಕರ್ನಾಟಕಕ್ಕೆ ಅನಿವಾರ್ಯವಾಗಿದೆ.
* ಕಬಿನಿ ಎರಡನೆಯ ಹಂತದ ಯೋಜನೆಗಳಿಗೆ ನೀರು ಹಂಚಿಕೆಯಾಗಿಲ್ಲ. ಹಾಗೆಯೇ, ಏತ ನೀರಾವರಿಗೂ ನೀರು ಹಂಚಿಕೆಯಾಗಿಲ್ಲ.
* ನ್ಯಾಯಾಧಿಕರಣ ತಮಿಳುನಾಡಿನಲ್ಲಿ ಭತ್ತ ಬೆಳೆಯುವ ಪ್ರದೇಶವನ್ನು ಸರಿಯಾಗಿ ಅಳೆದು ನೋಡಿಲ್ಲ ಎಂಬ ಆರೋಪವಿದೆ. ಹಾಗಾಗಿ, 4 ಟಿಎಂಸಿ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುವ ಹೊರೆ ಕರ್ನಾಟಕದ ಮೇಲೆ ಬಿದ್ದಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications