ಜೆಡಿಎಸ್ ಸದಸ್ಯ ಗಿರೀಶ್ ಕೊಲೆಗಾರ್ತಿ ಬಂಧನ

ಕೋಡಿಕಲ್ ನ 28 ವರ್ಷ ವಯಸ್ಸಿನ ನತಾಶ ಎಂಬ ಯುವತಿ ಜೊತೆಗೆ ಪ್ರಕರಣದ ಪ್ರಮುಖ ಆರೋಪಿಗಳಾದ ರಿತೇಶ್ ಹಾಗೂ ಇತರ ಮೂರು ಮಂದಿ ಇದ್ದಾರೆ. ಆದರೆ, ಇತರೆ ಆರೋಪಿಗಳ ಪತ್ತೆಗಾಗಿ ತನಿಖೆ ನಡೆಸಲಾಗುತ್ತಿದೆ. ಸದ್ಯದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಬಜ್ಪೆ ಪೊಲೀಸರು ಹೇಳಿದ್ದಾರೆ.
ಬಂಧಿತ ಯುವತಿಗೆ ಮದುವೆ ನಿಶ್ಚಿತಾರ್ಥ ನಡೆದಿದ್ದರೂ, ಗಿರೀಶ್ ಪುತ್ರನ್ ಆಕೆಗೆ ಕಿರುಕುಳ ನೀಡುತ್ತಿದ್ದರು. ಇದಕ್ಕೆ ತಕ್ಕ ಶಾಸ್ತಿ ಕಲಿಸಬೇಕು ಎಂದು ಯೋಜನೆ ರೂಪಿಸಿದ ಯುವತಿ, ತನ್ನ ಭಾವಿ ಪತಿ ಮತ್ತು ಇತರ ಮೂವರ ಜತೆ ಈ ಕೃತ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಡಿ.21ರಂದು ಸಂಜೆ ಮನೆಯಿಂದ ಹೊರಗೆ ತೆರಳಿದ್ದ ಮಂಗಳೂರಿನ ಹೊಯಿಗೆ ಬಜಾರ್ ನಿವಾಸಿ ಗಿರೀಶ್ ಪುತ್ರನ್(50) ನಾಪತ್ತೆಯಾಗಿ ಪೆರ್ಮುದೆ-ಬೆಳ್ಳುಳ್ಳಿಮಾರ್ ಮುರ್ಕೋಡಿಯಲ್ಲಿ ಚೂರಿಯಿಂದ ಇರಿದು ಕೊಲೆಗೈದಿರುವ ಸ್ಥಿತಿಯಲ್ಲಿ ಕಂಡು ಬಂದಿದ್ದು, ಈ ಕೊಲೆಗೆ ಯುವತಿಗೆ ಕಿರುಕುಳ ಹಾಗೂ ಗಿರೀಶ್ ಬಳಿ ಇದ್ದ ಚಿನ್ನಾಭರಣ ಕಾರಣವಾಯಿತು ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ಗಿರೀಶ್ ಪುತ್ರನ್ ಅವರನ್ನು ಜಾಗದ ವ್ಯವಹಾರದ ಸಂಬಂಧ ಮಾತನಾಡಲಿಕ್ಕಿದೆ ಎಂದು ನಂಬಿಸಿ ಆರೋಪಿಗಳು ಯುವತಿ ನತಾಶ ಮೂಲಕ ಕರೆಸಿದ್ದರು. ನಿಜವೆಂದು ನಂಬಿದ ಗಿರೀಶ್ ಯುವತಿಯ ಜತೆ ಹೋದ ನಂತರ ಇತರ ನಾಲ್ವರು ಆರೋಪಿಗಳು ಅವರನ್ನು ಸೇರಿಕೊಂಡಿದ್ದರು. ಪೂರ್ವ ನಿಯೋಜಿತ ಸಂಚಿನಂತೆ ಬಳಿಕ ಗಿರೀಶ್ ರನ್ನು ಇರಿದು ಕೊಲೆ ಮಾಡಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಕೊಲೆಯಾದ ಸಮಯದಲ್ಲಿ ಗಿರೀಶ್ ಬಳಿ 1.5 ಲಕ್ಷ ರು ಚಿನ್ನ ಹಾಗೂ 70,000 ನಗದು ಹಣ ಇತ್ತು ಎನ್ನಲಾಗಿದೆ. ಕೊಲೆಯಾದ ನಂತರ ಚಿನ್ನಾಭರಣ, ನಗದು ಕೂಡಾ ಮಾಯವಾಗಿದೆ. ಗಿರೀಶ್ ಬಳಿ ಇದ್ದ ಹಣವನ್ನು ದೋಚಲು ನತಾಶ ಆತನಿಗೆ ಅಗತ್ಯಕ್ಕಿಂತ ಹೆಚ್ಚಾಗಿ ಹತ್ತಿರವಾಗ ತೊಡಗಿದ್ದಳು. ಇದನ್ನು ನಿಜ ಎಂದು ನಂಬಿದ್ದ ಗಿರೀಶ್ ಆಕೆಯನ್ನು ಕರೆಸಿಕೊಂಡು ತನ್ನ ಸಾವಿಗೆ ಮುನ್ನುಡಿ ಬರೆದುಬಿಟ್ಟ ಎಂದು ತಿಳಿದು ಬಂದಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications