'ಏ ಮೇರೆ ವತನ್ ಕೆ ಲೋಗೋಂ'ಗೆ 50ರ ಪ್ರಾಯ!
ನವದೆಹಲಿ, ಜ.26: ದೇಶ ಗಣರಾಜ್ಯವಾಗಿ ಮಾರ್ಪಟ್ಟ 14 ವರ್ಷಗಳ ತರುವಾಯ ದಿವಿನಾದ ಜ. 27ರಂದು ದೀದಿ ಲತಾ ಮಂಗೇಶ್ಕರ್ ಅವರು ದೇಶವಾಸಿಗಳ ಹೃದಯಗಳಲ್ಲಿ ಶಾಶ್ವತವಾಗಿ ಉಳಿಯುವಂತಹ ಹಾಡೊಂದನ್ನು ಪ್ರಧಾನಿ ಜವಾಹರಲಾಲ ನೆಹರೂ ಅವರ ಸಮ್ಮುಖದಲ್ಲಿ ದೆಹಲಿಯ ಸ್ಟೇಡಿಯಂನಲ್ಲಿ ಸಾವಿರಾರು ಜನರೆದುರು ಸುಶ್ರಾವ್ಯವಾಗಿ ಹಾಡಿದ್ದರು. ಆ ಹಾಡಿಗೆ ಇಂದಿಗೆ ಸರಿಯಾಗಿ 50 ವರ್ಷ!
ಮುಂದೆ, ರಾಷ್ಟ್ರಗೀತೆಯಷ್ಟೇ ಜನಪ್ರಿಯವಾದ ಆ ಹಾಡು ಯಾವುದಪ್ಪಾ ಅಂದರೆ 'ಏ ಮೇರೆ ವತನ್ ಕೇ ಲೋಗೋಂ, ಝರಾ ಆಂಖ್ ಮೆ ಭರ್ಲೋ ಪಾನಿ...' ಈಗಲೂ ಅಷ್ಟೇ ಈ ಹಾಡು ಕಿವಿಗೆ ಬಿದ್ದಾಕ್ಷಣ ದೇಶಭಕ್ತರ ಕಣ್ಣಾಲಿಗಳು ತುಂಬಿಬರುತ್ತವೆ.

ಈ ಹಾಡು ಕೇಳಿ ಪ್ರಧಾನಿ ಜವಾಹರಲಾಲ್ ನೆಹರೂ ಅವರೂ ಸಹ ಕಣ್ಣೀರಾಗಿದ್ದರು. 1962ರ ಭಾರತ-ಚೀನಾ ಯುದ್ಧದಲ್ಲಿ ಸೋಲುಂಡು ನೋವನುಭವಿಸುತ್ತಿದ್ದ ಹೃದಯಗಳಲ್ಲಿ ಭರವಸೆಯ ಬೆಳಕನ್ನು ಮೂಡಿಸಿತ್ತು ಆ ಹಾಡು...
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಮಹಾಕವಿ ಪ್ರದೀಪ್ ಅವರು ಈ ಗೀತೆಯನ್ನು ರಚಿಸಿದ್ದರು. ಯುದ್ಧ ಮುಗಿದ ಕೆಲವೇ ದಿನಗಳ ಬಳಿಕ ಈ ಹಾಡು ರೂಪುಗೊಂಡಿತ್ತು. ಮುಂಬೈನ ಕಡಲ ತಡಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ 'ಏ ಮೇರೆ ವತನ್ ಕೆ ಲೋಗೋಂ' ಸಾಲುಗಳು ಪ್ರದೀಪ್ ಅವರಿಗೆ ಹೊಳೆದಿತ್ತಂತೆ.
ನೈಜ ದೇಶಭಕ್ತಿಯನ್ನು ಚಿಮ್ಮಿಸುವ ಈ ಹಾಡಿಗೆ ರಾಗ ಸಂಯೋಜನೆ ಮಾಡಿದ ಸಿ ರಾಮಚಂದ್ರ ಅವರಾಗಲಿ, ಸ್ವತಃ ಲತಾ ಅವರಾಗಲಿ, ಸಾಹಿತ್ಯಕಾರ ಪ್ರದೀಪ್ ಅವರಾಗಲಿ ಒಂದು ನಯಾ ಪೈಸೆಯನ್ನು ಪಡೆಯದೆ ದೇಶಭಕ್ತಿಯನ್ನು ಹೊಮ್ಮಿಸಿದ್ದರು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications