ಅಂತಿಮಘಟ್ಟ ಪ್ರವೇಶಿಸಿದ ಶೋಭಾ ರಾಜೀನಾಮೆ ಪ್ರಹಸನ

ಅಲ್ಲಿಗೆ ಶೋಭಾ ರಾಜೀನಾಮೆ ಪ್ರಹಸನ ಬಹುತೇಕ ಅಂತಿಮ ಘಟ್ಟ ಪ್ರವೇಶಿಸಿದ್ದು, ಕೆಜೆಪಿ ಅಧಿನಾಯಕಿಯಾಗಿ ಹೊರಹೊಮ್ಮುವ ದಿನಗಳು ದೂರವಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮೇಡಂ ಶೋಭಾ ಅವರು ಇತ್ತೀಚೆಗೆ ಆರ್ ಎಸ್ಎಸ್ ನಾಯಕರನ್ನು ಭೇಟಿ ಮಾಡಿ, 'ಸಂಪುಟದಲ್ಲಿ ಬಿಜೆಪಿ ನಾಯಕರು ತಮಗೆ ಸಹಕಾರ ತೋರುತ್ತಿಲ್ಲ. ಬಿಜೆಪಿಯಲ್ಲಿ ಈಗ ತನಗೆ ರಕ್ಷಣೆ ನೀಡುವವರು ಯಾರು? ಯಾರನ್ನು ನಂಬಿ ತಾನು ಬಿಜೆಪಿಯಲ್ಲಿ ಮುಂದುವರಿಯಬೇಕು?' ಎಂದು ಇಂಧನ ಸಚಿವೆ ಶೋಭಾ ಅಲವತ್ತುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
'ನೋಡಿ, ಪಕ್ಷ ಅಥವಾ ಸರಕಾರದಲ್ಲಿ ನನಗೆ ಯಾವುದೇ ಪದವಿ, ಅಧಿಕಾರ ಬೇಕಾಗಿಲ್ಲ. ಸಚಿವ ಸ್ಥಾನವೂ ಬೇಡ. ಆದರೆ, ನನಗೆ ರಕ್ಷಣೆ ಒದಗಿಸಬಹುದಾದ ಯಾವುದಾದರೂ ಒಬ್ಬ ನಾಯಕನ ಹೆಸರಿಸಿ' ಎಂದು ಶೋಭಾ ಪ್ರಶ್ನಿಸಿದ್ದಾರೆ. ಇದಕ್ಕೆ ಸಂಘ ಪರಿವಾರದವರು ನಿರುತ್ತರರಾದರು ಎಂದು ಹೇಳಲಾಗಿದೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷಕ್ಕೆ (KJP) ವಲಸೆ ಹೋಗಲು ಸಿದ್ಧತೆಗಳನ್ನು ನಡೆಸುತ್ತಿರುವ ಶಾಸಕರು, ಸಚಿವರೊಂದಿಗೆ ಸಂಘ ಪರಿವಾರದ ಮುಖಂಡರು ಮಾತುಕತೆ ನಡೆಸಿದ ವೇಳೆ ಶೋಭಾ ಕರಂದ್ಲಾಜೆ ಅವರು ಹೀಗೆ ತಮ್ಮ ದುಃಖದುಮ್ಮಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.












Click it and Unblock the Notifications