ಇನ್ಫೋಸಿಸ್ ಟೆಕ್ಕಿಗಳ ಭತ್ಯೆಗೆ ಕತ್ತರಿ ಪ್ರಯೋಗ

ಆರ್ಥಿಕ ಸಂಕಷ್ಟದಿಂದ ಹೊರ ಬರಲು ಪ್ರತಿ ತ್ರೈಮಾಸಿಕದಲ್ಲೂ ಇಂತಿಷ್ಟು ಉಳಿತಾಯ ಮಾಡಲು ಎಲ್ಲ ರೀತಿಯಲ್ಲೂ ಇನ್ಫೋಸಿಸ್ ಯತ್ನಿಸುತ್ತಿದೆ.
ದಿ ಹಿಂದೂ ವರದಿಯಂತೆ ಈಗಾಗಲೇ ಇನ್ಫೋಸಿಸ್ ನ ಬಿಪಿಒ ವಿಭಾಗ ತನ್ನ ಉದ್ಯೋಗಿಗಳ ಮೇಲೆ ಭತ್ಯೆ ಕಡಿತ ಪ್ರಯೋಗ ಮಾಡಿದೆ.
'Team building expense' ಹೆಸರಿನಲ್ಲಿ ತನ್ನ ಟೀಂ ಸದಸ್ಯರನ್ನು ಟೀಂ ಔಟಿಂಗ್ ಕರೆದುಕೊಂಡು ಹೋಗುತ್ತಿದ್ದ ಮ್ಯಾನೇಜರ್ ಗಳಿಗೆ ಸಿಗುತ್ತಿದ್ದ ಭತ್ಯೆಗೆ ಕತ್ತರಿ ಬಿದ್ದಿದೆ.
ಟೀಂ ಔಟಿಂಗ್ ನ ಪ್ರತಿ ಉದ್ಯೋಗಿಗೂ ಸುಮಾರು 50 ರು ಪ್ರತಿ ತಿಂಗಳಿನಂತೆ ದೊರೆಯುತ್ತಿತ್ತು ಎಂಬ ಮಾಹಿತಿ ಇದೆ. ಇದು ಟೀಂ ನಿಂದ ಟೀಂ ಗೆ ವ್ಯತ್ಯಾಸವಾಗುತ್ತಿತ್ತು. ಆದರೆ, ಈಗ ಈ ಭತ್ಯೆ ಯಾವ ಟೀಂಗೂ ಸಿಗುತ್ತಿಲ್ಲ.
ಮಾರುಕಟ್ಟೆ ತಜ್ಞರ ಪ್ರಕಾರ ಇನ್ಮುಂದೆ ಪ್ರತಿ ತ್ರೈಮಾಸಿಕದಲ್ಲೂ ಭತ್ಯೆಗಳ ಕಡಿತ ಮಾಮೂಲಿಯಾಗಲಿದೆ. ಆದರೆ, ಸಂಬಳ ಕಡಿತ ಇರುವುದಿಲ್ಲ. ಬದಲಿಗೆ ಸಂಬಳ ಏರಿಕೆಗೆ ತಡೆ ಹಾಕಲಾಗುತ್ತದೆ.
ಒಂದು ತ್ರೈಮಾಸಿಕದಲ್ಲಿ ಸುಮಾರು 30 ಲಕ್ಷ ರು ಹಾಗೂ ವಾರ್ಷಿಕವಾಗಿ ಸುಮಾರು 1.2 ಕೋಟಿ ರು ಉಳಿತಾಯ ಮಾಡುವ ಯೋಜನೆ ಇದೆ. ಇನ್ಫೋಸಿಸ್ ಬಿಪಿಒನಲ್ಲಿ ಸುಮಾರು 21,000 ಉದ್ಯೋಗಿಗಳಿದ್ದಾರೆ.
* ಸಾಫ್ಟ್ ವೇರ್ ದಿಗ್ಗಜ ಇನ್ಫೋಸಿಸ್ ಸಂಸ್ಥೆ ಪ್ರಸಕ್ತ ವರ್ಷದಲ್ಲಿ ತನ್ನ ಹೊರಗುತ್ತಿಗೆ ವಿಭಾಗದಲ್ಲಿ ಸುಮಾರು 8,000 ನೇಮಕಾತಿ ಮಾಡಲಿದೆ ಎಂದು ಸಂಸ್ಥೆ ಸಿಇಒ ಸ್ವಾಮಿ ಸ್ವಾಮಿನಾಥನ್ ಹೇಳಿದ್ದಾರೆ.
* 2012-13ರಲ್ಲಿ ನಡೆಯಲಿರುವ ನೇಮಕಾತಿ ಪ್ರಕ್ರಿಯೆಯಲ್ಲಿ ಶೇ 20ರಷ್ಟು ನೇಮಕಗಳು ಹಿರಿಯ ಹಾಗೂ ಮಧ್ಯಮ ಸ್ತರದ ಅಧಿಕಾರಿಗಳ ಮಟ್ಟದಲ್ಲಿ ಆಗಲಿದೆ
* 90ಕ್ಕೂ ಅಧಿಕ ಕ್ಲೈಂಟ್ ಗಳನ್ನು ಸಂಸ್ಥೆ ಹೊಂದಿದೆ.
* ಬೆಂಗಳೂರು, ಚೆನ್ನೈ, ಗುರ್ ಗಾಂವ್, ಜೈಪುರ, ಪುಣೆ, ಮಾಂಟೆರ್ರಿ (ಮೆಕ್ಸಿಕೋ), ಲೊಜ್ (ಪೋಲ್ಯಾಂಡ್), ಬ್ರಾನೊ (ಜೆಕ್ ರಿಪಬ್ಲಿಕ್), ಪ್ರೇಗ್ ( ಜೆಕ್ ರಿಪಬ್ಲಿಕ್), ಅಟ್ಲಾಂಟಾ (ಅಮೆರಿಕ), ಹ್ಯಾಂಗ್ ಜೋ (ಚೀನಾ), ಮನೀಲಾ (ಫಿಲಿಫೈನ್ಸ್), ಬೆಲೊ ಹಾರಿಜಾಂಟೆ (ಬ್ರೆಜಿಲ್) ನಲ್ಲಿ ಇನ್ಫೋಸಿಸ್ ತನ್ನ ಬಿಪಿಒ ಕೇಂದ್ರಗಳನ್ನು ಹೊಂದಿದೆ.
* ಇನ್ಫೋಸಿಸ್ ಸಂಸ್ಥೆಯ ಹೊರಗುತ್ತಿಗೆ ವಿಭಾಗದ ಮುಖ್ಯಸ್ಥ ರಿತೇಶ್ ಇದ್ನಾನಿ ಅವರು ತಮ್ಮ ಸಿಒಒ ಹುದ್ದೆಗೆ ಮಂಗಳವಾರ (ಮೇ.29, 2012) ರಾಜೀನಾಮೆ ನೀಡಿದ್ದು ದೊಡ್ಡ ಹೊಡೆತ.
ಇನ್ಫೋಸಿಸ್ ಬಿಪಿಒ ಈಗ ತನ್ನ 10ನೇ ಹುಟ್ಟುಹಬ್ಬ ಆಚರಣೆಯ ಸಂಭ್ರಮದಲ್ಲಿದೆ. ಇಂಡಿಯನ್ ಐಡಲ್ ಮಾದರಿಯಲ್ಲಿ ಬಿಪಿಒ ಐಡಲ್ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಇನ್ಫೋಸಿಸ್ ಮಾತೃ ಸಂಸ್ಥೆಗಿಂತ ಶೇ 16 ರಿಂದ 20 ರಷ್ಟು ಅಧಿಕ ಪ್ರಗತಿ ಸಾಧಿಸುವ ಉತ್ಸಾಹದಲ್ಲಿ ಬಿಪಿಒ ಸಂಸ್ಥೆ ಇದೆ. ಕಳೆದ ತ್ರೈಮಾಸಿಕದಲ್ಲಿ ಶೇ 4 ರಷ್ಟು ಮಾತ್ರ ಪ್ರಗತಿ ಸಾಧಿಸಿದೆ.
'ಸಂಬಳ ಕಡಿತ, ಪ್ರೊಮೊಷನ್ ಇಲ್ಲ, ಈಗ ಟೀಂ ಔಟಿಂಗ್ ಗೂ ಕಟ್ ಹೇಳಿದರೆ ಕಷ್ಟ ಕಷ್ಟ' ಎಂದು ಇನ್ಫಿ ಬಿಪಿಒ ಉದ್ಯೋಗಿಯೊಬ್ಬರು ಹಲುಬಿದ್ದಾರೆ. ನಿರೀಕ್ಷೆಯಂತೆ ಉದ್ಯೋಗಿಗಳನ್ನು ಖುಷಿ ಪಡಿಸಲು 10ನೇ ಹುಟ್ಟುಹಬ್ಬಕ್ಕೆ 10 ರು ಪ್ರತಿ ಷೇರಿನಂತೆ ವಿಶೇಷ ಡಿವಿಡೆಂಡ್ ಘೋಷಣೆಯಾಗಲಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications