Get Updates
Get notified of breaking news, exclusive insights, and must-see stories!

ರೇಪ್ ಗೆ ಯತ್ನಿಸಿದರೆ ಸಾಯಿಸ್ಬಿಡಿ: ಪೊಲೀಸ್ ಆಯುಕ್ತ

kill-molest-assaulter-hyderabad-dgp-dinesh-reddy
ಹೈದರಾಬಾದ್, ಜ.8: ರೇಪಿಸ್ಟುಗಳ ವಿರುದ್ಧ ಕಾನೂನಿನಲ್ಲೇ ಇಲ್ಲದ ಗೂಂಡಾ ಕಾಯಿದೆಯನ್ನು ಜಾರಿಗೊಳಿಸುವುದಾಗಿ ಬೆಂಗಳೂರು ಪೊಲೀಸ್ ಆಯುಕ್ತ ಮಿರ್ಜಿ ಬಾಲಿಶ ಹೇಳಿಕೆ ನೀಡಿದ್ದಾರೆ. ಆದರೆ ಅತ್ತ ಹೈದರಾಬಾದಿನ ಪೊಲೀಸ್ ಆಯುಕ್ತ ವಿ ದಿನೇಶ್ ರೆಡ್ಡಿ ಅವರು 'ಮಹಿಳೆಯರೇ, ನಿಮ್ಮ ಮೇಲೆ ಯಾರಾದರೂ ಆತ್ಯಾಚಾರಕ್ಕೆ ಯತ್ನಿಸಿದರೆ ನೇರವಾಗಿ ಗುಂಡಿಟ್ಟು ಸಾಯಿಸಿಬಿಡಿ' ಎಂದು ಹೇಳಿದ್ದಾರೆ.

'ಸ್ವಯಂ ರಕ್ಷಣೆಗಾಗಿ ಹಲ್ಲೆಕೋರನನ್ನು ಯಾವುದೇ ಮಹಿಳೆ ಸಾಯಿಸಬಹುದು. ಕೈಯಲ್ಲಿ ಗನ್ ಇದ್ದರೆ ಗುಂಡಿಟ್ಟು ಸಾಯಿಸಿ, ಇಲ್ಲಾಂದ್ರೆ ಬೇರೆ ಹೇಗಾದರೂ ಸಾಯಿಸಿ ಪರವಾಗಿಲ್ಲ. ನಾನಿದ್ದೇನೆ. ಅಂತಹ ಕೇಸುಗಳನ್ನು ಮನ್ನಾ ಮಾಡುತ್ತೇನೆ' ಎಂದು ಆಯುಕ್ತ ದಿನೇಶ್ ರೆಡ್ಡಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ನಿನ್ನೆ ಸೋಮವಾರ ಮಾಧಪುರದಲ್ಲಿ ಮಹಿಳಾ ಟೆಕ್ಕಿಗಳ ಜತೆ ಮಾತನಾಡುತ್ತಾ ಆಯುಕ್ತ ದಿನೇಶ್ ಈ ಫರ್ಮಾನು ಹೊರಡಿಸಿದ್ದಾರೆ. ದೆಹಲಿ ಗ್ಯಾಂಗ್ ರೇಪ್- ಹತ್ಯೆ ಬಳಿಕ ದಿನೇಶ್ ಅವರ ಈ ಹೇಳಿಕೆ ಅತ್ಯಂತ ಸಮಂಜಸವಾಗಿದೆ ಎಂದು ಅತ್ಯಾಚಾರ ವಿರೋಧಿಗಳು ಸ್ವಾಗತಿಸಬಹುದಾದರೂ ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆಯಾ? ಎಂದು ಕರ್ನಾಟಕದ ಹೆಣ್ಣುಮಕ್ಕಳೂ ಇದೀಗ ಕೇಳತೊಡಗಿದ್ದಾರೆ.

ಮಹಿಳೆಯರ ವಿರುದ್ಧ ಅಪರಾಧಗಳಿಗೆ ಕಡಿವಾಣ ಹಾಕಲು ಸರಕಾರ ಟೊಂಕಕಟ್ಟಿ ನಿಂತಿದೆ ಎಂದು ಆಯುಕ್ತ ದಿನೇಶ್ ತಿಳಿಸಿದ್ದಾರೆ. ಏನೇ ಆಗಲಿ, ಅತ್ಯಾಚಾರಿಗಳ ವಿರುದ್ಧ ಗೂಂಡಾ ಕಾಯಿದೆ ಜಾರಿಗೊಳಿಸಲು ಕರ್ನಾಟಕ ಗೃಹ ಸಚಿವ ಅಶೋಕ್ ಮೀನ-ಮೇಷಗಳನ್ನು ಎಣಿಸುತ್ತಿರುವಾಗ ಪಕ್ಕದ ಹೈದರಾಬಾದಿನ ಪೊಲೀಸ್ ಆಯುಕ್ತ ದಿನೇಶ್ ರೆಡ್ಡಿ ಭರ್ತಿ ಭರವಸೆ ನೀಡಿರುವುದು ಅಲ್ಲಿನ ಮಹಿಳೆಯರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+