ತಲೆಮರೆಸಿಕೊಂಡಿದ್ದ ಸಚಿವರ ಪುತ್ರ ಕೋರ್ಟಿಗೆ ಶರಣು

Union Minister Alagiri son Durai Dayanithi surrenders before Melur court
ಮಧುರೈ ಡಿ 14: ಗ್ರಾನೈಟ್ ಹಗರಣದ ಪ್ರಮುಖ ಆರೋಪಿ, ಕೇಂದ್ರ ಸಚಿವ ಎಂ ಕೆ ಅಳಗಿರಿ ಪುತ್ರ ದೊರೈ ದಯಾನಿಧಿ ಮೇಲೂರು ಕೋರ್ಟಿಗೆ ಇಂದು (ಡಿ 14) ಶರಣಾಗಿದ್ದಾರೆ.

ನಾಲ್ಕು ತಿಂಗಳಿನಿಂದ ತಲೆಮೆರೆಸಿಕೊಂಡಿದ್ದ ದೊರೈ ದಯಾನಿಧಿಗೆ ನಾಲ್ಕು ದಿನಗಳ ಹಿಂದೆಯಷ್ಟೇ ಮದ್ರಾಸ್ ಉಚ್ಚ ನ್ಯಾಯಾಲಯ ಷರತ್ತು ಬದ್ದ ಜಾಮೀನು ನೀಡಿತ್ತು.

ವಕೀಲರ ದೊಡ್ಡ ದಂಡು ಮತ್ತು ಡಿಎಂಕೆ ಕಾರ್ಯಕರ್ತರೊಂದಿಗೆ ಮೇಲೂರು ಕೋರ್ಟಿಗೆ ಆಗಮಿಸಿದ ದೊರೈ ಹತ್ತು ಸಾವಿರ ರೂಪಾಯಿ ಭದ್ರತಾ ಠೇವಣಿ ಕೋರ್ಟಿಗೆ ನೀಡಿದರು.

ನಾಳೆಯಿಂದ (ಡಿ 15) ಮುಂದಿನ ಆದೇಶದವರೆಗೆ ಮೇಲೂರು ಸಮೀಪವಿರುವ ಕೆಷವಾಳವುರ್ ಪೋಲೀಸ್ ಠಾಣೆಗೆ ಪ್ರತಿದಿನ ಹಾಜರಾಗುವಂತೆ ಕೋರ್ಟ್ ಆದೇಶ ನೀಡಿದೆ.

ದೊರೈ ದಯಾನಿಧಿ ಸೇರಿದಂತೆ 14 ಜನರ ಮೇಲೆ ಬಹುಕೋಟಿ ಗ್ರಾನೈಟ್ ಹಗರಣದ ಕೇಸ್ ದಾಖಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+